ಗುರುಲಿಂಗ ಕಾಪಸೆ

ಗುರುಲಿಂಗ ಕಾಪಸೆಯವರು ಜಾನಪದ ವಿದ್ವಾಂಸರು, ಲೇಖಕರು ಹಾಗೂ ಸಾಹಿತಿಗಳು.

ಜನನ

ಗುರುಲಿಂಗ ಕಾಪಸೆ ಇವರು ೧೯೨೮ ಎಪ್ರಿಲ್ ೨ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲೋಣಿ ಬಿ.ಕೆ.ಯಲ್ಲಿ ಜನಿಸಿದರು.

ಸಾಹಿತ್ಯ

ಮಧುರಚೆನ್ನರ ಜೀವನ ಹಾಗೂ ಕೃತಿಗಳು ಕುರಿತು ಮಹಾಪ್ರಬಂಧ ಬರೆದಿದ್ದಾರೆ. ‘ಹಲಸಂಗಿ ಗೆಳೆಯರು’ (೧೯೯೮ ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ) ಡಾ. ಕಾಪಸೆ ಅವರು ಸಂಪಾದಿಸಿದ ಮಧುರ ಚೆನ್ನರ ಲೇಖನಗಳಲ್ಲಿ ಆ ಕಾಲದ ಅನೇಕ ಜಾನಪದ ವಿರಳ ಸಂಗತಿಗಳು ದಾಖಲಾಗಿವೆ. ಇದರಲ್ಲಿ ಎತ್ತಿ ಹೇಳಬೇಕೆಂದರೆ ಒಂದು, ಎರಡು ದಿವಸದಿಂದ ಮೂರು ದಿನಗಳವರೆಗೆ ಜನ ಲಾವಣಿಗಳ ಬಗ್ಗೆ ಲಾವಣಿಗಳ ಮೇಲಾಟ ಮತ್ತು ಇನ್ನೂ ಅನೇಕ ಸಂಗತಿಗಳಾಗಿವೆ, ಇದೊಂದು ರೀತಿಯಿಂದ ಕನ್ನಡ ವಿಶ್ವವಿದ್ಯಾಲಯವು “ಜಾನಪದ ಅಧ್ಯಯನ” ಕ್ಕೆ ಕೊಟ್ಟ ವಿಶಿಷ್ಠ ಕೊಡುಗೆ ಎಂದು ಹೇಳಬಹುದು.

ಅನೇಕ ಸಮ್ಮೇಳನಗಳಲ್ಲಿಯೂ ಪಾಲ್ಗೊಂಡು ವಿದ್ವತ್ ಪೂರ್ಣ ಲೇಖನಗಳನ್ನು ಮಂಡಿಸಿದ್ದಾರೆ. ಇತ್ತೀಚಿನ ಕೃತಿ ಹಲಸಂಗಿ ಗೆಳೆಯರು, ಉಪಯುಕ್ತವಾದ ಕೃತಿ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. [೧]

ಕೃತಿಗಳು

  • ಅಕ್ಕಮಹಾದೇವಿ
  • ಮಧುರಚೆನ್ನ
  • ಶ್ರೀ ಅರವಿಂದರು
  • ಬಸವೇಶ್ವರ
  • ಹಲಸಂಗಿ ಗೆಳೆಯರು

ಪ್ರವಾಸಕಥನ

  • ಶಾಲ್ಮಲೆಯಿಂದ ಗೋದಾವರಿಯವರೆಗೆ

ಮಕ್ಕಳ ಸಾಹಿತ್ಯ

  • ಕವಿ ರವಿಂದ್ರರು
  • ಶಿ.ಶಿ.ಬಸವನಾಳ

ವಿಮರ್ಶೆ

  • ಸಾಹಿತ್ಯ ಸಂಬಂಧ
  • ಬೇಂದ್ರೆ-ಮಧುರಚೆನ್ನ ಸಖ್ಯಯೋಗ

ಸಂಪಾದಿತ

  • ಕಾಲ-ಕವಿ (ಕಾವ್ಯ)
  • ಪಾರಮಾರ್ಥ ಗೀತಾ ಪ್ರವಚನ
  • ಹರಿಹರನ ಐದು ರಗಳೆಗಳು
  • ಅರವಿಂದ ಪರಿಮಳ
  • ಹೈಮವತಿ ಶೈಶವಲೀಲೆ(ಗಿರಿಜಾ ಕಲ್ಯಾಣ ಸಂಗ್ರಹ)
  • ಚೆಂಬೆಳಕು (ಕಣವಿ ಅಭಿನಂದನ ಗ್ರಂಥ)
  • ಬೆಳಗಲಿ (ದು.ನಿಂ.ಬೆಳಗಲಿ ಅಭಿನಂದನ ಗ್ರಂಥ)
  • ಕನ್ನಡ ಮರಾಠಿ ಸಾಹಿತ್ಯ ಬಾಂಧವ್ಯ
  • ಭವ್ಯ ಮಾನವ ಕಾವ್ಯ ದರ್ಶನ
  • ಜ್ಞಾನಸಿಂಧು
  • ಪಿ.ಧೂಲಾಸಾಹೇಬ
  • ಮಧುರಚೆನ್ನರ ಲೇಖನಗಳು
  • ಕನ್ನಡ ಕಾವಲು
  • ಚಾಮರಸ
  • ಮುಗಿಯದ ಹಾಡು
  • ಆತ್ಮಶೋಧ (ಮಧುರಚೆನ್ನರ ಸಮಗ್ರ ಸಾಹಿತ್ಯ ಶೋಧ)

ಅನುವಾದ

  • ಇದೇ ನಿಜವಾದ ಮೂರ್ತಿಪೂಜೆ ಮತ್ತು ಇದೇ ನಿಜವಾದ ಧರ್ಮ (ಮರಾಠಿಯಿಂದ ಕನ್ನಡಕ್ಕೆ)
  • ಬಸವೇಶ್ವರಾಂಚೆ ವಚನ (ಕನ್ನಡದಿಂದ ಮರಾಠಿಗೆ)

ಪುರಸ್ಕಾರ

  • ವರದರಾಜ ಆದ್ಯ ಪ್ರಶಸ್ತಿ
  • ಆನಂದಕಂದ ಪ್ರಶಸ್ತಿ
  • ಸ.ಸ.ಮಾಳವಾಡ ಪ್ರಶಸ್ತಿ
  • ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
  • ರಾಜ್ಯ ನಾಟಕ ಅಕಾಡೇಮಿ ಫೆಲೋಶಿಪ್
  • ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು (೨೦೦೪)
  • ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು
  • ೨೦೦೧ ರಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಮತ್ತು ಫೆಲೋಷಿಪ್[೨]
  • ಶ್ರೀ ಸಾಹಿತ್ಯ ಪ್ರಶಸ್ತಿ,, ಬಿ. ಎಂ. ಶ್ರೀ. ಪ್ರತಿಷ್ಠಾನ

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ