ಗ್ಯಾಲ್ವನೀಕರಣ

ಕಬ್ಬಿಣದ ಇಲ್ಲವೇ ಉಕ್ಕಿನ ಪದಾರ್ಥಗಳಲ್ಲಿನ ಫೆರ್ರಸ್ ತಳಕ್ಕೆ ತುಕ್ಕು ಹಿಡಿಯದಂತೆ ಮಾಡಲು ಅವುಗಳಿಗೆ ತೆಳು ಪದರವನ್ನು ಲೇಪಿಸಲು ಬಳಸುವ ವಿವಿಧ ತಂತ್ರಗಳ ಸಾಮೂಹಿಕ ಹೆಸರು (ಗ್ಯಾಲ್ವನೈಸೇಷನ್).

ಬೀದಿ ದೀಪದ ದೀಪಸ್ಥಂಬವನ್ನು ಗ್ಯಾಲ್ವನೀಕರಿಸಿರುವುದು

ಕಾರಣ

ಗ್ಯಾಲ್ವನೀಕರಿಸಿದ ಮೊಳೆಗಳು

ಗಾಳಿ, ನೀರು ಮತ್ತು ಆಮ್ಲಗಳ ಪ್ರಭಾವದಿಂದ ಲೋಹಗಳು ಕ್ಷಯಿಸುತ್ತವೆ. ಬಯಲಲ್ಲಿ ಬಿದ್ದಿರುವ ಕಬ್ಬಿಣ ತುಕ್ಕು ಹಿಡಿಯುವುದು ಇದಕ್ಕೊಂದು ಉದಾಹರಣೆ ಆಮ್ಲಜನಕ, ತೇವ ಮತ್ತು ಇಂಗಾಲಾಮ್ಲಗಳ ಪ್ರಭಾವದಿಂದ ಉಂಟಾಗುವ ಕ್ರಿಯಾವಿಶೇಷವೇ ತುಕ್ಕು. ಇದು ಪದಾರ್ಥಗಳ ಮೇಲ್ಮೈನ್ನು ತಿನ್ನುತ್ತ ಅವುಗಳ ನಾಶಕ್ಕೆ ಕಾರಣವಾಗುತ್ತದೆ. ಇದನ್ನು ತಪ್ಪಿಸಬೇಕಾದರೆ ಪದಾರ್ಥಗಳಿಗೆ ಯುಕ್ತ ಮೇಲು ಹೊದಿಕೆಯನ್ನು ಹೊದಿಸಿ ರಕ್ಷಿಸಬೇಕಾಗುತ್ತದೆ. ಇದಕ್ಕಾಗಿ ಬಳಸುವ ಪದಾರ್ಥಗಳಲ್ಲಿ ಸತುವೇ ಅತಿ ಸುಲಭದ ವಸ್ತು. ಸತುವಿನ ಕವಚದ ಮೇಲ್ಮೈಯ ಪದರ ಮೊದಲು ಕ್ಷಯಿಸಿ ಒಂದು ಬಗೆಯ ಕಾರ್ಬೊನೇಟ್ ಉತ್ಪನ್ನವಾಗುವುದು. ಕರಗದೇ ಇರುವ ಕಾರ್ಬೊನೇಟಿನ ಪದರ ಲೋಹಕ್ಕೆ ತುಕ್ಕುಹಿಡಿಯದಂತೆ ಮಾಡುವುದು.[೧]

ಎಲೆಕ್ಟ್ರೋಪ್ಲೇಟಿಂಗ್

ಸತುವನ್ನು ಲೇಪಿಸಿದ ಪದಾರ್ಥಗಳು ಎಲ್ಲ ಸಂದರ್ಭಗಳಲ್ಲಿಯೂ ಉಪಯುಕ್ತವಾಗಿರುವುದಿಲ್ಲ. ಸತುವಿನ ಹೊದಿಕೆಯನ್ನು ಸಮುದ್ರದ ಮೇಲಿನ ಲವಣಮಿಶ್ರಿತ ವಾಯು ಮತ್ತು ಗಂಧಕದ ಹವೆಯಿಂದ ಕೂಡಿದ ಪಟ್ಟಣದ ವಾಯು ಭೇದಿಸುತ್ತವೆ. ಆಮ್ಲ ಕ್ಷಾರಗಳೆರಡೂ ಸತುವನ್ನು ತಿನ್ನುವುದರಿಂದ ಆಹಾರ ಪದಾರ್ಥಗಳನ್ನೀಡುವ ಡಬ್ಬಗಳಿಗೆ ಸತು ಹೊದಿಕೆಯನ್ನು ಹೊದಿಸುವುದಿಲ್ಲ. ಬರೀ ಸತುವಿನ ಹೊದಿಕೆಗಿಂತ ಸತು ಮತ್ತು ನಿಕ್ಕಲುಗಳ ಮಿಶ್ರಣದ ಹೊದಿಕೆ ಉತ್ತಮವಾದ ರಕ್ಷಾಕವಚವನ್ನು ಒದಗಿಸುತ್ತದೆ. ಇಂಥ ಹೊದಿಕೆ ಬೇಕಾದಾಗ ವಿದ್ಯುಲ್ಲೇಪನ (ಎಲೆಕ್ಟ್ರೋಪ್ಲೇಟಿಂಗ್) ವಿಧಾನದಿಂದ ನಿಕ್ಕಲ್ ಪೊರೆಯನ್ನು ರಚಿಸುತ್ತಾರೆ. ಬಳಿಕ ಕುಲುಮೆಯಲ್ಲಿ ಕಾಯಿಸಿದಾಗ ಎರಡು ಪೊರೆಗಳೂ ಒಗ್ಗೂಡಿ ಭದ್ರ ಹೊರಕವಚ ಏರ್ಪಡುವುದು.

ಉಲ್ಲೇಖ

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ