ಆರ್ದ್ರತೆ

ಮೃದುತ್ವದ ಬಗ್ಗೆ ಲೇಖನಕ್ಕಾಗಿ ಇಲ್ಲಿ ನೋಡಿ.

ಆರ್ದ್ರತೆ ಎಂದರೆ ಗಾಳಿಯಲ್ಲಿ ಇರುವ ನೀರಿನ ಬಾಷ್ಪದ ಪ್ರಮಾಣ. ನೀರಿನ ಬಾಷ್ಪ ಎಂದರೆ ನೀರಿನ ಅನಿಲ ಸ್ಥಿತಿ ಮತ್ತು ಇದು ಮಾನವನ ಕಣ್ಣಿಗೆ ಅದೃಶ್ಯವಾಗಿರುತ್ತದೆ.[೧] ಆರ್ದ್ರತೆಯು ಅವಕ್ಷೇಪನ, ಇಬ್ಬನಿ, ಅಥವಾ ಮಂಜಿನ ಸಂಭಾವ್ಯತೆಯನ್ನು ಸೂಚಿಸುತ್ತದೆ. ಹೆಚ್ಚಿನ ಆರ್ದ್ರತೆಯು ತ್ವಚೆಯಿಂದ ತೇವದ ಬಾಷ್ಪೀಕರಣದ ಪ್ರಮಾಣವನ್ನು ಕಡಿಮೆಮಾಡಿ ದೇಹವನ್ನು ತಂಪಾಗಿಸುವಲ್ಲಿ ಬೆವರುವಿಕೆಯ ಪರಿಣಾಮಕಾರಿತ್ವವನ್ನು ಕುಗ್ಗಿಸುತ್ತದೆ. ಈ ಪರಿಣಾಮವನ್ನು ಶಾಖ ಸೂಚ್ಯಂಕ ಕೋಷ್ಟಕದಲ್ಲಿ ಗಣಿಸಲಾಗುತ್ತದೆ. ಉಷ್ಣಾಂಶ ಹೆಚ್ಚಾದಂತೆ ಆರ್ದ್ರೀಕರಣವನ್ನು ಸಾಧಿಸಲು ಬೇಕಾದ ನೀರಿನ ಬಾಷ್ಪದ ಪ್ರಮಾಣ ಹೆಚ್ಚಾಗುತ್ತದೆ. ನೀರಿನ ಒಂದು ಪ್ರಮಾಣದ ಉಷ್ಣಾಂಶ ಕಡಿಮೆಯಾದಂತೆ ಅದು ಅಂತಿಮವಾಗಿ ಜಲರಾಶಿಯನ್ನು ಸೇರಿಸಿಕೊಳ್ಳದೆ ಅಥವಾ ಕಳೆದುಕೊಳ್ಳದೆ ಆರ್ದ್ರೀಕರಣದ ಬಿಂದುವನ್ನು ತಲುಪುತ್ತದೆ. ಗಾಳಿಯ ಒಂದು ಪ್ರಮಾಣದಲ್ಲಿ ನೀರಿನ ಬಾಷ್ಪದ ಪ್ರಮಾಣದಲ್ಲಿನ ವ್ಯತ್ಯಾಸಗಳು ಸಾಕಷ್ಟು ದೊಡ್ಡದಾಗಿರಬಹುದು. ಉದಾಹರಣೆಗೆ, ಆರ್ದ್ರೀಕರಣಕ್ಕೆ ಹತ್ತಿರವಿರುವ ಗಾಳಿಯ ಒಂದು ಭಾಗ ೩೦ °Cನಲ್ಲಿ ಗಾಳಿಯ ಪ್ರತಿ ಘನ ಮೀಟರ್‍ಗೆ ೨೮ ಗ್ರಾಂ ನೀರನ್ನು ಹೊಂದಿರಬಹುದು, ಆದರೆ ೮ °Cನಲ್ಲಿ ಗಾಳಿಯ ಪ್ರತಿ ಘನ ಮೀಟರ್‍ಗೆ ಕೇವಲ ೮ ಗ್ರಾಂ ನೀರನ್ನು ಹೊಂದಿರಬಹುದು.

ಆರ್ದ್ರತೆಯ ಮೂರು ಮುಖ್ಯ ಅಳತೆಗಳಿವೆ: ನಿರಪೇಕ್ಷ, ಸಾಪೇಕ್ಷ ಮತ್ತು ನಿರ್ದಿಷ್ಟ. ನಿರಪೇಕ್ಷ ಆರ್ದ್ರತೆ ಎಂದರೆ ಪ್ರತಿ ಘನ ಮೀಟರ್‍ಗೆ ಗ್ರಾಂನಲ್ಲಿ ಅಥವಾ ಪ್ರತಿ ಕೆ.ಜಿ.ಗೆ ಗ್ರಾಂನಲ್ಲಿ ವ್ಯಕ್ತಪಡಿಸಲಾಗುವ ಗಾಳಿಯಲ್ಲಿನ ನೀರಿನ ಪ್ರಮಾಣ. ಪ್ರತಿಶತವಾಗಿ ವ್ಯಕ್ತಪಡಿಸಲಾಗುವ ಸಾಪೇಕ್ಷ ಆರ್ದ್ರತೆಯು ಆ ಉಷ್ಣಾಂಶದಲ್ಲಿನ ಗರಿಷ್ಠಕ್ಕೆ (ಅತ್ಯುನ್ನತ ಬಿಂದು) ಸಾಪೇಕ್ಷವಾಗಿರುವ ಪ್ರಸಕ್ತ ನಿರಪೇಕ್ಷ ಆರ್ದ್ರತೆಯನ್ನು ಅಳೆಯುತ್ತದೆ. ನಿರ್ದಿಷ್ಟ ಆರ್ದ್ರತೆಯು ನೀರಿನ ಬಾಷ್ಪದ ರಾಶಿ ಮತ್ತು ತೇವವಾದ ಗಾಳಿಯ ಭಾಗದ ಒಟ್ಟು ರಾಶಿಯ ಅನುಪಾತವಾಗಿದೆ.

ಆರ್ದ್ರಮಾಪಕ

ಆರ್ದ್ರತೆಯನ್ನು ಅಳೆಯಲು ಬಳಸಲಾಗುವ ಸಾಧನವನ್ನು ಸೈಕ್ರೋಮೀಟರ್ ಅಥವಾ ಆರ್ದ್ರಮಾಪಕ ಎಂದು ಕರೆಯಲಾಗುತ್ತದೆ. ಆರ್ದ್ರತಾಸ್ಥಾಪಿಯು ಆರ್ದ್ರತೆಯಿಂದ ಪ್ರಚೋದಿತವಾದ ಒಂದು ಸ್ವಿಚ್ಚು. ಇದನ್ನು ಹಲವುವೇಳೆ ತೇವಕಳೆ ಸಾಧನವನ್ನು ನಿಯಂತ್ರಿಸಲು ಬಳಸಲಾಗುತ್ತದೆ.

ದೂರದಲ್ಲಿ ಇರಿಸಲಾದ ಉಪಗ್ರಹಗಳನ್ನು ಬಳಸಿ ಜಾಗತಿಕ ಮಟ್ಟದಲ್ಲೂ ಆರ್ದ್ರತೆಯನ್ನು ಅಳೆಯಲಾಗುತ್ತದೆ. ಈ ಉಪಗ್ರಹಗಳು ಹವಾಗೋಲದಲ್ಲಿ ೪ ರಿಂದ ೧೨ ಕಿ.ಮಿ ನಡುವಿನ ಎತ್ತರದಲ್ಲಿ ನೀರಿನ ಸಾಂದ್ರತೆಯನ್ನು ಪತ್ತೆಹಚ್ಚಬಲ್ಲವು. ನೀರಿನ ಬಾಷ್ಪವನ್ನು ಅಳೆಯಬಲ್ಲ ಉಪಗ್ರಹಗಳು ಅತಿಗೆಂಪು ವಿಕಿರಣಕ್ಕೆ ಸೂಕ್ಷ್ಮಗ್ರಾಹಿಯಾದ ಸಂವೇದಕಗಳನ್ನು ಹೊಂದಿರುತ್ತವೆ.

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ