ಶಿಕ್ಷೆ

ವಿದ

ಶಿಕ್ಷೆ ಒಂದು ಗುಂಪು ಅಥವಾ ಒಬ್ಬ ವ್ಯಕ್ತಿಯ ಮೇಲೆ ಮಕ್ಕಳ ಶಿಸ್ತಿನಿಂದ ಕ್ರಿಮಿನಲ್ ಕಾನೂನಿನವರೆಗಿನ ಸನ್ನಿವೇಶಗಳಲ್ಲಿ ಒಂದು ಪ್ರಾಧಿಕಾರದಿಂದ ವಿಧಿಸಲಾದ ಅನಪೇಕ್ಷಿತ ಅಥವಾ ಅಹಿತಕರ ನಿರ್ಣಯದ ಹೇರಿಕೆ. ಶಿಕ್ಷೆಯನ್ನು ಅನಪೇಕ್ಷಿತ ಅಥವಾ ಅಸ್ವೀಕಾರ್ಯವೆಂದು ಪರಿಗಣಿಸಲಾದ ಒಂದು ನಿರ್ದಿಷ್ಟ ಕ್ರಿಯೆ ಅಥವಾ ವರ್ತನೆಗೆ ಪ್ರತಿಕ್ರಿಯೆ ಮತ್ತು ನಿರೋಧಕವಾಗಿ ನೀಡಲಾಗುತ್ತದೆ. ಸ್ವ ಅಪಾಯವನ್ನು ತಪ್ಪಿಸಲು ಮಗುವಿಗೆ ಷರತ್ತು ಹಾಕುವುದು, ಸಾಮಾಜಿಕ ಅನುಸರಣೆಯನ್ನು ಹೇರುವುದು (ವಿಶೇಷವಾಗಿ, ಕಡ್ಡಾಯ ಶಿಕ್ಷಣ ಅಥವಾ ಸೇನಾ ಶಿಸ್ತಿನ ಸನ್ನಿವೇಶಗಳಲ್ಲಿ), ರೂಢಿಗಳನ್ನು ಕಾಪಾಡುವುದು, ಭವಿಷ್ಯದ ಕೇಡುಗಳಿಂದ ರಕ್ಷಿಸುವುದು (ವಿಶೇಷವಾಗಿ, ಹಿಂಸಾತ್ಮಕ ಅಪರಾಧಗಳಿಂದ), ಕಾನೂನನ್ನು ಕಾಪಾಡುವುದು ಇದರ ಹಿಂದಿನ ವಾದವಾಗಿರಬಹುದು.[೧] ಶಿಕ್ಷೆಯು ಸ್ವಯಂವಿಹಿತವಾಗಿರಬಹುದು, ಉದಾ. ಧಾರ್ಮಿಕ ಹಿನ್ನೆಲೆಯಲ್ಲಿ ಸ್ವಯಂ ಕಶಾಪ್ರಹಾರ ಮತ್ತು ಸ್ವಯಂ ದಂಡನೆ, ಆದರೆ ಬಹುತೇಕ ವೇಳೆ ಸಾಮಾಜಿಕ ಒತ್ತಾಯದ ರೂಪವಾಗಿರುತ್ತದೆ.

ಅಹಿತಕರ ಹೇರಿಕೆಯು ದಂಡ, ನಿರ್ಬಂಧ, ಅಥವಾ ಸೆರೆವಾಸ, ಅಥವಾ ಏನಾದರೂ ಹಿತಕರ ಅಥವಾ ಅಪೇಕ್ಷಣೀಯವಾದದ್ದರ ನಿರಾಕರಣೆಯನ್ನು ಒಳಗೊಳ್ಳಬಹುದು. ಆ ಓರ್ವನು ವ್ಯಕ್ತಿ, ಅಥವಾ ಒಂದು ಪ್ರಾಣಿಯೂ ಆಗಿರಬಹುದು. ಪ್ರಾಧಿಕಾರವು ಒಂದು ಗುಂಪು ಅಥವಾ ಏಕ ವ್ಯಕ್ತಿಯಾಗಿರಬಹುದು, ಮತ್ತು ಶಿಕ್ಷೆಯನ್ನು ವಿಧ್ಯುಕ್ತವಾಗಿ ಕಾನೂನು ವ್ಯವಸ್ಥೆಯ ಅಡಿಯಲ್ಲಿ ಅಥವಾ ಅನೌಪಚಾರಿಕವಾಗಿ ಇತರ ಬಗೆಯ ಸಾಮಾಜಿಕ ಹಿನ್ನೆಲೆಗಳಲ್ಲಿ, ಉದಾ. ಕುಟುಂಬದೊಳಗೆ ನೀಡಬಹುದು. ಅಪರಾಧಗಳ ಶಿಕ್ಷೆಯ ಅಧ್ಯಯನ ಮತ್ತು ಆಚರಣೆಯನ್ನು, ವಿಶೇಷವಾಗಿ ಸೆರೆವಾಸಕ್ಕೆ ಅನ್ವಯಿಸುವುದನ್ನು, ದಂಡನಶಾಸ್ತ್ರವೆಂದು ಕರೆಯಲಾಗುತ್ತದೆ; ಶಿಕ್ಷೆಯ ಪ್ರಕ್ರಿಯೆಯನ್ನು ಸೌಮ್ಯೋಕ್ತಿಯಾಗಿ "ತಿದ್ದುಪಡಿ ಪ್ರಕ್ರಿಯೆ" ಎಂದು ಕರೆಯಲಾಗುತ್ತದೆ. ಶಿಕ್ಷೆಯಲ್ಲಿನ ಸಂಶೋಧನೆ ಹಲವುವೇಳೆ ತಡೆಗಟ್ಟುವಿಕೆಯಲ್ಲಿನ ಹೋಲುವ ಸಂಶೋಧನೆಯನ್ನು ಒಳಗೊಳ್ಳುತ್ತದೆ.

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ