ಆಲ್ಬಿಯಸ್ ಟಿಬ್ಯುಲಸ್

ಆಲ್ಬಿಯಸ್ ಟಿಬ್ಯುಲಸ್ -ಸುಮಾರು ಕ್ರಿ.ಪೂ. 19ರಲ್ಲಿ ಜೀವಿಸಿದ್ದ ರೋಮನ್ ಕವಿ. ಲ್ಯಾಟಿನ್ ಶೋಕಗೀತೆಗಳ ರಚನೆಯಲ್ಲಿ ಸಿದ್ಧಹಸ್ತ.

ಪ್ರಾಚೀನ ರೋಮನ್ ಅಶ್ವಾರೋಹಿ ವೀರರ ಮನೆತನಕ್ಕೆ ಸೇರಿದ ಈತನ ತೋಟಗಳು ಟೈಬರ್ ಮತ್ತು ಪ್ರಯೋನಸ್ಟೇಗಳ ನಡುವಿನ ಪೇಡಂ ಎಂಬ ಸ್ಥಳದಲ್ಲಿ ಇದ್ದುವು. ಮಸೆಲ್ಲ ಎಂಬಾತನ ಆಶ್ರಯದಲ್ಲಿದ್ದ ಕವಿಗೋಷ್ಠಿಯ ಸದಸ್ಯರಲ್ಲಿ ಈತನೂ ಒಬ್ಬನಾಗಿದ್ದ. ಕ್ರಿ.ಪೂ. 31ರಲ್ಲಿ ಅಕ್ವಿಟಾನಿಯನ್ನರ ವಿರುದ್ಧ ಮಸೆಲ್ಲ ಕೈಗೊಂಡ ದಂಡ ಯಾತ್ರೆಯಲ್ಲಿ ಈತನೂ ಭಾಗವಹಿಸಿದ್ದ. ಅಲ್ಲದೆ ಪೂರ್ವದೇಶಗಳಿಗೆ ನಿಯೋಗಿಯಾಗಿ ಕೂಡ ಹೋಗಿದ್ದ. ಆದರೆ ಕಾರ್ಸೈರದಲ್ಲಿ ಈತ ಕಾಯಿಲೆ ಬಿದ್ದದ್ದರಿಂದ ರೋಮಿಗೆ ಹಿಂದಿರುಗಿ ಬರಬೇಕಾಯಿತು.

ಈತನ ಶೋಕಗೀತೆಗಳನ್ನು ಎರಡು ಗ್ರಂಥಗಳಲ್ಲಿ ಸಂಗ್ರಹಿಸಲಾಗಿದೆ. ಮುಖ್ಯವಾಗಿ ಅವು ಈತನ ಪ್ರಣಯಿನಿಯರಾದ ಡೀಲ್ಯ ಮತ್ತು ನೆಮಿಸಿಸ್ ಎಂಬವರನ್ನು ಕುರಿತವು. ಡೀಲ್ಯ ಸಂಸ್ಥೆಯೊಂದರೆ ಮೇಲ್ವಿಚಾರಕಳಾಗಿದ್ದಳೆಂದೂ ನೆಮಿಸಿಸ್ ವೇಶ್ಯೆಯಾಗಿದ್ದಳೆಂದೂ ತಿಳಿದುಬರುತ್ತದೆ. ಕಟಲಸನ ಶೋಕಗೀತೆಗಳಲ್ಲಿ ಕಂಡು ಬರುವ ಭಾವೋದ್ದೀಪನೆಗಳು ಈತನ ಪ್ರೇಮಗೀತೆಗಳಲ್ಲಿ ಕಂಡುಬರುವುದಿಲ್ಲ. ಆದರೂ ಅವು ಮನೋಹರವಾಗಿವೆ; ಸರಳವಾಗಿವೆ. ಈತನ ಕವನಗಳ ಇಂಗ್ಲಿಷ್ ಭಾಷಾಂತರಗಳನ್ನು ಜೆ.ಪಿ. ಪೋಸ್ಟ್ ಗೇಟ್ ನೀಡಿದ್ದಾನೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ