ರವಿ ಬೆಳಗೆರೆ

ಭಾರತೀಯ ಪತ್ರಕರ್ತ, ಲೇಖಕ, ಸಂಪಾದಕ

ರವಿ ಬೆಳಗೆರೆ (೧೫ ಮಾರ್ಚ್ ೧೯೫೮ - ೧೩ ನವೆಂಬರ್ ೨೦೨೦) ಕನ್ನಡದ ಪತ್ರಕರ್ತರು ಹಾಗೂ ಪತ್ರಿಕೋದ್ಯಮಿಯಾಗಿದ್ದರು. ಹಾಯ್ ಬೆಂಗಳೂರ್ ಎಂಬ ವಾರಪತ್ರಿಕೆ ಹಾಗೂ 'ಓ ಮನಸೇ' ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿದ್ದರು. ಅವರು ಕನ್ನಡ ಸಾಹಿತಿ, ಚಿತ್ರಕಥೆ ಬರಹಗಾರ, ಈ-ಟಿವಿ ಕನ್ನಡ ವಾಹಿನಿಯ ಜನಪ್ರಿಯ ಕ್ರೈಂ ಡೈರಿ ಕಾರ್ಯಕ್ರಮದ ನಿರೂಪಕರಾಗಿ ಹಾಗೂ ಜನಶ್ರೀ ವಾಹಿನಿಯ ಮುಖ್ಯಸ್ಥರಾಗಿ, ಕಾರ್ಯಕ್ರಮಗಳ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುವ ಮತ್ತು ಭಾಷಾಂತರಿಸಿರುವ ರವಿ ಬೆಳಗೆರೆ, ಭಾವನಾ ಪ್ರಕಾಶನ, ಭಾವನಾ ಆಡಿಯೋ ರೀಚ್ ಮತ್ತು ಪ್ರಾರ್ಥನಾ ಶಾಲೆಯ ಸಂಸ್ಥಾಪಕ. ರವಿ 'ಹಾಯ್ ಬೆಂಗಳೂರ್' ಪತ್ರಿಕೆ ಪ್ರಾರಂಭಿಸುವ ಮುನ್ನ ಕರ್ಮವೀರ, ಸಂಯುಕ್ತ ಕರ್ನಾಟಕ ಮತ್ತು ಕಸ್ತೂರಿ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು.[೧]

ರವಿ ಬೆಳಗೆರೆ
ಜನನ(೧೯೫೮-೦೩-೧೫)೧೫ ಮಾರ್ಚ್ ೧೯೫೮
ಬಳ್ಳಾರಿ
ಮರಣ13 November 2020(2020-11-13) (aged 62)
ಬೆಂಗಳೂರು, ಕರ್ನಾಟಕ
ವೃತ್ತಿಪತ್ರಿಕೋದ್ಯಮಿ, ಬರಹಗಾರ, ಕಾದಂಬರಿಕಾರ, ಪತ್ರಿಕೆ ಸಂಪಾದಕ, ನಟ ಮತ್ತು ಟಿವಿ ಕಾರ್ಯಕ್ರಮ ನಿರೂಪಕ.
ಪ್ರಕಾರ/ಶೈಲಿFiction, Non Fiction
ಪ್ರಮುಖ ಕೆಲಸ(ಗಳು)ಹಿಮಾಲಯನ್ ಬ್ಲಂಡರ್, ಭೀಮಾ ತೀರದ ಹಂತಕರು, ನೀ ಹಿಂಗ ನೋಡಬ್ಯಾಡ ನನ್ನ, ಡಿ ಕಂಪನಿ, ಇಂದಿರೆಯ ಮಗ ಸಂಜಯ, ಕಲ್ಪನಾ ವಿಲಾಸ

www.ravibelagere.com

ಜನನ–ಶಿಕ್ಷಣ–ವೃತ್ತಿಜೀವನ

ರವಿ ಬೆಳಗೆರೆ ಹುಟ್ಟಿದ್ದು 15 ಮಾರ್ಚ್ 1958 ಬಳ್ಳಾರಿಯಲ್ಲಿ. ಶಾಲಾಶಿಕ್ಷಣ ಬಳ್ಳಾರಿಯಲ್ಲಿ ಮುಗಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಮಾಡಿದರು. ಅವರು 1995ರಲ್ಲಿ ಜನಪ್ರಿಯ ಹಾಯ್ ಬೆಂಗಳೂರ್! ಟ್ಯಾಬ್ಲಾಯ್ಡ್‌ನ್ನು ಆರಂಭಿಸಿದ್ದರು.

ಕೃತಿಗಳು

ಕಥಾ ಸಂಕಲನ

  • ದಾರಿ, 1980
  • ಪಾ.ವೆಂ. ಹೇಳಿದ ಕಥೆ, 1995
  • ಒಟ್ಟಾರೆ ಕಥೆಗಳು, 2001

ಕಾದಂಬರಿ

  • ಗೋಲಿಬಾರ್, 1983
  • ಅರ್ತಿ, 1990
  • ಮಾಂಡೋವಿ, ಸೆಪ್ಟಂಬರ್ 1996
  • ಮಾಟಗಾತಿ, 1998
  • ಒಮರ್ಟಾ, ಜನವರಿ 1999
  • ಸರ್ಪ ಸಂಬಂಧ, ಜೂನ್ 2000
  • ಹೇಳಿ ಹೋಗು ಕಾರಣ, ಸೆಪ್ಟಂಬರ್ 2003
  • ನೀ ಹಿಂಗ ನೋಡಬ್ಯಾಡ ನನ್ನ, ಸೆಪ್ಟಂಬರ್ 2003
  • ಗಾಡ್‌ಫಾದರ್ , ಮಾರ್ಚ್ 2005
  • ಕಾಮರಾಜ ಮಾರ್ಗ, ನವೆಂಬರ್ 2010
  • ಹಿಮಾಗ್ನಿ, ೨೦೧೨

ಅನುವಾದ

  • ವಿವಾಹ, 1983
  • ನಕ್ಷತ್ರ ಜಾರಿದಾಗ, 1984
  • ಹಿಮಾಲಯನ್ ಬ್ಲಂಡರ್, ಸೆಪ್ಟಂಬರ್1999
  • ಕಂಪನಿ ಆಫ್ ವಿಮೆನ್, ಜನವರಿ 2000
  • ಟೈಂಪಾಸ್, ಜನವರಿ 2001
  • ರಾಜ ರಹಸ್ಯ, ನವೆಂಬರ್ 2002
  • ಹಂತಕಿ ಐ ಲವ್ ಯೂ, ಜನವರಿ 2007
  • ದಂಗೆಯ ದಿನಗಳು, ಮಾರ್ಚ್ 2008

ದೇಶ-ಇತಿಹಾಸ-ಯುದ್ಧ

  • ಕಾರ್ಗಿಲ್‌ನಲ್ಲಿ ಹದಿನೇಳು ದಿನ, ಸೆಪ್ಟಂಬರ್ 1999
  • ಬ್ಲ್ಯಾಕ್ ಫ್ರೈಡೆ (ಅನುವಾದ) ಆಗಸ್ಟ್ 2005
  • ರೇಷ್ಮೆ ರುಮಾಲು (ಅನುವಾದ) ಆಗಸ್ಟ್ 2007
  • ಇಂದಿರೆಯ ಮಗ ಸಂಜಯ, ಸೆಪ್ಟಂಬರ್ 2002
  • ಗಾಂಧೀ ಹತ್ಯೆ ಮತ್ತು ಗೋಡ್ಸೆ, ಸೆಪ್ಟಂಬರ್ 2003
  • ಡಯಾನಾ, ಜನವರಿ 2007
  • ನೀನಾ ಪಾಕಿಸ್ತಾನ
  • ಅವನೊಬ್ಬನಿದ್ದ ಗೋಡ್ಸೆ
  • ಮೇಜರ್ ಸಂದೀಪ್ ಹತ್ಯೆ
  • ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು
  • ಮುಸ್ಲಿಂ

ಜೀವನ ಕಥನ

  • ಪ್ಯಾಸಾ, 1991
  • ಪಾಪದ ಹೂವು ಫೂಲನ್, ಆಗಸ್ಟ್2001
  • ಸಂಜಯ, 2000
  • ಚಲಂ (ಅನುವಾದ) ಮಾರ್ಚ್ 2008

ಕ್ರೈಂ

ಹತ್ಯಾಕಥನ

  • ರಾಜೀವ್ ಹತ್ಯೆ ಏಕಾಯಿತು? ಹೇಗಾಯಿತು? 1991
  • ಮೈಸೂರಿನ ಸೀರಿಯಲ್ ಕಿಲ್ಲರ್ ರವೀಂದ್ರ ಪ್ರಸಾದ್, 1998
  • ರಂಗವಿಲಾಸ್ ಬಂಗಲೆಯ ಕೊಲೆಗಳು
  • ಬಾಬಾ ಬೆಡ್‌ರೂಂ ಹತ್ಯಾಕಾಂಡ (ತನಿಖಾ ವರದಿ) ಜನವರಿ 2007
  • ಪ್ರಮೋದ್ ಮಹಾಜನ್ ಹತ್ಯೆ (ಅನುವಾದ) ಅಕ್ಟೋಬರ್ 2012

ಭೂಗತ ಇತಿಹಾಸ

  • ಪಾಪಿಗಳ ಲೋಕದಲ್ಲಿ ಭಾಗ -1, 1995
  • ಪಾಪಿಗಳ ಲೋಕದಲ್ಲಿ ಭಾಗ 2, ಸೆಪ್ಟಂಬರ್ 1997
  • ಭೀಮಾ ತೀರದ ಹಂತಕರು, ಮೇ 2001
  • ಪಾಪಿಗಳ ಲೋಕದಲ್ಲಿ, 2005
  • ಡಿ ಕಂಪನಿ, 2008

ಬದುಕು

  • ಖಾಸ್‌ಬಾತ್ 96, 1997
  • ಖಾಸ್‌ಬಾತ್ 97, ಸೆಪ್ಟಂಬರ್ 1997
  • ಖಾಸ್‌ಬಾತ್ 98, ಸೆಪ್ಟಂಬರ್ 1998
  • ಖಾಸ್‌ಬಾತ್ 99, ಅಕ್ಟೋಬರ್ 2003
  • ಖಾಸ್‌ಬಾತ್ 2000, ಅಕ್ಟೋಬರ್ 2003
  • ಖಾಸ್‌ಬಾತ್ 2001, ಜನವರಿ 2007
  • ಖಾಸ್‌ಬಾತ್ 2002, ಜನವರಿ 2008
  • ಖಾಸ್‌ಬಾತ್ 2003

ಅಂಕಣ ಬರೆಹಗಳ ಸಂಗ್ರಹ

ಜೀವನ ಪಾಠ

  • ಬಾಟಮ್ ಐಟಮ್ ಭಾಗ 1, ಫೆಬ್ರವರಿ2002
  • ಬಾಟಮ್ ಐಟಮ್ 2, ಅಕ್ಟೋಬರ್2003
  • ಬಾಟಮ್ ಐಟಮ್ ಭಾಗ 3, ಡಿಸೆಂಬರ್ 2006
  • ಬಾಟಂ ಐಟಮ್ 4
  • ಬಾಟಂ ಐಟಮ್ 5

ಪ್ರೀತಿ ಪತ್ರಗಳು

  • ಲವಲವಿಕೆ -1, ಡಿಸೆಂಬರ್ 1998
  • ಲವಲವಿಕೆ -2, ಸೆಪ್ಟಂಬರ್ 2004
  • ಲವಲವಿಕೆ -3
  • ಲವಲವಿಕೆ -4

ಕವನ ಸಂಕಲನ

  • ಅಗ್ನಿಕಾವ್ಯ, 1983

ಇತರೆ

  • ಕೇಳಿ, ಜೂನ್ 2001
  • ಮನಸೇ ಆಡಿಯೋ ಸಿಡಿ ಜನವರಿ 2007
  • ಫಸ್ಟ್ ಹಾಫ್
  • ಅಮ್ಮ ಸಿಕ್ಕಿದ್ಲು, ೨೦೧೨
  • ಇದು ಜೀವ: ಇದುವೇ ಜೀವನ, ೨೦೧೨
  • ಏನಾಯ್ತು ಮಗಳೇ, ಡಿಸೆಂಬರ್ 2013
  • ಕಾಫಿ ಡೇ ಸಿದ್ಧಾರ್ಥ, ನವಂಬರ್ 2019
  • ಪುಲ್ವಾಮ, ಡಿಸೆಂಬರ್ 2019

ಸಿನೆಮಾ ನಟನೆ ಮತ್ತು ನಿರ್ಮಾಣ

  • 'ವಾರಸುದಾರ', 'ಗಂಡಹೆಂಡತಿ ಮತ್ತು ಬಾಯ್ ಫ್ರೆಂಡ್' ಎಂಬ ಕನ್ನಡ ಸಿನೆಮಾಗಳಲ್ಲಿ ನಟಿಸಿದ್ದಾರೆ.
  • 'ಮುಖ್ಯಮಂತ್ರಿ ಐ ಲವ್ ಯೂ' ಎಂಬ ಚಿತ್ರ ನಿರ್ಮಾಣ ಶುರುಮಾಡಿ ಅದನ್ನು ಕಾನೂನು ತೊಡಕಿನಿಂದ ನಿಲ್ಲಿಸಿದರು.

ಪ್ರಶಸ್ತಿಗಳು

ವರ್ಷಪ್ರಶಸ್ತಿಕೃತಿಟಿಪ್ಪಣಿ
1984ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿವಿವಾಹ(ಸೃಜನೇತರ)
1990ಮಾಸ್ತಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಂಧ್ಯ(ಕತೆ)
1997ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಪಾ.ವೆಂ. ಹೇಳಿದ ಕತೆ(ಸಣ್ಣ ಕತೆ)
2004ಶಿವರಾಮ ಕಾರಂತ ಪುರಸ್ಕಾರನೀ ಹಿಂಗ ನೋಡಬ್ಯಾಡ ನನ್ನ(ಕಾದಂಬರಿ)
2005ಕಂಪ್ಯೂಟರ್ ಎಕ್ಸಲೆನ್ಸಿ ಅವಾರ್ಡ್ಪ್ರಾರ್ಥನಾ ಶಾಲೆ(ಕೇಂದ್ರ ಸರ್ಕಾರ)
2008ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ[೨]ಜೀವಮಾನದ ಸಾಧನೆ
2011ರಾಜ್ಯೋತ್ಸವ ಪ್ರಶಸ್ತಿ[೩]ಕರ್ನಾಟಕ ಸರ್ಕಾರ

ಮರಣ

ಬೆಳಗೆರೆ ಅವರು ಬೆಂಗಳೂರಿನಲ್ಲಿ, ೧೩ ನವೆಂಬರ್ ೨೦೨೦ರ ಬೆಳಗಿನ ಜಾವ ೨:೩೦ರಲ್ಲಿ ಹೃದಯಾಘಾತದಿಂದ ಮರಣ ಹೊಂದಿದರು. ಅವರಿಗೆ ೬೨ ವರ್ಷ ವಯಸ್ಸಾಗಿತ್ತು.[೪][೫]

ಬಾಹ್ಯ ಸಂಪರ್ಕ ಕೊಂಡಿಗಳು

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ