ವೀರೇಶ್ವರ ಪುಣ್ಯಾಶ್ರಮ
ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ.
ಸ೦ಚಾರಿ ಸಂಗೀತ ಶಾಲೆ ನಾಡಿನುದ್ದಗಲಕ್ಕು ಸಂಚರಿಸುತ್ತಾ ಗದುಗಿಗೆ ಬಂದಿದೆ.ಎಲ್ಲ ಊರುಗಳಲ್ಲಿ ಉಳದುಕೊಂಡಂತೆ ಉಳಿದುಕೊಂಡಾಗ ಆಗಿನ ಕಾಲದ ಹಿರಿಯರಾದ ರಾವಬಹದ್ದುರ ಮಾನವಿಯವರು ಮಾಳೇಕೊಪ್ಪ ಮ. ೧೯೩೦ರಲ್ಲಿ ಸಮಯದಲ್ಲಿ ಬರಗಾಲ , ಬಗಾಲದಲ್ಲಿ ಪಂಚಾಕ್ಷರಿ ಗವಾಯಿಗಳು ಮತ್ತು ಅವರ ಶಿಷ್ಯರಿಗಾಗಿ ಮುಂದೆ ಬಂದು ನೆರವು ನೀಡಿದವರು ಗದುಗಿನ ಬಸರಿಗಿಡದ ವೀರಪ್ಪನವರು. ಇವರು ಗವಾಯಿಗಳಿಗಾಗಿ ಗದಗಿನಲ್ಲಿಯೇ ತಮ್ಮ ಜಾಗದಲ್ಲಿ ಒಂದು ತಗಡಿನ ಪಾಠಶಾಲೆ ಕಟ್ಟಿಸಿಕೊಟ್ಟು, ಧನ-ಧಾನ್ಯದ ಸಹಾಯವನ್ನು ಸಹ ನೀದಿದರು. ಈ ಸಂಗೀತಶಾಲೆಗೆ ಗವಾಯಿಗಳು “ ಶ್ರೀ ವೀರೇಶ್ವರ ಪುಣ್ಯಾಶ್ರಮ” ಎಂದೇ ಹೆಸರಿಟ್ಟರು.
ದಾನಿ
ಗದುಗಿನ ಬಸರಿಗಿಡದ ವೀರಪ್ಪನವರು. ಇವರು ಗವಾಯಿಗಳಿಗಾಗಿ ಗದಗಿನಲ್ಲಿಯೇ ತಮ್ಮ ಜಾಗದಲ್ಲಿ ಈಗಿನ ಪಂಚಾಕ್ಷರಿ ನಗರಒಂದು ತಗಡಿನ ಪಾಠಶಾಲೆ ಕಟ್ಟಿಸಿಕೊಟ್ಟರು.
ಪೀಠಾಧಿಪತಿಗಳು
ಪರಂಪರೆ
ಗದುಗಿನ ವೀರೇಶ್ವರ ಪುಣ್ಯಾಶ್ರಮ ಸುಮಾರು ಆರುವರೆ ದಶಕಗಳಿಂದ ಆ ನಾಮದ ಬಲದಿಂದಲೇ ಉತ್ತುಂಗ ಸ್ಥಿತಿ ಪ್ರಜ್ವಲಿಸಿತ್ತು, ಅಂಧ-ಅನಾಥರಿಗೆ ತೃಪ್ತಿ ದೊರಕಿತ್ತು. ಅಂತಹ ಚೇತನರಾಗಿದ್ದವರು ಪಂಚಾಕ್ಷರಿ ಗವಾಯಿಗಳು ಪುಟ್ಟರಾಜ ಗವಾಯಿಗಳು.ಈಗ ವೀರೇಶ್ವರ ಪುಣ್ಯಾಶ್ರಮ ಪುಟ್ಟರಾಜ ಗವಾಯಿಗಳ ಮಾರ್ಗದರ್ಶನದಲ್ಲಿ ಸುಮಾರು ಏಳು ದಶಕಗಳ ಕಾಲ ವಿಕಲಚೇತನರ ಬಾಳಿಗೆ ಬೆಳಕಾಗಿದೆ.
ಆರಂಭ
೧೯೩೩ ರಲ್ಲಿ ವೀರೇಶ್ವರ ಪುಣ್ಯಾಶ್ರಮ ಪ್ರಾರಂಭವಾಯಿತು.
ದಾಸೋಹ ವಸತಿ
ಅಂಧ, ಅನಾಥ, ಅಂಗವಿಕಲರಾದ ಸುಮಾರು ೬೦೦ ಮಕ್ಕಳಿಗೆ ನಿತ್ಯ ತ್ರಿವಿಧ ದಾಸೋಹ.
ಕಾರ್ಯಗಳು
ಬೆಳಿಗ್ಗೆ ಹಾಗೂ ಸಂಜೆ ಸುಮಾರು ೪ ತಾಸು ಮಕ್ಕಳಿಗೆ ಪಾಠ. ಭಕ್ತರಿಗೆ ಪುರಾಣ ಪಠಣ, ಪೌರಾಣಿಕ ನಾಟಕಗಳನ್ನು ಉಕ್ತ ಲೇಖನವಾಗಿಸಲು ಮಾರ್ಗದರ್ಶನ. ಆಶ್ರಮಕ್ಕೆ ಬಂದ ಭಕ್ತಾದಿಗಳ ಕುಶಲೋಪರಿ ವಿಚಾರಣೆ.
ವೀರೇಶ್ವರ ಪುಣ್ಯಾಶ್ರಮ ಆಸ್ತಿ
ಹಾಗೂ ಹಾನಗಲ್ ಕುಮಾರಸ್ವಾಮಿಗಳು ನೀಡಿದ ದಂಡ ಮತ್ತು ಜೋಳಿಗೆ. ಲಕ್ಷಾಂತರ ಭಕ್ತರು, ಸಾವಿರಾರು ಅಭಿಮಾನಿಗಳು, ಆಶ್ರಮದ ಸಾವಿರಾರು ವಿದ್ಯಾರ್ಥಿಗಳು, ಆಶ್ರಮದಲ್ಲಿ ಕಲಿತು ಹೋಗಿ ಇಂದು ನಾಡಿನ ರಾಯಭಾರಿಗಳಾಗಿರುವ ಸಂಗೀತ ದಿಗ್ಗಜರು.
ಭಕ್ತರ ಸಹಾಯ
ರೋಟರಿ ಸಹಾಯ
ಸರ್ಕಾರದ ಸಹಾಯ
ಇವನ್ನೂ ನೋಡಿ
ಚಲನಚಿತ್ರ
ಚಿತ್ರ ಗ್ಯಾಲರಿ
ಪುಟ್ಟರಾಜ ಗವಾಯಿ ಚಿತ್ರ ಗ್ಯಾಲರಿ
ಇತ್ತೀಚಿನ ವರ್ಷಗಳಲ್ಲಿ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳ ಪಟ್ಟಿ ಇಂತಿದೆ.
ಹೆಸರು | ಸೇವೆ ಸಲ್ಲಿಸಿದ ವರ್ಷಗಳು | ಹುಟ್ಟಿದ ಊರು | ಪೂರ್ವಾಶ್ರಮದ ಹೆಸರು |
---|---|---|---|
ಪಂಚಾಕ್ಷರಿ ಗವಾಯಿಗಳು | ೧೯೧೪-೧೯೪೪ | ಕಾಡಶೆಟ್ಟಿಹಳ್ಳಿ | ವೀರೇಶ್ವರ ಪುಣ್ಯಾಶ್ರಮ |
ಪುಟ್ಟರಾಜ ಗವಾಯಿಗಳು | ೧೯೪೪-೨೦೧೦ | ವೆಂಕಟಾಪುರ | ವೀರೇಶ್ವರ ಪುಣ್ಯಾಶ್ರಮ |
ಕಲ್ಲಯ್ಯಜ್ಜನವರು | ೨೦೧೦- | ಕಲ್ಲೂರು | ವೀರೇಶ್ವರ ಪುಣ್ಯಾಶ್ರಮ |