ಗುರುದಾಸ್ಪುರ್

ಗುರುದಾಸ್ಪುರ್ (ಪಂಜಾಬಿ:ਗੁਰਦਾਸਪੁਰ)ಎಂಬುದು ಗುರಿಯಾಜಿ ಎನ್ನುವವರ ಹೆಸರಿಂದ ಬಂದಿದೆ. ಗುರಿಯಾಜಿ ಅವರು 17ನೆೇ ಶತಮಾನದಲ್ಲಿ ಈ ನಗರವನ್ನು ಸ್ಥಾಪಿಸಿದರು. ಇದು ರಾವಿ ಹಾಗು ಸಟ್ಲೆಜ್ ನದಿಗಳ ನಡುವಿನ ಭೂಮಿಯಲ್ಲಿದೆ. ಇಲ್ಲಿನ ಪ್ರಜೆಗಳೆಲ್ಲರೂ ಪಂಜಾಬಿಯಲ್ಲಿ ಮಾತನಾಡುತ್ತಾರೆ. ಇಲ್ಲಿನ ಪ್ರವಾಸೋದ್ಯಮ ಪಂಜಾಬಿನ ಸಂಸ್ಕೃತಿಯ ಒಂದು ಭಾಗವೇ ಆಗಿದೆ. ಅದೇನೆಂದರೆ ಇಲ್ಲಿನ ಗುರುದ್ವಾರಗಳು, ಭಾಂಗ್ರಾ ನೃತ್ಯ ಸಾಂಪ್ರದಾಯಿಕ ಪಗಡಿ (ಪೇಟ), ಪರಾಂಡ (ಗಡ್ಡದ ವಸ್ತ್ರ ) ಮತ್ತು ಬಾಯಲ್ಲಿ ನೀರೂರಿಸುವ ಇಲ್ಲಿನ ಆಹಾರ. [೧]

Gurdaspur
ਗੁਰਦਾਸਪੁਰ
City
Mechanical Block
Mechanical Block
CountryIndia
StatePunjab
DistrictGurdaspur
Area
 • Total೧೦ km (೪ sq mi)
Elevation
೨೪೧ m (೭೯೧ ft)
Population
 (2011)
 • Total೭೫,೫೪೯
 • Density೬೪೯/km (೧,೬೮೦/sq mi)
Languages
 • OfficialPunjabi
Time zoneUTC+5:30 (IST)
PIN
143521
Vehicle registrationPB 06
Websitegurdaspur.nic.in

ಸುತ್ತಮುತ್ತಲಿನ ಪ್ರವಾಸಿ ತಾಣಗಳು

ಗುರುದಾಸ್ಪುರವು ಬಹಳಷ್ಟು ಪ್ರವಾಸೀ ತಾಣಗಳನ್ನೊಳಗೊಂಡಿದೆ. ಇದರಲ್ಲಿ ಬಹಳ ಪ್ರಸಿದ್ಧ ಸ್ಥಳಗಳೆಂದರೆ 'ದೇರಾ ಬಾಬಾ ನಾನಕ್', 'ಗುರುದಾಸ್ ನಂಗಲ್', ಮಹಾಕಾಳೇಶ್ವರ ದೇವಸ್ಥಾನ, ಮಾಧೋಪುರ, ಶಾಪುರ ಖಂಡಿಕೋಟೆ, ಮೀನಿನ ಉದ್ಯಾನ, ಅಚಲೇಶ್ವರ ದೇವಸ್ಥಾನ, ಗುರುದ್ವಾರ ಚೋಲಾ ಸಾಹಿಬ್' ಮತ್ತು ಕಾಡಾಸಾಹಿಬ್. 'ಕೀರ್ತನ್ ಆಸ್ಥಾನ್' ಎಂಬ ಜಾಗದಲ್ಲಿ ಗುರು ಅರ್ಜನ್ ದೇವ್ ಜಿ ಅವರು ಗುರುನಾನಕರ ಮೊಮ್ಮಗ ಬಾಬಾ ಧರ್ಮ ಚಂದ್ ಜಿ ಅವರ ಭೋಗ್ ನಲ್ಲಿ (ಅವರ ಸ್ಮರಣಾರ್ಥ ಗ್ರಂಥ ಸಾಹಿಬ್ ದ ಪಠಣ) ಹಾಡಿದ್ದರು.[೨]

ಅಲ್ಲದೆ, ಇಲ್ಲಿಗೆ ಎರಡು ಘಂಟೆಗಳ ದೂರದಲ್ಲಿ ಕೆಲವು ಪ್ರವಾಸಿ ತಾಣಗಳು ಉಂಟು, ಅವೆಂದರೆ 'ಡಾಲಹೌಸಿ', 'ಧರ್ಮಶಾಲಾ', 'ಮೆಕ್ಲಾಯ್ಡ್ ಗಂಜ್'

ಉತ್ಸವಗಳು ಮತ್ತು ಹಬ್ಬಗಳು

ಇಲ್ಲಿನ ಪ್ರವಾಸೋದ್ಯಮ ಇಲಾಖೆ ಜನರನ್ನು ಆಕರ್ಷಿಸಲು ಇಲ್ಲಿ ಬಹಳಷ್ಟು ಜಾತ್ರೆ ಮತ್ತು ಹಬ್ಬಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಅದರಲ್ಲಿ ಬಹಳ ಮುಖ್ಯವಾಗಿರುವುದೆಂದರೆ ಗುರುನಾನಕ್ ಜಿ ಅವರ ಕಲ್ಯಾಣೋತ್ಸವ(ಗುರುನಾನಕರು ಸಿಖ್ಖರ ಮೊದಲ ಗುರು) , ಪಂಡೋರಿ ಮಹಾಂತನ್ ನಲ್ಲಿ ನಡೆಯುವ ಬೈಸಾಖಿ ಹಬ್ಬ, ಲೋಹ್ರಿ, ಬಾಬೇಹಾಲಿ ಚಿಂಜ್ಹ್ (ಕುಸ್ತಿ ಕಾಳಗ ) ಮತ್ತು ಶಿವರಾತ್ರಿ ಮೇಳ. [೩]

ಗುರುದಾಸ್ಪುರವನ್ನು ತಲುಪುವುದು ಹೇಗೆ

ಈ ನಗರವನ್ನು ತಲುಪಲು ಜಲಂಧರ್, ಡಾಲ್‍‍ಹೌಸಿ, ಬಟಾಲ, ಪಟ್ನಿತೋಪ್, ನವ ದೆಹಲಿ ಹಾಗು ಪಂಜಾಬಿನ ಎಲ್ಲ ಮುಖ್ಯ ನಗರ ಪಟ್ಟಣಗಳಿಂದ ಬಸ್ ಮೂಲಕ ತಲುಪಬಹುದು.

ಗುರುದಾಸ್ಪುರದ ಹವಾಮಾನ

ಇಲ್ಲಿ ಮೂರು ಋತುಗಳುಂಟು. ಬಿಸಿ ಬೇಸಿಗೆ, ತಂಪಾದ ಮಳೆಗಾಲ, ಅತ್ಯಂತ ಶೀತಲವಾದ ಚಳಿಗಾಲ. ಇಲ್ಲಿಗೆ ಮಳೆಗಾಲ ಮತ್ತು ಚಳಿಗಾಲದಲ್ಲಿ ಬಂದರೆ ಉತ್ತಮ.

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ