ಮೆಗಾಸ್ತನೀಸ್

ಮೆಗಾಸ್ತನೀಸ್ - ಚಂದ್ರಗುಪ್ತಮೌರ್ಯನ ಆಸ್ಥಾನದಲ್ಲಿದ್ದ ಗ್ರೀಕ್ ರಾಯಭಾರಿ. ಇವನನ್ನು ಕಳಿಸಿದಾತ ಸೆಲ್ಯೂಕಸ್ ನೀಕೆಟರ್.

ಚಂದ್ರಗುಪ್ತನ ಆಸ್ಥಾನದಲ್ಲಿ ಈತ ಪ್ರತಿಷ್ಠಿತ ರಾಯಭಾರಿಯಾಗಿದ್ದ. ರಾಜನೊಂದಿಗೆ ಆಪ್ತನಾಗಿದ್ದ. ತಾನು ಭಾರತದಲ್ಲಿ ಕಂಡು ಭಾರತದಲ್ಲಿ ಕಂಡು ಕೇಳಿದ ಸಂಗತಿಗಳನ್ನು ಇಂಡಿಕಾ ಎಂಬ ಗ್ರಂಥದಲ್ಲಿ ಬರೆದ. ಈ ಗ್ರಂಥದ ಮೂಲ ಪ್ರತಿ ಈಗ ಲಭ್ಯವಿಲ್ಲದಿದ್ದರೂ ಅನಂತರದ ಇತಿಹಾಸಕಾರರಾದ ಅರಿಯನ್ ಮತ್ತು ಡಿಯೊಡರಸ್ ಮೊದಲದವರು ಈ ಕೃತಿಯ ಕೆಲವು ಭಾಗಗಳನ್ನು ಉಲ್ಲೇಖಿಸಿದ್ದಾರೆ. ಈ ಕೃತಿ ಮೌರ್ಯರ ಕಾಲದ ಜನಜೀವನ ಮತ್ತು ರಾಜಧರ್ಮ ತಿಳಿಯಲು ಮುಖ್ಯ ಆಕರ.

ಮೆಗಾಸ್ತನೀಸ್ ನೀಡಿರುವ ವಿವರಗಳಲ್ಲಿ ಕೆಲವು ಸಂಗತಿಗಳು ಹೀಗಿವೆ: ಯುದ್ಧಕಾಲದಲ್ಲಿ ಸಾಗುವಳಿಯಾದ ಭೂಮಿಯನ್ನು ಶತ್ರು ಸೈನ್ಯಗಳು ಹಾನಿ ಮಾಡುವುದಿಲ್ಲ. ಭೂಮಿಯಲ್ಲಿ ಬೆಳೆದ ಬೆಳೆಗೆ ಬೆಂಕಿಯಿಡುವ ಅಥವಾ ಮರಗಳನ್ನು ಕತ್ತರಿಸಿ ಹಾಕುವ ದುಷ್ಕ್ರತ್ಯಕ್ಕೆ ಶತ್ರುಗಳು ಕೈಹಾಕುವುದಿಲ್ಲ. ಹಿಂದೂಸ್ಥಾನದಲ್ಲಿ ಗಜದಳ ಸೈನ್ಯದ ಪ್ರಮುಖ ಅಂಗ. ಈ ದಳಕ್ಕೆ ಅಲೆಕ್ಸಾಂಡರ್ ಸಹ ಹೆದರಿದ್ದ. ಜನರಲ್ಲಿ ಶಿಸ್ತಿದೆ. ಕಳ್ಳತನ ಬಲು ಕಡಿಮೆ. ನ್ಯಾಯಾಲಯಗಳಿಗೆ ಹೋಗುವವರ ಸಂಖ್ಯೆ ವಿರಳ. ಪರಸ್ಪರ ನಂಬಿಕೆಯ ಮೇಲೆ ವ್ಯವಹಾರ ನಡೆಯುವುದು, ಸ್ತ್ರೀಯರೇ ರಾಜನ ಅಂಗರಕ್ಷರು.

ಮೆಗಾಸ್ತನೀಸ್ ಕೊಟ್ಟಿರುವ ವಿವರಗಳು ಅಂದಿನ ಇತಿಹಾಸ ರಚನೆಗೆ ಅಮೂಲ್ಯ ದಾಖಲೆ ಒದಗಿಸಿವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ