ಜಿ.ಎಂ.ಹೆಗಡೆ
- ಲೇಖನ
- ಚರ್ಚೆ
ಡಾ.ಜಿ.ಎಂ.ಹೆಗಡೆ | |
---|---|
![]() | |
ಜನನ | ಡಿಸೆಂಬರ್ ೧೨, ೧೯೫೨ ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲೂಕು |
ವೃತ್ತಿ(ಗಳು) | ನಿವೃತ್ತ ಪ್ರಾಧ್ಯಾಪಕರು, ಲೇಖಕಕರು, ಕನ್ನಡ ಸಾಹಿತ್ಯ ವಿಮರ್ಶಕರು |
ಜಿ.ಎಂ.ಹೆಗಡೆ ಅವರು ಕನ್ನಡ ಸಾಹಿತ್ಯ ಲೋಕದ ಖ್ಯಾತ ವಿಮರ್ಶಕರಲ್ಲೊಬ್ಬರು.ಜಿ.ಎಂ.ಹೆಗಡೆ ಅವರು ಸಹಿತ್ಯ ವಿಮರ್ಶೆ,ಸಂಶೋಧನೆ,ಅಧ್ಯಯನಗಳಲ್ಲಿ ಸತತ ಕ್ರಿಯಾಶೀಲರಗಿದ್ಧಾರೆ.ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಹಿತ್ಯ ವಿಚಾರ ಸಂಕೀರಣಗಳಲ್ಲಿ ನಿರಂತರವಾಗಿ ಪ್ರಬಂಧ ಮಂಡಿಸಿದ್ದಾರಲ್ಲದೆ ಹಲವೆಡೆ ಸಂಪನ್ಮೂಲ ವ್ಯಕ್ತಿಯಾಗಿ ಹೆಸರು ಗಳಿಸಿದ್ದಾರೆ.ಕನ್ನಡ ಪ್ರಾಧ್ಯಾಪಕರಗಿ ನಿವ್ರುತರಾಗಿದ್ದರು ಹೆಗಡ ಅವರು ಸಹಿತ್ಯ ಸೆವೆಯಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಜಿ.ಎಂ.ಹೆಗಡೆ ಅವರು ೧೯೫೨ (೧೨. ೧೨. ೧೯೫೨) ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನಲ್ಲಿ ಜನಿಸಿದವರು.ಶಾಲಾ ಕಾಲೇಜ್ ವಿದ್ಯಾಭ್ಯಾಸ ಶಿರಸಿಯಲ್ಲಿ ಮುಗಿಸಿ ಬಿ.ಎ(ಕನ್ನಡ ಮೇಜರ್) ಪದವಿ ಪಡೆದರು.ನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎರಡನೆಯ ರಿಯಾಂಕ್ ನಲ್ಲಿ ಎಂ.ಎ(ಕನ್ನಡ)ಪದವಿ ಪಡೆದರು. ೧೯೮೨ರಲ್ಲಿ ಮಾಸ್ತಿಯವರ ವಿಮರ್ಶೆ ಒಂದು ಅಧ್ಯಯನ ಸಂಶೊಧನಾ ವಿಷಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು.ಕನ್ನಡ ಪ್ರಾಧ್ಯಪಕರಗಿ ಮತ್ತು ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಗಿ ಧಾರವಾಡದ ಕಿಟೆಲ್ ಮಹಾವಿಧ್ಯಾಲಯದಲ್ಲಿ ಸೆವೆ ಸಲ್ಲಿಸಿ ನಿವ್ರುತ್ತರಾಗಿದ್ದರೆ.ಧಾರವಾಡದ ಸಹಿತ್ಯ ಪರಿಸರದಲ್ಲಿ,ಖ್ಯಾತ ಸಹಿತಿಗಳ ಮತ್ತು ಕವಿಗಳ ಪ್ರಿತಿಯೊಂದಿಗೆ ಜಿ.ಎಂ.ಹೆಗಡೆ ಅವರು ತಮ್ಮ ಪತ್ನಿ ಸರಸ್ವತಿಯೊಂದಿಗೆ ಧಾರವಾಡದಲ್ಲಿ ವಾಸವಗಿದ್ದಾರೆ.
ಜಿ.ಎಂ.ಹೆಗಡೆ ಅವರು ಸುಮಾರು ೪೦ ದಶಕಗಲಿಗೂ ಮೀರಿ ನಿರಂತರವಗಿ ಸಹಿತ್ಯ ವಿಮರ್ಶೆಯ ಕಾರ್ಯ ಮಾಡುತ್ತಿದ್ದಾರೆ.ಅವರ ವಿಮರ್ಶೆ ಪುಟಗಳಲ್ಲಿ ಕನ್ನಡ ನವೋದಯ,ನವ್ಯ,ದಲಿತ ಬಂಡಾಯ,ಮಹಿಳಾ ಸಹಿತ್ಯದ ಕುರಿತಾದ ಲೇಖನಗಳಿವೆ ಎಂಬುದನ್ನು ಕಾಣಬಹುದಾಗಿದೆ.ಹತ್ತು ವರ್ಷಗಳ ಕಾಲ ಸತತವಾಗಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಾಪ್ತಾಹಿಕ ಸೌರಭದಲ್ಲಿ ಸಾಹಿತ್ಯ ಸಂಸ್ಕೃತಿಗಳ,ಪುಸ್ತಕ ವಿಮರ್ಶೆಗಳನ್ನು ಬರೆದಿದ್ದಾರೆ.ಅವು ಮುಂದೆ ಪುಸ್ತಕ ಲೋಕ ಮತ್ತು ಪುಸ್ತಕ ಪ್ರಪಂಚ ಎಂಬ ಎರಡು ಸಂಕಲನಗಳಲ್ಲಿ ಪ್ರಕಟವಗಿವೆ.
ಸುಮರು ೬೦ ಕ್ಕೂ ಹೆಚ್ಚು ಗ್ರಂಥಗಳು ಪ್ರಕಟಿತವಾಗಿವೆ.ವಿಶೇಷವಾಗಿ
ಹಿರಿಯ ಸಹಿತಿ ಮತ್ತು ಕವಿಗಳ(ಚನ್ನವೀರ ಕಣವಿ,ಹಾಮಾನಾ,ಜಿ.ಎಸ್.ಆಮೂರ,ಪಾಟೀಲ ಪುಟ್ಟಪ್ಪ,ಎಚ್.ವಿ.ನಾಗೇಶ್,ಪ್ರೊ.ಕಿರ್ತಿನಾಥ್ ಕುರ್ತಕೋಟಿ,ಡಾ.ವಾಮನ ಬೇಂದ್ರೆ, ಎಂ.ಎಂ.ಕಲಬುರ್ಗಿ ಮತ್ತು ಹಲವು ಸಾಹಿತಿ/ಸ್ನೆಹಿತರ) ಪ್ರಿತಿ ವಿಶ್ವಾಸ ಜಿ.ಎಂ.ಹೆಗಡೆ ಅವರ ಕನ್ನಡ ಸಾಹಿತ್ಯ ಕರ್ಯಗಳಿಗೆ ನೀರೆರೆದು ಪೋಷಿಸಿ ಪ್ರೊಥ್ಸಹಿಸುತ್ತಬಂದಿವೆ.ಹೆಗಡೆಯವರಿಗೆ ಆತ್ಮೀಯರಗಿದ್ದ ಡಾ.ಹಾ.ಮಾ.ನಾಯಕರು ಪ್ರಕಟಿಸಿದ ಕೊನೆಯ ಕೃತಿ ಸುರಗಿಯನ್ನು ಹೆಗಡೆಯವರಿಗೆ ಅಂಕಿತಗೊಳಿಸಿದ್ದಾರೆ.