ಮಲೆಯೂರು ಗುರುಸ್ವಾಮಿ

ಮಲೆಯೂರು ಗುರುಸ್ವಾಮಿ ಕನ್ನಡ ಸಾಹಿತ್ಯದಲ್ಲಿ ವಿಮರ್ಶಕ, ಕಾದಂಬರಿಕಾರ ಮತ್ತು ಸಂಪಾದಕರಾಗಿ ಹಲವಾರು ಗ್ರಂಥಗಳನ್ನು ಸಂಪಾದನೆ ಮಾಡಿರುತ್ತಾರೆ.

ಪರಿಚಯ

  • ಮಲೆಯೂರು ಗುರುಸ್ವಾಮಿಯವರು ಚಾಮರಾಜನಗರ ಜಿಲ್ಲೆಯ ಮಲೆಯೂರು ಗ್ರಾಮದಲ್ಲಿ 1947ರಲ್ಲಿ ಹುಟ್ಟಿದವರು. ನಂತರ ಚಾಮರಾಜನಗರದಲ್ಲಿ ತಮ್ಮ ಮುಂದಿನ ಶಿಕ್ಷಣವನ್ನು ಮಾಡಿ ನಂತರ ಉನ್ನತ ಶಿಕ್ಷಣವನ್ನು ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಕನ್ನಡದಲ್ಲಿ ಉನ್ನತ ಶಿಕ್ಷಣ ಪದವಿಯನ್ನು ಪಡೆದು ನಂತರ ಜೆ.ಎಸ್.ಎಸ್. ಶಿಕ್ಷಣ ಸಂಸ್ಧೆಯಲ್ಲಿ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸಿ ಸದ್ಯ ನಿವೃತ್ತಿ ಜೀವನವನ್ನು ಮೈಸೂರು ನಗರದಲ್ಲಿ ಕಳೆಯುತ್ತಿದ್ದು.
  • ಕನ್ನಡ ಸಾಹಿತ್ಯದಲ್ಲಿ ಹಲವಾರು ಗ್ರಂಥಗಳನ್ನು ಸಂಪಾದನೆ ಮಾಡಿರುತ್ತಾರೆ ಹಲವು ಲೇಖನಗಳನ್ನು ಬರೆದಿರುತ್ತಾರೆ. ಇವರು ಬಹಳ ವರುಷ ಚಾಮರಾಜನಗರ ಮೈಸೂರು ನಂಜನಗೂಡುಗಳಲ್ಲಿ ಕೆಲಸ ಮಾಡಿರುತ್ತಾರೆ. ನಂಜನಗೂಡಿನಲ್ಲಿ ತಾಲ್ಲೂಕಿನ ಸಾಂಸ್ಕ್ರತಿಕ ಇತಿಹಾಸದ ಬಗ್ಗೆ ಜಂಗಮ ಎಂಬ ಕೃತಿಯನ್ನು ಸಂಪಾದನೆಯನ್ನು ಮಾಡಿ ಅಪಾರ ಅಬಿಮಾನಿಗಳನ್ನು ಪಡೆದಿದ್ದಾರೆ.
  • ವಿಶೇಷವೆಂದರೆ ಇವರು ಯಾವುದೇ ವಿಷಯದ ಬಗ್ಗೆ ಮಾತನಾಡಲು ಪ್ರಾರಂಭಿಸಿದರೆ ಆ ಮೂಲಕ ಜನರನ್ನು ಮಂತ್ರ ಮುಗ್ದಗೂಳಿಸುತ್ತಾರೆ. ಇವರ ಅನೇಕ ಶಿಷ್ಯರು ಕೂಡ ಗುರುವಿನ ರೀತಿಯಲ್ಲಿಯೇ ಅನೇಕ ಶಿಕ್ಷಣ ಸಂಸ್ಧೆಗಳಲ್ಲಿ ಉಪನ್ಯಾಸಕ ರಾಗಿರುತ್ತಾರೆ. ಪ್ರಸ್ತುತ ಅವರು ವಿಶ್ರಾಂತ ಪ್ರಾಧ್ಯಾಪಕರು.
  • ಮಲೆ ಮಹದೇಶ್ವರ ಬೆಟ್ಟದ ಜಾನಪದ ಸಂಶೋಧನಾ ಕೇಂದ್ರದ ಸದಸ್ಯರು, ಕರ್ನಾಟಕ ರಾಜ್ಯ ಗೆಜೆಟಿಯರ್ಸ್‌ದಸ್ಯರು, ಗ್ರಾಮ ವಿಶ್ವಕೋಶದ ಜಿಲ್ಲಾ ಸಂಪಾದಕರು. ಮೈಸೂರು ವಿಶ್ವವಿದ್ಯಾನಿಲಯದ ಬಸವ ಪೀಠದ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ್ದಾರೆ.

ಜನನ/ಜೀವನ

  • ಪ್ರೊ.ಮಲೆಯೂರು ಗುರುಸ್ವಾಮಿ ಅವರು 1947ರ ಆಗಸ್ಟ್ 1ರಂದು ಚಾಮರಾಜನಗರ ತಾಲೂಕಿನ ಮಲೆಯೂರು ಗ್ರಾಮದ ನಿವಾಸಿಗಳಾದ ಮರಮ್ಮ ಹಾಗು ಶಿವಣ್ಣ ದಂಪತಿಗಳ ಮಗನಾಗಿ ಜನಿಸಿದರು. ಪತ್ನಿ ಕೆ.ಎಸ್.ಜಯಂತಿ, ಪುತ್ರಿ ಜಿ.ಅನನ್ಯ ಇದ್ದಾರೆ. ಪ್ರಸ್ತುತ ಮೈಸೂರಿನ ಹಿನಕಲ್‌ನ ಆಶ್ರಮ ರಸ್ತೆಯ ಮಹಾಮನೆಯಲ್ಲಿ ವಾಸವಿರುವ ಗುರುಸ್ವಾಮಿ ಅವರು, ಎಂ.ಎ. ವ್ಯಾಸಂಗ ಮಾಡಿದ್ದು, ಜೆಎಸ್‌ಎಸ್ ಸಂಸ್ಥೆಯಲ್ಲಿ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
  • ಗುರುಸ್ವಾಮಿ ಅವರ ಸೃಜನಶೀಲ ಕೃತಿಗಳಾದ ಮಹಾಯಾತ್ರಿಕ, ಅಪ್ರತಿಮವೀರ, ಚರಿತ್ರೆಯ ಪುಟಕ್ಕೆ ಒಂದು ಟಿಪ್ಪಣಿ ಕಾದಂಬರಿಗಳು, ಮಾತೆಂಬುದು ಜ್ಯೋತಿರ್ಲಿಂಗ ವಚನ ಸಾಹಿತ್ಯ, ಶ್ರೀ ಕಾರ್ಯಸ್ವಾಮಿ ಮಠದ ಕ್ಷೇತ್ರ ಚರಿತ್ರೆ, ಶರಣ ಕಿರಣ ವ್ಯಕ್ತಿ ಚಿತ್ರ, ಪ್ರಭುಲಿಂಗ ಲೀಲೆ ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ.
  • ಮೂಡಲ ಸೀಮೆಯ ಕಥೆಗಳು, ಕಾಡಂಚಿನ ಕೋಗಿಲೆಗಳ ಕಲರವ, ಕಪಿಲಾ ನದಿಯ ಎಡಬಲದಿ, ಹೆಜ್ಜಿಗೆ ಅಕ್ಕ, ಛಂದೋನಿಜಗುಣ, ರಾಜಪಥ, ಸೋಮಸಿರಿ, ಶಿವಪ್ರಭೆ, ಶಿವಯೋಗ, ಹೊನ್ನಹೊಳೆ, ಶಿವಸಂಪದ ಸೇರಿದಂತೆ ಅನೇಕ ಅತ್ಯುತ್ತಮ ಕೃತಿಗಳನ್ನು ಮಲೆಯೂರು ಗುರುಸ್ವಾಮಿ ಅವರು ಸಂಪಾದಿಸಿದ್ದಾರೆ.[೧]

ಸಾಹಿತ್ಯ ಕೃತಿಗಳು

ಕಾದಂಬರಿ

  1. ಮಹಾಯಾತ್ರಿಕ,
  2. ಅಪ್ರತಿಮವೀರ,
  3. ಚರಿತ್ರೆಯ ಪುಟಕ್ಕೆ ಒಂದು ಟಿಪ್ಪಣಿ
  4. ಕಪಿಲೆ ಹರಿದಳು ಕಡಲಿಗೆ
  5. ಸಂಸ

ವಿಮರ್ಶಾ ಕೃತಿಗಳು

  1. ಮಾತೆಂಬುದು ಜ್ಯೋತಿರ್ಲಿಂಗ ವಚನ ಸಾಹಿತ್ಯ,
  2. ಶ್ರೀ ಕಾರ್ಯಸ್ವಾಮಿ ಮಠದ ಕ್ಷೇತ್ರ ಚರಿತ್ರೆ,
  3. ಶರಣ ಕಿರಣ ವ್ಯಕ್ತಿ ಚಿತ್ರ,
  4. ಪ್ರಭುಲಿಂಗ ಲೀಲೆ

ಸಂಪಾದನೆ

  1. ಮೂಡಲ ಸೀಮೆಯ ಕಥೆಗಳು,
  2. ಕಾಡಂಚಿನ ಕೋಗಿಲೆಗಳ ಕಲರವ,
  3. ಕಪಿಲಾ ನದಿಯ ಎಡಬಲದಿ,
  4. ಹೆಜ್ಜಿಗೆ ಅಕ್ಕ,
  5. ಛಂದೋನಿಜಗುಣ,
  6. ರಾಜಪಥ,
  7. ಸೋಮಸಿರಿ,
  8. ಶಿವಪ್ರಭೆ,
  9. ಶಿವಯೋಗ,
  10. ಹೊನ್ನಹೊಳೆ,
  11. ಶಿವಸಂಪದ

ಪ್ರಶಸ್ತಿ/ಪುರಸ್ಕಾರ

ಮಲೆಯೂರು ಗುರುಸ್ವಾಮಿ ಅವರ ಸಾಹಿತ್ಯ ಕೃಷಿಗಾಗಿ ಅನೇಕ ಪ್ರಶಸ್ತಿ/ ಪುರಸ್ಕಾರಗಳು ದೊರೆತಿವೆ. ಅವುಗಳೆಂದರೆ-

  1. ಮಹಾಮನ, ಮಹಾಕವಿ ಷಡಕ್ಷರ ದೇವ ಸ್ಮಾರಕ ಪ್ರಶಸ್ತಿ,
  2. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,
  3. ರೋಟರಿ ರಾಜ್ಯೋತ್ಸವ ಪ್ರಶಸ್ತಿ,
  4. ೨೦೧೦ - ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.
  5. ೨೦೧೪ - ಚಾಮರಾಜನಗರ ಜಿಲ್ಲಾ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಪ್ರೊ. ಮಲೆಯೂರು ಗುರುಸ್ವಾಮಿ ಆಯ್ಕೆಯಾಗಿದ್ದರು.
  6. 2017 ರ ಅಕ್ಟೋಬರ್ 22 ರಂದು 'ಮಲೆಯೂರು ನಮ್ಮವರು' ಮಗು 70' ಎಂಬ ಶೀರ್ಷಿಕೆಯಡಿ ಕಲಾಮಂದಿರ, ಮೈಸೂರುಇಲ್ಲಿ ಅಭಿನಂದನಾ ಕಾರ್ಯಕ್ರಮ.
🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ