ಲತಾ ರಾಜಶೇಖರ್
- ಲೇಖನ
- ಚರ್ಚೆ
ಡಾ. ಲತಾ ರಾಜಶೇಖರ್ | |
---|---|
![]() ಡಾ. ಲತಾ ರಾಜಶೇಖರ್ | |
ಜನನ | 1954 ಜೂನ್ 2 ಅಂಬಿಗರಹಳ್ಳಿ, ಕೆ ಆರ್ ಪೇಟೆ ತಾಲ್ಲೂಕು, ಮಂಡ್ಯ ಜಿಲ್ಲೆ |
ವೃತ್ತಿ | ಕವಯತ್ರಿ, ಲೇಖಕಿ. |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಮೈಸೂರು ವಿಶ್ವವಿದ್ಯಾನಿಲಯ |
ಕಾಲ | 20ನೆಯ ಶತಮಾನ |
ಪ್ರಕಾರ/ಶೈಲಿ | ಸಣ್ಣಕತೆ, ಕವಿತೆ, ವಿಮರ್ಶೆ, ಮಹಾಕಾವ್ಯ |
ವಿಷಯ | ವಿಶ್ವಶಾಂತಿ, ಪ್ರಕೃತಿ, ಅಧ್ಯಾತ್ಮ, ವಿಚಾರ |
ಸಾಹಿತ್ಯ ಚಳುವಳಿ | ನವೋದಯ |
ಬಾಳ ಸಂಗಾತಿ | ಡಾ. ರಾಜಶೇಖರ್ |
ಮಕ್ಕಳು | 3 |
ಡಾ. ಲತಾ ರಾಜಶೇಖರ ಅವರು ‘ಬುದ್ಧ ಮಹಾದರ್ಶನ’, ‘ಯೇಸು ಮಹಾದರ್ಶನ’, ‘ಬಸವ ಮಹಾದರ್ಶನ’, ‘ಮಹಾವೀರ ಮಹಾದರ್ಶನ’, ’ರಾಮ ಮಹಾದರ್ಶನ’ ಎಂಬ ಐದು ಮಹಾಕಾವ್ಯಗಳನ್ನು ರಚಿಸಿದ್ದಾರೆ.[೧] ಲತಾರವರ ಸಾಧನೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ಲತಾ ಅವರು ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿಯಲ್ಲಿ 1954 ಜೂನ್ 2 ರಂದು ಎಂ. ಕೃಷ್ಣೇಗೌಡ ಮತ್ತು ಕೆ. ಎಸ್. ಕಾವೇರಮ್ಮ ದಂಪತಿಗಳ ಪುತ್ರಿಯಾಗಿ ಜನಿಸಿದರು. ಉನ್ನತ ಶಿಕ್ಷಣದಲ್ಲಿ ಎಂ. ಎ. ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರು. ಇವರು ಮೈಸೂರು ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ. ಮುಗಿಸಿ ಡಾಕ್ಟರೇಟ್ ಪದವಿಗೆ ಪಡೆದರು. ‘ಕೋಗಿಲೆ ಕೂಗಿದಂತೆ’ ಮೊದಲ ಕವನ ಸಂಕಲನಕ್ಕೆ ಮಂಗಳಾ ಕಲಾವೇದಿಕೆಯ ಕುವೆಂಪು ಸಾಹಿತ್ಯ ಪ್ರಶಸ್ತಿ ಹಾಗು ಡಾ. ರಾಜ್ ಸಾಹಿತ್ಯ ಪ್ರಶಸ್ತಿ ಲಭಿಸಿವೆ. ‘ಬೆಳಕಿನ ಹನಿಗಳು’ ಇವರ ೨ನೆಯ ಕವನ ಸಂಕಲನ. ಕೋಗಿಲೆ ಕೂಗಿದಂತೆ ಕ್ಯಾಸೆಟ್ ಬಿಡುಗಡೆಯಾಗಿದೆ.
ಡಾ. ಲತಾರವರ ಪತಿ ಡಾ. ರಾಜಶೇಖರ್ರವರು ಮೈಸೂರಿನ ಖ್ಯಾತ ಮಕ್ಕಳ ವೈದ್ಯರಾಗಿದ್ದು ಸದ್ಯ ಡಾ. ರಾಜಶೇಖರ್ ಮೆಡಿಕಲ್ ಫೌಂಡೇಷನ್ ಮತ್ತು ರೀಸರ್ಚ್ ಸೆಂಟರ್ನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
![]() | ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |