ನಾಗತಿಹಳ್ಳಿ ಚಂದ್ರಶೇಖರ್

ಭಾರತೀಯ ಚಲನಚಿತ್ರ ನಿರ್ದೇಶಕರು, ನಿರ್ಮಾಪಕರು ಮತ್ತು ಬರಹಗಾರ

ಚಿತ್ರ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಬಹುಮುಖ ಪ್ರತಿಭೆ.ಕತೆಗಾರ, ಕಾದಂಬರಿಗಾರ ,ಅಂಕಣಕಾರ, ಅಧ್ಯಾಪಕ, ಸಂಘಟಕ, ಪ್ರಕಾಶಕ ಹೀಗೆ ಬಹುಮುಖ ವ್ಯಕ್ತಿತ್ವದ ಇವರು ಕನ್ನಡ ಸಾಹಿತ್ಯ, ಕನ್ನಡ ಸಮಾಜ ಮತ್ತು ಸಿನಿಮಾ ಕ್ಷೇತ್ರಗಳಲ್ಲಿ ಒಂದು ಮುಖ್ಯ ಹೆಸರು.

ನಾಗತಿಹಳ್ಳಿ ಚಂದ್ರಶೇಖರ್.
ಜನನ೧೯೫೮ ಆಗಸ್ಟ್ ೧೫
ವೃತ್ತಿ(ಗಳು)ಬರಹಗಾರ,ಪ್ರಕಾಶಕ ,ನಿರ್ಮಾಪಕ, ನಿರ್ದೇಶಕ
ಸಂಗಾತಿಶೋಭಾ
ಮಕ್ಕಳುಸಿಹಿ ನಾಗತಿಹಳ್ಳಿ , ಕನಸು ನಾಗತಿಹಳ್ಳಿ
ಜಾಲತಾಣhttp://www.nagathihalli.com/

ಜೀವನ

ಮಂಡ್ಯ ಜಿಲ್ಲೆಯ ನಾಗತಿಹಳ್ಳಿ ಎಂಬಲ್ಲಿ ಆಗಸ್ಟ್ ೧೫, ೧೯೫೮ರ ವರ್ಷದಲ್ಲಿ ಚಂದ್ರಶೇಖರ್ ಜನಿಸಿದರು. ತಂದೆ ತಿಮ್ಮಶೆಟ್ಟಿ ಗೌಡರು, ತಾಯಿ ಪಾರ್ವತಮ್ಮ. ಪ್ರಾರಂಭಿಕ ಶಿಕ್ಷಣವನ್ನು ತಮ್ಮ ಊರಾದ ನಾಗತಿಹಳ್ಳಿಯಲ್ಲಿ ಪಡೆದ ಅವರು ಮುಂದೆ ತಮ್ಮ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ನಡೆಸಿದರು. ಸ್ನಾತಕೋತ್ತರ ಪದವಿ ಕನ್ನಡ ಎಂ.ಎ ಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ೮ ಚಿನ್ನದ ಪದಕಗಳು ಮತ್ತು ೨ ನಗದು ಬಹುಮಾನಗಳೊಂದಿಗೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.

ತಮ್ಮ ಗ್ರಾಮವಾದ ನಾಗತಿಹಳ್ಳಿಯಲ್ಲಿ ‘ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ`ಯನ್ನು ಆರಂಭಿಸಿದರು.ಜೊತೆಗೆ ಪ್ರತಿ ಯುಗಾದಿಯ ಸಂದರ್ಭದಲ್ಲಿ `ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬಕ್ಕೆ ಸಹಾ ಚಾಲನೆ ನೀಡಿದರು ಈ ಮೂಲಕ ಗ್ರಾಮೀಣ ಜನರ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಕೆಲಸವನ್ನು ಆರಂಭಿಸಿದರು. ಈ ವೇದಿಕೆಯ ಮೂಲಕ ಗ್ರಾಮದಲ್ಲಿ ಸುಸಜ್ಜಿತ ಗ್ರಂಥಾಲಯ, ರಂಗಮಂದಿರ, ಕಂಪ್ಯೂಟರ್ ಕೇಂದ್ರಗಳನ್ನು, ಕೃಷಿ ಅಧ್ಯಯನ ಪ್ರವಾಸ, ಉಚಿತ ವೈದ್ಯಕೀಯ ಶಿಬಿರಗಳು, ಸಹಕಾರಿ ಸಂಘಗಳ ಸ್ಥಾಪನೆ ಮುಂತಾದ ಗ್ರಾಮಮುಖೀ ಚಿಂತನೆಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ ,. ಈ ವೇದಿಕೆಯು ಗ್ರಾಮೀಣರ ಆರ್ಥಿಕ ಸಮಸ್ಯೆಗಳಿಗೂ ಸ್ಪಂದಿಸುತ್ತಿರುವ ಸಂಗತಿ ನಾಗಮಂಗಲ ತಾಲ್ಲೂಕಿನ ಬಿದರಕೆರೆ, ಯರಗನಹಳ್ಳಿ, ಸಬ್ಬನಕುಪ್ಪೆ ಗ್ರಾಮಸ್ಥರಿಗೂ ಸ್ಫೂರ್ತಿ ನೀಡಿದೆ. ಈ ವೇದಿಕೆಯ ಆಶಯಗಳನ್ನೇ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರೂ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ.

ಪ್ರಾಧ್ಯಾಪಕ ಮತ್ತು ಬರಹಗಾರರಾಗಿ

ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸತೊಡಗಿದ ನಾಗತಿಹಳ್ಳಿ ಚಂದ್ರಶೇಖರರು ಕಥಾಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದರು. ಇನ್ನೂ ಎಂಟನೆಯ ತರಗತಿಯಲ್ಲಿ ಓದುತ್ತಿರುವಾಗಲೇ ಅವರು ‘ಆವರ್ತ’ ಎಂಬ ಕಥೆ ಬರೆದರು. ಇದುವರೆಗೆ ಕಥೆ, ಕಾದಂಬರಿ, ಪ್ರವಾಸ ಕಥನಗಳನ್ನು ಒಳಗೊಂಡ ಅವರ ಸುಮಾರು 40 ಪ್ರಕಟಣೆಗಳು ಬೆಳಕು ಕಂಡಿವೆ. ‘ಹದ್ದುಗಳು’, ‘ನನ್ನ ಪ್ರೀತಿಯ ಹುಡುಗನಿಗೆ’, ‘ಮಲೆನಾಡಿನ ಹುಡುಗಿ, ಬಯಲು ಸೀಮೆಯ ಹುಡುಗ’, ‘ಸನ್ನಿಧಿ’, ‘ಪ್ರೇಮ ಕಥಾ ಸಂಪುಟ’, ‘ಅಕಾಲ’, ‘ಛಿದ್ರ’ ನಾಗತಿಹಳ್ಳಿಯವರ ಪ್ರಸಿದ್ಧ ಕಥಾ ಸಂಕಲನ ಗಳು. ‘ಬಾ ನಲ್ಲೆ ಮಧುಚಂದ್ರಕೆ’, ‘ಚುಕ್ಕಿ ಚಂದ್ರಮರ ನಾಡಿನಲ್ಲಿ’, ‘ವಲಸೆ ಹಕ್ಕಿಯ ಹಾಡು’ ಅವರ ಕಾದಂಬರಿಗಳು. ‘ಆಯನ’, ‘ಅಮೆರಿಕ! ಅಮೇರಿಕಾ!!’, ‘ದಕ್ಷಿಣ ಧ್ರುವದಿಂ’, ‘ಹೊಳೆದಂಡೆ’ ಮುಂತಾದವು ಅವರ ಪ್ರವಾಸ ಕಥನಗಳು’. ‘ನನ್ನ ಪ್ರೀತಿಯ ಹುಡುಗಿಗೆ’ ಹಲವು ಸಂಪುಟಗಳಲ್ಲಿ ಮೂಡಿಬಂದಿರುವ ಅವರ ಆತ್ಮಕಥೆಯಾಗಿದೆ. ‘ಶತಮಾನದಂಚಿನಲ್ಲಿ’ ಅವರ ವಿವಿಧ ಲೇಖನಗಳ ಸಂಗ್ರಹ ಸಂಪುಟವಾಗಿದೆ.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕೃತಿಗಳು

  • ಹದ್ದುಗಳು
  • ನನ್ನ ಪ್ರೀತಿಯ ಹುಡುಗನಿಗೆ
  • ಮಲೆನಾಡಿನ ಹುಡುಗಿ, ಬಯಲುಸೀಮೆಯ ಹುಡುಗ
  • ಬಾ ನಲ್ಲೆ ಮಧುಚಂದ್ರಕೆ
  • ಚುಕ್ಕಿ ಚಂದ್ರಮರ ನಾಡಿನಲ್ಲಿ
  • ಸನ್ನಿಧಿ
  • ಅಕಾಲ
  • ಪ್ರೇಮ ಕಥಾ ಸಂಪುಟ
  • ವಲಸೆ ಹಕ್ಕಿಯ ಹಾಡು
  • ಅಮೇರಿಕಾ ! ಅಮೇರಿಕಾ !!
  • ಶತಮಾನದಂಚಿನಲಿ
  • ಛಿದ್ರ
  • ಕಥಾಯಾತ್ರೆ
  • ಅಯನ
  • ನನ್ನ ಗ್ರಹಿಕೆಯ ಅಮೆರಿಕಾ
  • ದಕ್ಷಿಣ ಧ್ರುವದಿಂ
  • ನನ್ನ ಗ್ರಹಿಕೆಯ ಈಜಿಪ್ಟ್
  • ನನ್ನ ಗ್ರಹಿಕೆಯ ಸಿಕ್ಕಿಂ
  • ನನ್ನ ಗ್ರಹಿಕೆಯ ನೇಪಾಳ
  • ನ್ನ ಗ್ರಹಿಕೆಯಅ ಲಸ್ಕ
  • ನನ್ನ ಪ್ರೀತಿಯ ಹುಡುಗಿಗೆ (ಸಂಪುಟ1,2,3,4,5,6)
  • ತರಳಬಾಳು ಹುಣ್ಣಿಮೆ
  • ಕಾಲಾತೀತ
  • ಅಮೃತಾಕ್ಷರ
  • ನಾನು ಹಡೆದವ್ವ
  • ಹೊಳೆದಂಡೆ ಅಂಕಣಮಾಲೆ (ನೋಟ 1,2,3,4)
  • ರೆಕ್ಕೆ ಬೇರು
  • ಉಂಡೂ ಹೋದ ಕೊಂಡೂ ಹೋದ
  • ಕೊಟ್ರೇಶಿ ಕನಸು
  • ಅಮೃತಧಾರೆ
  • ಈಗ ನಿಮ್ಮ ಮೆಚ್ಚಿನ ಚಿತ್ರಗೀತೆಗಳು
  • ಆತ್ಮಗೀತ

ದೃಶ್ಯ ಮಾಧ್ಯಮದಲ್ಲಿ

ಹೀಗೆ ಕಥೆ ಹೇಳುವುದರಲ್ಲಿ ಪ್ರೀತಿಯುಳ್ಳ ನಾಗತಿಹಳ್ಳಿ ಚಂದ್ರಶೇಖರರಿಗೆ ಕಥೆ ಹೇಳುವ ದೃಶ್ಯ ಮಾಧ್ಯಮದ ಕಡೆ ಕೂಡಾ ಒಲವು ಹರಿದು ಬಂತು.ಚಂದ್ರಶೇಖರ್ ಸಿನಿಮಾ ಉದ್ಯಮದಲ್ಲಿ ಕಾರ್ಯ ಪ್ರಾರಂಭಿಸಿದ್ದು 'ಕಾಡಿನ ಬೆಂಕಿ' ಚಿತ್ರದ ಸಂಭಾಷಣೆ ಬರೆಯುವುದರ ಮೂಲಕ. ತದನಂತರ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರ ಮಾತಾಡ್ ಮಾತಾಡು ಮಲ್ಲಿಗೆ ಚಿತ್ರ ೨೦೦೭ರಲ್ಲಿ ಕ್ಯಾನೆ ಚಿತ್ರೋತ್ಸವದಲ್ಲಿ ತೆರೆ ಕಂಡಿತ್ತು. ಇಂದು ಕನ್ನಡ ಚಿತ್ರರಂಗದಲ್ಲಿ ನಾಗತಿಹಳ್ಳಿ ಚಂದ್ರಶೇಖರರ ಚಿತ್ರಗಳು ವಿಶಿಷ್ಟ ಸ್ಥಾನ ಪಡೆದಿವೆ. ಅವರ ‘ಮಾತಾಡ್ ಮಾತಾಡು ಮಲ್ಲಿಗೆ’ ಸಾಗರಗಳನ್ನು ದಾಟಿ ಕೇನ್ಸ್ ಅಂತಹ ಪ್ರತಿಷ್ಟಿತ ಉತ್ಸವಗಳಲ್ಲಿ ಪ್ರದರ್ಶನ ಕಂಡಿತು. ತಮ್ಮ ಅಧ್ಯಾಪನದ ದಿನಗಳಲ್ಲಿ ಚಿತ್ರಕಥೆ, ಸಂಭಾಷಣೆ, ಗೀತ ರಚನೆಗಳಲ್ಲಿ ಭಾಗಿಯಾಗುತ್ತಿದ್ದ ನಾಗತಿಹಳ್ಳಿ ಚಂದ್ರಶೇಖರ್ ಅವರ ಕಾಯಕಗಳು ‘ಕಾಡಿನ ಬೆಂಕಿ’, ಸಂಕ್ರಾಂತಿ’, ಪ್ರಥಮ ಉಷಾ ಕಿರಣ’, ‘ಉದ್ಭವ’, ‘ಊರ್ವಶಿ’ ಮುಂತಾದ ಪ್ರಸಿದ್ಧ ಚಿತ್ರಗಳಿಗೆ ಮೆರುಗು ನೀಡಿತ್ತು.1991 ರಲ್ಲಿ ಮೂಡಿಬಂದ ‘ಉಂಡು ಹೋದ ಕೊಂಡು ಹೋದ’ ಚಿತ್ರದಿಂದ ಮೊದಲ್ಗೊಂಡಂತೆ, ‘ಬಾ ನಲ್ಲೆ ಮಧು ಚಂದ್ರಕೆ’, ‘ಕೊಟ್ರೇಶಿ ಕನಸು’, ‘ಅಮೆರಿಕ! ಅಮೇರಿಕಾ!!’, ‘ಹೂಮಳೆ’, ‘ನನ್ನ ಪ್ರೀತಿಯ ಹುಡುಗಿ’, ‘ಪ್ಯಾರಿಸ್ ಪ್ರಣಯ’, ‘ಅಮೃತಧಾರೆ’, ‘ಮಾತಾಡ್ ಮಾತಾಡು ಮಲ್ಲಿಗೆ’, ‘ಒಲವೆ ಜೀವನ ಲೆಖ್ಖಾಚಾರ’, ‘ನೂರೂ ಜನ್ಮಕು’ 'ಬ್ರೇಕಿಂಗ್ ನ್ಯೂಸ್', 'ಇಷ್ಟಕಾಮ್ಯ', 'ಇಂಡಿಯಾ VS ಇಂಗ್ಲೆಂಡ್'  ಮುಂತಾದ ಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ.

ಕಲಾತ್ಮಕ ಚಿತ್ರಗಳ ಚಿಂತನಾತ್ಮಕ ಗುಣ, ಸಾಮಾಜಿಕ ಚಿತ್ರಗಳ ಸ್ಪಂದನೆ, ಆಧುನಿಕ ಬದುಕಿನ ವೈವಿಧ್ಯಮಯ ವೈರುಧ್ಯ ಇವುಗಳ ಜೊತೆಗೆ ಹಿತಮಿತದ ಸಂಗೀತ, ದೃಶ್ಯ ವೈಭವ ಇವುಗಳನ್ನೆಲ್ಲ ನಾಗತಿಹಳ್ಳಿ ತಮ್ಮ ಸೃಜನಶೀಲ ಸ್ಪರ್ಶದಲ್ಲಿ ಬೆಳ್ಳಿತೆರೆಯಲ್ಲಿ ಅಭಿವ್ಯಕ್ತಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿನ ಹಲವಾರು ಪ್ರಶಸ್ತಿ, ಗಲ್ಲಾಪೆಟ್ಟಿಗೆಯ ಯಶಸ್ಸುಗಳು ಮತ್ತು ಸೋಲುಗಳನ್ನು ನಾಗತಿಹಳ್ಳಿ ಸಮಭಾವತ್ವದಲ್ಲಿ ಸ್ವೀಕರಿಸಿ ಮುನ್ನಡೆಯುತ್ತಿದ್ದಾರೆ. ಇಂದು ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧ ಸಂಗೀತ ನಿರ್ದೆಶಕರಾಗಿರುವ ಮನೋಮೂರ್ತಿ ಅವರನ್ನು ಅಮೇರಿಕದ ಸಾಫ್ಟ್ವೇರ್ ಕ್ಷೇತ್ರದಿಂದ ಕನ್ನಡ ಚಿತ್ರ ಸಂಗೀತಕ್ಕೆ ಕರೆತಂದ ಕೀರ್ತಿ ಕೂಡಾ ನಾಗತಿಹಳ್ಳಿ ಚಂದ್ರಶೇಖರ್ ಅವರದ್ದು,ಇದೇ ರೀತಿ  ಸ್ಟೀಫನ್ ಪ್ರಯೋಗ್  ಅವರನ್ನು ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.

ನಿರ್ದೇಶಿಸಿರುವ ಸಿನಿಮಾಗಳು

vaಚಿತ್ರ-- ವರ್ಷ
1ಉಂಡೂ ಹೋದ ಕೊಂಡೂ‌ ಹೋದ1991-
2ಬಾ ನಲ್ಲೆ ಮಧುಚಂದ್ರಕೆ1993-
3ಕೊಟ್ರೇಶಿ ಕನಸು1994-
4ಅಮೇರಿಕ ಅಮೇರಿಕ1996-
5ಹೂಮಳೆ1998-
6ನನ್ನ ಪ್ರೀತಿಯ ಹುಡುಗಿ2001-
7ಪ್ಯಾರಿಸ್ ಪ್ರಣಯ2002-
8ಅಮೃತಧಾರೆ2003-
9ಮಾತಾಡ್ ಮಾತಾಡು ಮಲ್ಲಿಗೆ2005
10ಒಲವೆ ಜೀವನ ಲೆಕ್ಕಾಚಾರ2007-
11ನೂರು ಜನ್ಮಕೂ2009
12ಬ್ರೇಕಿಂಗ್ ನ್ಯೂಸ್2012
13ಇಷ್ಟಕಾಮ್ಯ2016
14ಇಂಡಿಯಾ VS ಇಂಗ್ಲೆಂಡ್2019

ಗೀತರಚನೆ

#ಚಿತ್ರಚಿತ್ರಗೀತೆವರ್ಷಸಂಗೀತಹಾಡಿದವರು
ತಮ್ಮ ನಿರ್ದೇಶನದ ಚಿತ್ರಗಳಿಗೆ ನಾಗತಿಹಳ್ಳಿ ಚಂದ್ರಶೇಖರ ರಚಿಸಿರುವ ಗೀತೆಗಳು
1ಉಂಡೂಹೋದ ಕೊಂಡು ಹೋದಬಂದಾನೋ ಬಂದಾನೋ1991
2ಉಂಡೂಹೋದ ಕೊಂಡು ಹೋದಉಂಡೂ ಹೋದ ಕೊಂಡು ಹೋದ1991
3ಉಂಡೂಹೋದ ಕೊಂಡು ಹೋದಲೊಳಲೊಟ್ಟೆ ಈ ಬದುಕು1991-
4ಬಾ ನಲ್ಲೆ ಮಧು ಚಂದ್ರಕೆಬಂದಾಳೋ ಬಂದಾಳೋ1993
5ಬಾ ನಲ್ಲೆ ಮಧು ಚಂದ್ರಕೆಬಾ ನಲ್ಲೆ ಬಾ ನಲ್ಲೆ1993
6ಅಮೇರಿಕಾ ! ಅಮೇರಿಕಾ  !!ಹೇಗಿದೆ ನಮ್ ದೇಶ1996
7ಅಮೇರಿಕಾ ! ಅಮೇರಿಕಾ  !!ನೂರೂ ಜನ್ಮಕೂ1996
8ಅಮೇರಿಕಾ ! ಅಮೇರಿಕಾ  !!ಅ ಅ ಅ ಅ ಅಮೇರಿಕ1996
9ಹೂಮಳೆಹೂಮಳೆ ಹೂಮಳೆ1998
10ಹೂಮಳೆಹೆಣ್ಣೀಗೊಂದು ಗಂಡು ಬೇಕು1998
11ಹೂಮಳೆಝುಮ್ ಝುಮ್ ಝುಮ್  1998
12ಹೂಮಳೆಪ್ರೀತಿಯ ಗೆಲ್ಲಲು ರಾಜಾಧಿರಾಜರು1998
13ನನ್ನ ಪ್ರೀತಿಯ ಹುಡುಗಿಯಾರೋ ನೀನು2001
14ನನ್ನ ಪ್ರೀತಿಯ ಹುಡುಗಿಕಾರ್ ಕಾರ್ ಕಾರ್ ಕಾರ್2001
15ನನ್ನ ಪ್ರೀತಿಯ ಹುಡುಗಿಬಾ ಬಾರೋ ಬಾಳ ನೇಸರ2001
16ನನ್ನ ಪ್ರೀತಿಯ ಹುಡುಗಿಮೂಡಲ್ ಕುಣಿಗಲ್ ಕೆರೆ2001
17ನನ್ನ ಪ್ರೀತಿಯ ಹುಡುಗಿಅದೇಕೆ ಕೋತಿ ಮೂತಿ2001
18ಪ್ಯಾರಿಸ್ ಪ್ರಣಯ ಕೃಷ್ಣಾ ನೀ ಬೇಗನೆ ಬಾರೋ2002
19ಪ್ಯಾರಿಸ್ ಪ್ರಣಯ ರೋಮ್ ರೋಮ್2002
20ಪ್ಯಾರಿಸ್ ಪ್ರಣಯ ಆ ಪ್ಯಾರಿಸ್ಇಂದ ಈ ಹಳ್ಳಿಗ್ ಬಂದ2002
21ಪ್ಯಾರಿಸ್ ಪ್ರಣಯ ಆ ಬಿಳಿಯರ ದೇಶದ ಬಕರ2002
22ಪ್ಯಾರಿಸ್ ಪ್ರಣಯ ದಿಗ್ ದಿಗ್ ದಿಗಂತದಾಚೆಗೂ2002
23ಪ್ಯಾರಿಸ್ ಪ್ರಣಯ ಒನ್ ಫೂಟ್ ಡಿಸ್ಟೆನ್ಸ್2002
24ಅಮೃತಧಾರೆನೀ ಅಮೃತಧಾರೆ2003
25ಅಮೃತಧಾರೆಹುಡುಗ ಹುಡುಗ2003
26ಅಮೃತಧಾರೆಮನೆ ಕಟ್ಟಿ ನೋಡು2003
27ಅಮೃತಧಾರೆಗೆಳತೀ ಗೆಳತೀ2003
28ಅಮೃತಧಾರೆಭೂಮಿಯೆ ಹಾಸಿಗೆ2003
29ಮಾತಾಡ್ ಮಾತಾಡು ಮಲ್ಲಿಗೆಮಾತಾಡ್ ಮಾತಾಡು ಮಲ್ಲಿಗೆ2005
30ಮಾತಾಡ್ ಮಾತಾಡು ಮಲ್ಲಿಗೆಬಾರೋ ನಮ್ ತೇರಿಗೋಗಾನ2005
31ಮಾತಾಡ್ ಮಾತಾಡು ಮಲ್ಲಿಗೆಬಾರೋ ನನ್ನ ಶಾರುಖ್ ಖಾನು2005
32ಮಾತಾಡ್ ಮಾತಾಡು ಮಲ್ಲಿಗೆನಮ್ಮನೆ ಅರಮನೆ ನಾನೇನೆ ಮಹಾರಾಜ2005
33ಒಲವೇ ಜೀವನ ಲೆಕ್ಕಾಚಾರನನ್ನ ಪ್ರೀತಿಯ ಗೆಳೆಯ2007
34ಒಲವೇ ಜೀವನ ಲೆಕ್ಕಾಚಾರಬಾ ಬಾರೇ ಶಾಕುಂತಲೇ2007
35ಒಲವೇ ಜೀವನ ಲೆಕ್ಕಾಚಾರಬಾಳು ಮೂರೇ ದಿನ2007
36ಒಲವೇ ಜೀವನ ಲೆಕ್ಕಾಚಾರನೋಡಿ ಸ್ವಾಮಿ ನನ್ನಾ ಪ್ರೇಮ ಸುನಾಮಿ2007
37ನೂರು ಜನ್ಮಕೂಗೆಲ್ಲು ಬಾ ಗೆಲ್ಲು ಬಾ2009
38ನೂರು ಜನ್ಮಕೂಇವನು ಯಾರವ್ವ ?2009
39ನೂರು ಜನ್ಮಕೂಮನೆಯನ್ನು ಕಟ್ಟೋಣ2009
40ನೂರು ಜನ್ಮಕೂಬಂತು ಬಂತು ರಿಸಿಶನ್ ಬಂತು2009
41ನೂರು ಜನ್ಮಕೂನೂರೂ ಜನ್ಮಕೂ2009
42ಬ್ರೇಕಿಂಗ್ ನ್ಯೂಸ್ಹುಡುಗಿ ಬಾರೇ ಓಡಿ ಹೋಗೋಣ2012
43ಬ್ರೇಕಿಂಗ್ ನ್ಯೂಸ್ಸಂಬಂಧ ಸನಿರಿಸ  ಸ್ವಾತಂತ್ರ್ಯ  ಸನಿಸರಿ2012
44ಬ್ರೇಕಿಂಗ್ ನ್ಯೂಸ್ಸುಂದರಿ ಸುರ ಸುಂದರಿ  ಚಲಿಸುವ ಕಾದಂಬರಿ2012
45ಬ್ರೇಕಿಂಗ್ ನ್ಯೂಸ್ನನಗೆ ಬಂತು ನಮ್ಮನೆಗೆ ಬಂತು2012
46ಇಷ್ಟಕಾಮ್ಯನೀ ನನಗೋಸ್ಕರ ಬರೀ ನನಗೋಸ್ಕರ2016
47ಇಷ್ಟಕಾಮ್ಯನೀ ನನಗೋಸ್ಕರ ಬರೀ ನನಗೋಸ್ಕರ2016
48ಇಷ್ಟಕಾಮ್ಯಚಿಂತೆ ಯಾವುದು2016
49ಇಂಡಿಯಾ VS ಇಂಗ್ಲೆಂಡ್ಲವ್ವೇ ಇಲ್ಲದೇ ಗೆಳೆಯ ಲೈಫಲ್ ಏನಿದೇ2019
50ಇಂಡಿಯಾ VS ಇಂಗ್ಲೆಂಡ್ನಾ ಅಕ್ಷಾಂಶ ನೀ ರೇಖಾಂಶವು2019
51ಇಂಡಿಯಾ VS ಇಂಗ್ಲೆಂಡ್ನೋ ಮ್ಯಾಟರ್ ವೇರ್ ಯು ಕಮ್ ಫ್ರಮ್2019
52ಇಂಡಿಯಾ VS ಇಂಗ್ಲೆಂಡ್ಜೈ  ಜೈ ಜೈ ಜನಗಣಮನ2019
  ಸಮಕಾಲೀನ ನಿರ್ದೇಶಕರ ಚಿತ್ರಗಳಿಗೆ  ನಾಗತಿಹಳ್ಳಿ ಚಂದ್ರಶೇಖರ ಬರೆದ ಗೀತೆಗಳು
1ಕಾಡಿನ ಬೆಂಕಿನನ್ನ ಪ್ರೀತಿಯ ಹುಡುಗಿ ಬಾರೇ
2ಕಾಡಿನ ಬೆಂಕಿಋತುಮಾನ ಸಂಪುಟದಿ ಹೊಸ ಕಾವ್ಯ ಬರೆದವಳೆ
3ಸಂಕ್ರಾಂತಿದುಡಿದ ಜೀವದ ಬಾಳು ಸಿಡಿದ ನೋವಿನ ಗೂಡು
4ಪ್ರಥಮ ಉಷಾಕಿರಣಮರಳಿ ಬಾರೆನ್ನ ಕೋಗಿಲೆ
5ಮಧುಮಾಸಸ್ವಾತೀಯ ಮುತ್ತಾಗಿ ಕಣ್ಣ ಮುಂದೆ ಹೊಳೆಯುತಲಿರುವೆ
6ಉದ್ಭವನಮ್ಮೂರ ರಸ್ತೆ ಅಗಲ ಆಗುತ್ತಂತೆ
7ಉದ್ಭವದೇವರೆಲ್ಲಿ ಮನುಜನ ಸೃಷ್ಟಿಸಿದ
8ಉದ್ಭವಈ ಮೌನವೆ ಸವಿಯಾಗಿದೆ ಜಾಣೆ
9ಊರ್ವಶಿಝಲಲಲ ಝಲಲಲ ಝಲಲಲ ಝಲಲಲ ಧಾರೆ
10ಅರಗಿಣಿಕುಸುಮವು ನೀನು ಗಂಧವು ನಾನು
11ನಿಲುಕದ ನಕ್ಷತ್ರಬನ್ನೀ ಜಾಣರೆ ನಾವು ಹಾಡುವ ವನ್ಯಗೀತೆಗೆ ತಾಳ ಹಾಕುವ
12ತುಂಟಾಟಕಾತರ ಮನ ಪೂರ ಆತುರ ಉಕ್ಕಿದೆ ಬಾರಾ
13ಮನಸೆಲ್ಲಾ ನೀನೆಥಳ ಥಳ ಹೊಳೆಯುವ ಕನಸಿನ
14ಜೋಕ್ ಫಾಲ್ಸ್ಗಂಧವತಿ,ಈ ಪೃಥ್ವಿ ನಮ್ಮ ನೆಲ
15ಸಂತೋಷಈ ಬದುಕು ಸುಂದರ ಪಯಣ
16ಸಂತೋಷಕೋತಿ ಕೈಲಿ ಮಾಣಿಕ್ಯಾನಾ ,ಕರಡಿ ಕೈಲಿ ಮಾಂಗಲ್ಯಾನ
17ಸವಿ ಸವಿ ನೆನಪುಸವಿಯೋ ಸವಿಯು ಒಲವಾ ನೆನಪು
18ಶಿಶಿರವಿದ್ಯೆಗೆ ದಾಸನಾಗು ವಿಜ್ಞಾನಿಯಾಗು
19ಚೆಲುವೆಯೇ ನಿನ್ನ ನೋಡಲುಜನುಮದ ಜೋಡಿ ನನ್ ರಾಜಕುಮಾರ
20ಚೆಲುವೆಯೇ ನಿನ್ನ ನೋಡಲುಓ ಪ್ರಿಯತಮ ಪ್ರಿಯತಮ
21ಮೇಘ ವರ್ಷಿಣಿಹಿಮಗಿರಿ ಮೇಲೆ, ಶೃಂಗಾರ ಲೀಲೆ
22ನನ್ ಲೈಫ್ ನಲ್ಲಿನನ್ ಲೈಫ್ ಅಲ್ಲಿ ಜಾಲಿ ಜಾಲಿ ,ಆ ಸಖತ್ ಜಾಲಿ
23ತಾರಕಾಸುರಬೈರಾಗಿ ನಿಂಗೆ ಭೂಮ್ತಾಯಿ ಹಾಸಿಗೆ
24ನಟಭಯಂಕರಕಾಮ ಕ್ರೋಧ ಲೋಭಕೆ ಸೇಡು ಸೇರಿತೇ
25ಅಮಾನುಷಕಲಿಯುಗವೇ ಅಮಾನುಷ
26ದೇವಿಆ ಬ್ರಹ್ಮ ಖುಷಿಯಾದಾಗ ಏನು ಮಾಡಿದ ?
ಪರಿಸರ ಹಾಗೂ ಇತರೆ ಗೀತೆಗಳು
1ಪರಿಸರ ಗೀತೆಗಳುಗಿಡ ನೆಡಿ ಗಿಡ ನೆಡಿ
2ಪರಿಸರ ಗೀತೆಗಳುನಾನು ಹಡೆದವ್ವ
3ಪರಿಸರ ಗೀತೆಗಳುಹೃದಯಾಂತರಾಳದಲಿ
4ಪರಿಸರ ಗೀತೆಗಳುತಡವಾಗಿದೆ ಕನಸಿಗರೆ
5ಪರಿಸರ ಗೀತೆಗಳುಅಗೋ ಬಂದ ಅಣು ರಾಕ್ಷಸ
6ಪರಿಸರ ಗೀತೆಗಳುಕಾಡು ಕಡಿದವರ ಕಾಲು ಕಡೆಯಿರಿ
7ಕಾವೇರಿ ನದಿ ಗೀತೆಎಲೆ ತಾಯಿ ಕಾವೇರಿ ನೀ ಬರಿಯ ನೀರಲ್ಲ
8ಗ್ರಂಥಾಲಯ ಗೀತೆಗ್ರಂಥಾಲಯ ಇದು ಜ್ಞಾನಾಲಯ
9ಮಹಿಳಾ – ಆಯೋಗಕ್ಕಾಗಿಗಂಧರ್ವ ಕನ್ನಿಕೆ ಮೇನಕೆ ತಿಲೋತ್ತಮೆ

ನಿರ್ದೇಶಿಸಿರುವ ಧಾರಾವಾಹಿಗಳು

#ಧಾರಾವಾಹಿವರ್ಷ-ಕಿರುತೆರೆ ವಾಹಿನಿ
1ಬೆಳ್ಳಿ ಚುಕ್ಕಿ---
2ಅಪಾರ್ಟ್ಮೆಂಟ್---
3ಕಾವೇರಿ---
4ಪ್ರತಿಬಿಂಬ---
5ವಠಾರ---
6ಪುಣ್ಯ---
7ಒಲವೇ ನಮ್ಮ ಬದುಕು
8ನಿತ್ಯೋತ್ಸವ
9ನಡೆ ನುಡಿTalk Show
10ಇದೇ ಸತ್ಯTalk Show
11ಭಾಗ್ಯ  

ಪ್ರಶಸ್ತಿ,ಗೌರವಗಳು

ಸಾಹಿತ್ಯ ಕ್ಷೇತ್ರ:

  1. ೨೦೦೩ - ಶಿವಮೊಗ್ಗದ ಕರ್ನಾಟಕ ಸಂಘದಿಂದ  ಅಂಕಣ ಸಾಹಿತ್ಯಕ್ಕೆ ``ಹಾ.ಮಾ.ನಾ.’’ ಪ್ರಶಸ್ತಿ
  2. ೨೦೦೫ - ಧರ್ಮಸ್ಥಳದಲ್ಲಿ ೭೩ನೇ ಸರ್ವಧರ್ಮ ಸಮ್ಮೇಳನದ ಭಾಗವಾಗಿ `ಸಾಹಿತ್ಯ ಸಮ್ಮೇಳನ’ದ ಉದ್ಘಾಟಕ
  3. ೨೦೦೮ - ಆಳ್ವಾಸ್ ಮೂಡುಬಿದಿರೆಯಿಂದ `ನುಡಿಸಿರಿ’ ಪ್ರಶಸ್ತಿ
  4. ೨೦೧೦ - ಕರ್ನಾಟಕ ಸರ್ಕಾರದಿಂದ `ರಾಜ್ಯೋತ್ಸವ’ ಪ್ರಶಸ್ತಿ
  5. ೨೦೧೧ - ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ’ ಸಾಹಿತ್ಯ ಪ್ರಶಸ್ತಿ
  6. ೨೦೧೧ - ಮುಂಬೈನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಂಸ್ಕೃತಿಕ ಸಮ್ಮೇಳನದ ಅಧ್ಯಕ್ಷರು
  7. ೨೦೧೨ - ಮಂಗಳೂರಿನ `ಎಂ.ಆರ್.ಪಿ.ಎಲ್. ರಾಜ್ಯೋತ್ಸವ’ ಪ್ರಶಸ್ತಿ
  8. ೨೦೧೪ - ಕೀನ್ಯಾದಲ್ಲಿ ನಡೆದ `ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ’ದ ಅಧ್ಯಕ್ಷರು
  9. ೨೦೧೫ - ಮಂಡ್ಯದ `ಜಿಲ್ಲಾ ಸಾಹಿತ್ಯ ಸಮ್ಮೇಳನ’ದ ಅಧ್ಯಕ್ಷರು
  10. ೨೦೧೫ - ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್
  11. ೨೦೧೭- ಮೂಡುಬಿದಿರೆಯ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನದ ಸರ್ವಾಧ್ಯಕ್ಷರು

ಸಿನಿಮಾ ಕ್ಷೇತ್ರ:

  1. ಸಾವಿರದೊಂದು ಸಂಚಿಕೆಗಳ ಪ್ರಥಮ ಸುದೀರ್ಘ ಕಿರುತೆರೆಯ ಧಾರಾವಾಹಿ `ವಠಾರ’ ಸೇರಿದಂತೆ ವಿವಿಧ ವಾಹಿನಿಗಳಿಗೆ ಹತ್ತು ಮೆಗಾ ಧಾರಾವಾಹಿಗಳ ಪ್ರಧಾನ ನಿರ್ದೇಶನ. `ಪ್ರತಿಬಿಂಬ’ ವಿದೇಶದಲ್ಲಿ ಚಿತ್ರೀಕರಣಗೊಂಡ ಕನ್ನಡದ ಪ್ರಥಮ ಧಾರಾವಾಹಿ
  2. ೨೦೦೭- ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಿತಿಯ ಅಧ್ಯಕ್ಷರು
  3. ೨೦೧೩- ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ತೀರ್ಪುಗಾರ ಸಮಿತಿಯ ಸದಸ್ಯರು
  4. ೨೦೧೩, ೨೦೧೪, ೨೦೧೫- ರೇಡಿಯೋ ಮಿರ್ಚಿ ಸೌತ್ ಮ್ಯೂಸಿಕ್ ಪ್ರಶಸ್ತಿಯ ತೀರ್ಪುಗಾರ ಸಮಿತಿಯ ಸದಸ್ಯರು
  5. ೨೦೧೬- ಕರ್ನಾಟಕ ಸರ್ಕಾರದಿಂದ ಪ್ರತಿಷ್ಠಿತ `ಪುಟ್ಟಣ್ಣ ಕಣಗಾಲ್ ಜೀವಮಾನ ಸಾಧನೆ’ ಪ್ರಶಸ್ತಿ
  6. ೨೦೧೮- ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು
  7. ೨೦೧೯- ಭಾರತೀಯ ಚಲನಚಿತ್ರಗಳ `ಆಸ್ಕರ್’ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರು.


ಕಳೆದ ಒಂದು ದಶಕದಿಂದ ಬೆಂಗಳೂರಿನಲ್ಲಿ ತಮ್ಮ `ಟೆಂಟ್ ಸಿನಿಮಾ’ ಶಾಲೆಯ ಮುಖಾಂತರ ಹಲವಾರು ಹೊಸ ಕಲಾವಿದರು ಮತ್ತು ತಂತ್ರಜ್ಞರನ್ನು ರೂಪಿಸಿ ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರಕ್ಕೆ ಹೊಸ ಪ್ರತಿಭೆಗಳನ್ನು ನೀಡುತ್ತಿದ್ದಾರೆ

ರಾಷ್ಟ್ರ ಪ್ರಶಸ್ತಿ:

ಕೊಟ್ರೇಶಿ ಕನಸು

ಅಮೇರಿಕಾ ! ಅಮೇರಿಕಾ !!

ಹೂಮಳೆ

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು

ಅತ್ಯುತ್ತಮ ಚಿತ್ರ

1994-95: ಕೊಟ್ರೇಶಿ ಕನಸು (ಅತ್ಯುತ್ತಮ ಸಾಮಾಜಿಕ ಚಿತ್ರ)

1996-97: ಅಮೆರಿಕಾ ಅಮೆರಿಕಾ (ಪ್ರಥಮ ಅತ್ಯುತ್ತಮ ಚಿತ್ರ)

1998-99: ಹೂಮಳೆ (ದ್ವಿತೀಯ ಅತ್ಯುತ್ತಮ ಚಿತ್ರ)

2005-06: ಅಮೃತಧಾರೆ (ತೃತೀಯ ಅತ್ಯುತ್ತಮ ಚಿತ್ರ)

2007-08: ಮಾತಾಡ್ ಮಾತಾಡು ಮಲ್ಲಿಗೆ (ತೃತೀಯ ಅತ್ಯುತ್ತಮ ಚಿತ್ರ)

ಅತ್ಯುತ್ತಮ ಕಥಾಲೇಖಕ

1988-89: ಸಂಕ್ರಾಂತಿ

1991-92: ಉಂಡೂ ಹೋದ ಕೊಂಡೂ ಹೋದ

1996-97 : ಅಮೆರಿಕಾ ಅಮೆರಿಕಾ

ಅತ್ಯುತ್ತಮ ಗೀತರಚನೆ

2002-03: ಪ್ಯಾರಿಸ್ ಪ್ರಣಯ೨೦೧೯ :[೧]

ಫಿಲಂ ಫೇರ್ ಪ್ರಶಸ್ತಿ

ನನ್ನ ಪ್ರೀತಿಯ ಹುಡುಗಿ

ಪ್ಯಾರಿಸ್ ಪ್ರಣಯ


ಹೊರಗಿನ ಸಂಪರ್ಕಗಳು

ಉಲ್ಲೇಖಗಳು



🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ