ದೇವಿಪ್ರಸಾದ ಶೆಟ್ಟಿ
ಉಪಕರಣಗಳು
Actions
ಸಾಮಾನ್ಯ
ಮುದ್ರಿಸು/ರಫ್ತು ಮಾಡು
ಇತರೆ ಯೋಜನೆಗಳಲ್ಲಿ
ದೇವಿಪ್ರಸಾದ ಶೆಟ್ಟಿ | |
---|---|
![]() | |
ಜನನ | ಮೇ ೮, ೧೯೫೩ ಮಂಗಳೂರು, ಕರ್ನಾಟಕ, ಭಾರತ |
ವಿದ್ಯಾಭ್ಯಾಸ | Guy's Hospital London – Cardiothoracic Unit, (1983–1989) West Midlands Cardio-Thoracic Rotation Program (Trained in Cardiac Surgery) Kasturba Medical College, Mangalore, (1982) St. Aloysius Mangalore |
Years active | 1983–present |
Known for | Pulmonary Thromboembolectomy Neonatal open heart surgery Cardiomyoplasty Surgery Left Ventricular Assist Device Support |
Medical career | |
Profession | Chairman and founder, narayana health. cardiac surgeon |
Institutions | Kasturba Medical College, Mangalore Guy's Hospital United Kingdom B.M. Birla Hospital ಕೊಲ್ಕತ್ತ Manipal Hospital ಬೆಂಗಳೂರು |
Specialism | Cardiovascular Thoracic Surgery |
Notable prizes | ಪದ್ಮ ಭೂಷಣ award for Medicine in 2012 Schwab Foundation's award in 2005 Dr. B C Roy award in 2003 Sir M. Visvesvaraya Memorial Award in 2003 Ernst & Young – Entrepreneur of the Year in 2003 Rajyotsava award in 2002 Karnataka Ratna award in 2001 |
ದೇವಿ ಪ್ರಸಾದ್ ಶೆಟ್ಟಿ (ಜನನ 8 ಮೇ 1953) ಒಬ್ಬ ಭಾರತೀಯ ಹೃದಯ ಶಸ್ತ್ರಚಿಕಿತ್ಸಕ.ಅವರು ಭಾರತದಲ್ಲಿ 21 ವೈದ್ಯಕೀಯ ಕೇಂದ್ರಗಳ ಸರಪಳಿ, ನಾರಾಯಣ ಹೆಲ್ತ್ ನ ಅಧ್ಯಕ್ಷರಾಗಿದ್ದಾರೆ. ಅವರು 15,000 ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಕೈಗೆಟುಕುವ ಆರೋಗ್ಯ ಸೇವೆಗೆ ನೀಡಿದ ಕೊಡುಗೆಗಾಗಿ 2004 ರಲ್ಲಿ ಪದ್ಮಶ್ರೀ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ, ನಂತರ 2012 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. [೧][೨]
ಡಾ.ದೇವಿಪ್ರಸಾದ ಶೆಟ್ಟಿಯವರು ಮೇ ೮, ೧೯೫೩ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 'ಕಿನ್ನಿಗೋಳಿ' ಎಂಬ ಗ್ರಾಮದಲ್ಲಿ ಜನಿಸಿದರು. ಅವರ ತಂದೆಗೆ ಇದ್ದ ಒಂಬತ್ತು ಮಕ್ಕಳಲ್ಲಿ ಎಂಟನೆಯವರಾಗಿದ್ದರು. ದುರ್ಗಾಪರಮೇಶ್ವರಿ ದೇವಿಯ ಭಕ್ತರಾದ ಅವರ ತಾಯಿ, ದುರ್ಗಾ ಪರಮೇಶ್ವರಿ ದೇವಿಯ ಕಾರುಣ್ಯ ತಮ್ಮ ಕರುಳಕುಡಿಯ ಮೇಲಿರಲೆಂದು ಮಗನಿಗೆ ‘ದೇವಿ ಪ್ರಸಾದ’ ಎಂದು ಹೆಸರಿಟ್ಟರು. ಬಾಲ್ಯದಲ್ಲಿ ದೇವಿ ಪ್ರಸಾದರು ಓದಿನಲ್ಲಿ ತುಂಬಾ ಜಾಣ ವಿದ್ಯಾರ್ಥಿಯೇನೂ ಆಗಿರಲಿಲ್ಲ. ಅದರಲ್ಲೂ ಗಣಿತವೆಂದರೆ ಅವರಿಗೆ ಕಬ್ಬಿಣದ ಕಡಲೆಯಾಗಿತ್ತಂತೆ. ಶಾಲೆಯಲ್ಲಿನ ಡ್ರಾಯಿಂಗ್ ಟೀಚರ್ ಒಬ್ಬರಿಗೆ ದೇವಿ ಶೆಟ್ಟಿ ಬಗ್ಗೆ ವಿಶೇಷ ಅಕ್ಕರೆ. ಅವರು ಈ ಹುಡುಗನ ಮೇಲಿನ ಪ್ರೀತಿಯಿಂದ ತಮ್ಮ ಮನೆಯಲ್ಲಿ ಗಣಿತ ಹೇಳಿಕೊಡುತ್ತಿದ್ದರಂತೆ. ಐದನೆ ತರಗತಿಯಲ್ಲಿ ಕಲಿಯುತ್ತಿರುವಾಗ ದಕ್ಷಿಣ ಆಫ್ರಿಕಾದ ಸರ್ಜನ್ ಒಬ್ಬರು ಜಗತ್ತಿನ ಮೊದಲ ಹೃದಯ ಕಸಿಯನ್ನು ಮಾಡಿದರು, ಎಂದು ಕೇಳಿದಾಕ್ಷಣ ತಾನೂ 'ಹೃದಯ ಸರ್ಜನ್' ಆಗಬೇಕೆಂದು ನಿರ್ಧರಿಸಿದರು.
ಚಿಕ್ಕಂದಿನಲ್ಲಿ ದೇವಿ ಪ್ರಸಾದರ ಬದುಕಿನಲ್ಲಿ ಹೀಗೊಂದು ಘಟನೆ ನಡೆಯಿತು. ಅದನ್ನು ದೇವಿ ಶೆಟ್ಟಿ ಹೀಗೆ ಬಣ್ಣಿಸುತ್ತಾರೆ.
“ಅದೊಂದು ಶನಿವಾರ ಮಧ್ಯಾಹ್ನ ಎನ್ನುವುದು ನನ್ನ ನೆನಪು. ಬೆಂಕಿಪೊಟ್ಟಣಗಳು ಹಾಗೂ ಕಡ್ಡಿಗಳಿಂದ ನಾನು ಕಾರು ತಯಾರಿಸಲು ಪ್ರಯತ್ನಿಸುತ್ತಿದ್ದೆ. ಹಳ್ಳಿಯಲ್ಲಿನ ಉಳಿದ ಮಕ್ಕಳೂ ಇಂಥ ಆಟವನ್ನೇ ಆಡುತ್ತಿದ್ದರು. ಬಾಂಬೆಯಲ್ಲಿದ್ದ ದೂರದ ಸಂಬಂಧಿಯೊಬ್ಬರೊಂದಿಗೆ ನನ್ನ ತಾಯಿ ಮಾತನಾಡುತ್ತಿದ್ದರು. ತಾನು ನೀಡಿದ ಚಿಕಿತ್ಸೆಗೆ ಯಾವುದೇ ಶುಲ್ಕ ಪಡೆಯದೆ, ತನ್ನ ಮಗುವನ್ನು ಉಳಿಸಿಕೊಟ್ಟ ಸರ್ಜನ್ ಒಬ್ಬರ ಬಗ್ಗೆ ಆಕೆ ನನ್ನ ತಾಯಿಗೆ ಹೇಳುತ್ತಿದ್ದಳು. ಅಂಥ ಅದ್ಭುತ ವ್ಯಕ್ತಿಗೆ ಜನ್ಮ ಕೊಟ್ಟ ತಾಯಿಯ ಉದರ ತಣ್ಣಗಿರಲೆಂದು ನನ್ನ ತಾಯಿ ಹಾರೈಸಿದ್ದು ನನ್ನ ಕಿವಿಗೆ ಬಿತ್ತು. ಅಂಥ ವ್ಯಕ್ತಿಗಳ ಕಾರಣದಿಂದಲೇ ಈ ಜಗತ್ತು ಇನ್ನೂ ಸುಂದರವಾಗಿದೆ ಎಂದು ಅಮ್ಮ ಹೇಳುತ್ತಿದ್ದಳು. ಆ ಸಮಯದಲ್ಲೇ ನನ್ನ ಬದುಕಿನ ಅರ್ಥ ಏನೆನ್ನುವುದನ್ನು ಕಂಡುಕೊಂಡೆ.”
೧೯೬೭ ನೇ ಇಸವಿ. ದಕ್ಷಿಣ ಆಫ್ರಿಕಾದ 'ಕ್ರಿಸ್ಟಿಯನ್ ಬರ್ನಾರ್ಡ್' 'ಮೊದಲ ಹಾರ್ಟ್ ಟ್ರಾನ್ಸ್ಪ್ಲಾಂಟ್' ಮಾಡಿದ ವಿಷಯ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಆ ಸುದ್ದಿಯನ್ನು ಶಾಲೆಯಲ್ಲಿ ಶಿಕ್ಷಕರೊಬ್ಬರು ತರಗತಿಗೆ ಓದಿಹೇಳಿದಾಗ ಬಾಲಕ ದೇವಿ ಪ್ರಸಾದನಿಗೆ 'ಮೈ ಜುಂ' ಎಂದಿತು. ವೈದ್ಯನಾದರೆ, 'ಬರ್ನಾರ್ಡ್' ಅವರಂತೆ 'ಹಾರ್ಟ್ ಸರ್ಜನ್' ಆಗಬೇಕು ಎಂದು ಹುಡುಗನಿಗೆ ಅನ್ನಿಸಿತು.
ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು 'ಕಿನ್ನಿಗೋಳಿಯ ಸೇಂಟ್ ಮೇರಿಸ್ ಶಾಲೆ'ಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತರು. ಅವರು ಕಸ್ತೂರಬಾ ಮೆಡಿಕಲ್ ಕಾಲೇಜು, ಮಂಗಳೂರಿನಲ್ಲಿ ಮೆಡಿಸಿನ್ ನಲ್ಲಿ ಪದವಿ ಪ್ಡೆದು, ಸರ್ಜರಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಆಮೇಲೆ 'ಯುನೈಟೇಡ್ ಕಿಂಗ್ಡಮ್ ನ ಗೈಸ್ ಆಸ್ಪತ್ರೆ'ಯಲ್ಲಿ 'ಕಾರ್ಡಿಯಾಕ್ ಸರ್ಜರಿ' ಅಂದರೆ ಹೃದಯ ಶಸ್ತ್ರ ಚಿಕಿತ್ಸೆಯಲ್ಲಿ ತರಬೇತಿ ಹೊಂದಿದರು.
ಸೋದರನೊಬ್ಬ ಅಲ್ಲಿ ನೆಲೆಸಿದ್ದುದು ಕೂಡ ಅವರ ಆಸೆಗೆ ಪೂರಕವಾಗಿತ್ತು. ವೆಸ್ಟ್ ಮಿಡ್ಲ್ಯಾಂಡ್ಸ್ ಕಾರ್ಡಿಯೊ-ಥೊರಾಸಿಕ್ ರೊಟೇಷನ್ ಕಾರ್ಯಕ್ರಮದಡಿ ವಾಲ್ಸ್ಗ್ರೇವ್ ಆಸ್ಪತ್ರೆ ಹಾಗೂ ಬರ್ಮಿಂಗ್ಹ್ಯಾಂ ಆಸ್ಪತ್ರೆಯಲ್ಲಿ ಕಾರ್ಡಿಯಾಕ್ ಸರ್ಜನ್ ಆಗಿ ತರಬೇತಿ ಪಡೆದರು. ಆನಂತರ ಲಂಡನ್ನ ಗೈಸ್ ಹಾಸ್ಪಿಟಲ್ನ ಕಾರ್ಡಿಯೊ ಥೊರಾಸಿಕ್ ವಿಭಾಗದಲ್ಲಿ ಸೇರಿಕೊಂಡು (1983-89) ಹೃದಯದ ಪದರಗಳ ಬಿಡಿಸತೊಡಗಿದರು. ‘ಗೈಸ್ ಹಾಸ್ಪಿಟಲ್’ನಲ್ಲಿ ದೇವಿ ಶೆಟ್ಟಿ ಕಾರ್ಯಕ್ಷಮತೆ ಎಷ್ಟು ಜನಪ್ರಿಯವಾಗಿತ್ತೆಂದರೆ, ಸಹೋದ್ಯೋಗಿ ಗೆಳೆಯರು ಅವರನ್ನು ‘ಆಪರೇಟಿಂಗ್ ಮೆನ್’ ಎಂದು ಕರೆಯುತ್ತಿದ್ದರು. ಅಲ್ಲವರು ವಾರದಲ್ಲಿ ಏಳು ದಿನವೂ ಮುಂಜಾನೆಯಿಂದ ರಾತ್ರಿಯವರೆಗೆ ಕೆಲಸ ಮಾಡುತ್ತಿದ್ದರು. ಒಮ್ಮೆ ದೇವಿಶೆಟ್ಟಿ ತಮ್ಮ ಪತ್ನಿಯನ್ನು ಆಸ್ಪತ್ರೆಯಲ್ಲಿನ ಹಿರಿಯ ತಜ್ಞರಿಗೆ ಪರಿಚಯಿಸಿದರು. ಅವರು ದೇವಿಶೆಟ್ಟಿ ಅವರ ಪತ್ನಿಗೆ ಹೇಳಿದ್ದು: ‘ನಿಮ್ಮ ಬಗ್ಗೆ ನಮಗೆ ಅನುಕಂಪವಿದೆ!’.
ಭಾರತಕ್ಕೆ ೧೯೮೯ರಲ್ಲಿ ಮರಳಿದ ದೇವಿ ಶೆಟ್ಟಿ ಅವರ ವೃತ್ತಿ ಆರಂಭಗೊಂಡಿದ್ದು ಕೋಲ್ಕತ್ತಾದಲ್ಲಿ. ಅಲ್ಲಿನ ಅನುಭವ ಅವರಿಗೆ ಬೇರೆಯದೇ ಲೋಕವೊಂದನ್ನು ಪರಿಚಯಿಸಿತು. ಅವರಿಗೆ ಕಾಣಿಸಿದ್ದು ದಾರುಣ ಬಡತನದ ಕಟು ವಾಸ್ತವ. ಜನಸಾಮಾನ್ಯರ ಕಷ್ಟ ಅವರಿಗೆ ಅರ್ಥವಾದದ್ದು ಆಗಲೇ.[೩]
ಪ್ರತಿ ಹಳ್ಳಿಯಲ್ಲೂ ಒಬ್ಬ ಶ್ರಿಮಂತ ವ್ಯಕ್ತಿ ಇರುತ್ತಾನೆ. ಆತನದ್ದು ದೊಡ್ಡ ಮನೆ. ಊರಿನಲ್ಲಿ ಉಳಿದವರದ್ದೆಲ್ಲ ಸಣ್ಣ ಸಣ್ಣ ಮನೆಗಳು. ಆದರೆ ಶ್ರಿಮಂತನಾಗಲೀ ಬಡವರಾಗಲೀ ತಿನ್ನುವುದು ಒಂದೇ ಬಗೆಯ ಆಹಾರವನ್ನು; ಪ್ರಮಾಣದಲ್ಲಿ ಕೊಂಚ ಹೆಚ್ಚುಕಡಿಮೆ ಇರಬಹುದು ಅಷ್ಟೇ. ಜಾನಪದ ಹಾಡು-ಕುಣಿತಗಳ ಪ್ರದರ್ಶನದ ಸಂದರ್ಭದಲ್ಲಿ ಶ್ರಿಮಂತ ಕುರ್ಚಿಯ ಮೇಲೆ ಕೂರುತ್ತಿದ್ದ, ಬಡವ ನೆಲದ ಮೇಲೆ ಕೂರುತ್ತಿದ್ದ. ಆದರೆ ಇಬ್ಬರಿಗೂ ದೊರೆಯುತ್ತಿದ್ದ ಮನರಂಜನೆ ಒಂದೇ ಬಗೆಯದಾಗಿತ್ತು. ದೊಡ್ಡ ಕಾಯಿಲೆಯೊಂದು ಬಂದಾಗ ಬಡವ ಮತ್ತು ಬಲ್ಲಿದ ಇಬ್ಬರೂ ಸಾಯುತ್ತಿದ್ದರು. ಅವರ ಬದುಕು ಹಾಗೂ ಸಾವಿನಲ್ಲಿ ಒಂದೇ ರೀತಿಯ ಸಮಾನತೆಯಿತ್ತು. ಆದರೆ ಈಗ? ಕೆಲವೇ ಸಾವಿರ ರೂಪಾಯಿಗಳು ತಮ್ಮಲ್ಲಿ ಇಲ್ಲದ ಕಾರಣ ಎಷ್ಟೊಂದು ಮಂದಿ ತಮ್ಮ ಇಷ್ಟಪಾತ್ರರನ್ನು ಕಳಕೊಂಡಿಲ್ಲ?’. ಇಂಥ ಅಸಹಾಯಕರಿಗೆ ನೆರವಾಗುವುದರಲ್ಲಿ ದೇವಿ ಶೆಟ್ಟಿ ತಮ್ಮ ಬದುಕಿನ ಸಾರ್ಥಕತೆ ಕಾಣುತ್ತಿದ್ದಾರೆ.
ಲಂಡನ್ನಿಂದ ೧೯೮೯ರಲ್ಲಿ ಭಾರತಕ್ಕೆ ಹಿಂತಿರುಗಿದ ದೇವಿಶೆಟ್ಟಿ, ವಿದೇಶದಲ್ಲಿನ ತಮ್ಮ ಅನುಭವವನ್ನು ಇಲ್ಲಿ ಸಂಸ್ಥೆಯೊಂದರ ಮೂಲಕ ಸಾಕಾರಗೊಳಿಸಲು ಪ್ರಯತ್ನಿಸಿದರು. ಇದರ ಫಲವಾಗಿ ರೂಪುಗೊಂಡಿದ್ದು ಕೋಲ್ಕತ್ತಾದ ಬಿ. ಎಂ. ಬಿರ್ಲಾ ಆಸ್ಪತ್ರೆ. ಭಾರತದಲ್ಲಿ ನವಜಾತ ಶಿಶುವಿನ (ಒಂಬತ್ತು ದಿನಗಳ ಹಸುಳೆ) ಮೊದಲ ಶಸ್ತ್ರಚಿಕಿತ್ಸೆಯನ್ನು ಡಾ. ದೇವಿ ಶೆಟ್ಟಿ ನೆರವೇರಿಸಿದ್ದು ಇಲ್ಲಿಯೇ. ಕೋಲ್ಕತ್ತಾದಲ್ಲಿದ್ದಾಗ ಮದರ್ ತೆರೇಸಾ ಅವರಿಗೆ ಚಿಕಿತ್ಸೆ ನೀಡಲು ಅವಕಾಶ ದೊರಕಿತ್ತು. ದೇವಿ ಶೆಟ್ಟಿ ಅವರ ಅನುಭವ ಬುತ್ತಿಯಲ್ಲಿನ ಸವಿನೆನಪುಗಳಲ್ಲೊಂದು. ತೆರೇಸಾ ಕೊನೆಯುಸಿರೆಳೆದದ್ದು ದೇವಿಶೆಟ್ಟಿ ಅವರ ಕಾಳಜಿಯ ಕಣ್ಣಳತೆಯಲ್ಲೇ.
ಇದು ಜಗತ್ತಿನಲ್ಲಿಯೇ ಅತಿ ಕಡಿಮೆ ವೆಚ್ಚ ಹಾಗೂ ಎಲ್ಲ ಸವಲತ್ತನ್ನು ಒಳಗೊಂಡ ಆರೋಗ್ಯ ವಿಮೆಯಾಗಿದೆ. ತಿಂಗಳಿಗೆ ಕೇವಲ ೨೦/ ರೂಪಾಯಿಗಳ ಕಂತು. ಇದನ್ನು ಶೆಟ್ಟಿಯವರು ಮತ್ತು ಕರ್ನಾಟಕ ಸರಕಾರ ಜಂಟಿಯಾಗಿ ಬಡ ರೈತರಿಗಾಗಿ ಯೋಜಿಸಲಾಗಿದೆ. ಕರ್ನಾಟಕದಲ್ಲಿ ೪ ದಶಲಕ್ಷ ಜನ ರೈತರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.