ಅರಿವಳಿಕೆ, ಅರಿವಳಿಕಗಳು

ಅರಿವಳಿಕೆ, ಅರಿವಳಿಕಗಳು (ಅನಿಸ್ತೀಸಿಯ,ಅನಿಸ್ತೆಟಿಕ್ಸ್ ). : ತಿಳಿವೂ ಅರಿವೂ ಕಳೆದಿರುವುದೇ ಅರಿವಳಿಕೆ(ಅನಿಸ್ತೀಸಿಯ). ಅರಿವನ್ನು ಅಳಿಸುವ ಕಾರಣಗಳೇ ಅರಿವಳಿಕಗಳು (ಅನಿಸ್ತೆಟಿಕ್ಸ್). ಮುಖ್ಯವಾಗಿಶಸ್ತ್ರಕ್ರಿಯೆ ಆಗುವಾಗಿನ ನೋವು ಗೊತ್ತಾUದಂತೆ ಮಾಡುವುದೇ ಅರಿವಳಿಕೆಯ ಉದ್ದೇಶ.ಆದರೂ ಮಿದುಳು, ಬೆನ್ನುಹುರಿಗಳ ಹಲವು ರೋಗಗಳಲ್ಲೂ ಇದೊಂದು ಲಕ್ಷಣವಾಗಿಯೂಇರುವುದುಂಟು. ಶಸ್ರ್ತ ಕಿಯೆಯ ಅರಿವಳಿಕೆ ಮೈಯೆಲ್ಲದರ ಇಲ್ಲವೇ ಒಂದು ತಾವಿನದು(ಲೋಕಲ್) ಆಗಿರಬಹುದು. ದೇಹದ ಒಂದು ಭಾಗದಲ್ಲಿ (ತಾವು) ಮಾತ್ರ ಹೀಗೆಅರಿವು ಇಲ್ಲದಾಗುವುದು.ಅರಿವಳಿಕೆ ಎಂಬುದರ ಸಮ ಪದವಾಗಿ ಕೆಲವೇಳೆ ಬಳಸುವ ನೋವರಿವಳಿಕೆಯ(ಅನ್ಯಾಲ್ಜಿಸಿಯ) ಅರ್ಥವೇ ಬೇರೆ. ನೋವರಿವಳಿಕೆಯಲ್ಲಿ ರೋಗಿಯ ಮೈಯ ಒಂದುಭಾಗದಲ್ಲಿ ಇಲ್ಲವೇ ಪೂರ್ತಿಯಾಗಿ ನೋವು ಗೊತ್ತಾಗದಂತೆ ಇದ್ದರೂ ಮುಟ್ಟಿದರೆಗೊತ್ತಾಗುತ್ತದೆ. ಒತ್ತಿದರೂ ತಿಳಿಯುತ್ತದೆ. ನೋವಿನ ಅರಿವು ಬಿಟ್ಟು ಇತರೆಲ್ಲ ಅರಿವುಗಳೂಚೆನ್ನಾಗಿರುವುವು. ಅದೇ ಅರಿವಳಿಕೆಯಲ್ಲಿ, ಮೈಯೆಲ್ಲ ಆದರೂ ಸರಿಯೆ. ತಾವಿನಲ್ಲಾದರೂಸರಿಯೆ, ಅಲ್ಲಿ ನೋವಿನದೂ ಸೇರಿದಂತೆ ಯಾವ ತೆರನ ಅರಿವೂ ತಿಳಿವಿಗೆ ಬರುವುದಿಲ್ಲ.

ಚರಿತ್ರೆ

ಅರಿವನ್ನು ಮಂದಗೊಳಿಸಿ, ನೋವು ಕಳೆಯಲು ಮಾನವ ಆದಿಯಿಂದಲೂಯತ್ನಿಸಿದ್ದಾನೆ. ಹಿಂದಿನ ಕಾಲದಲ್ಲಿ ಇದಕ್ಕಾಗಿ ಗಾಂಜಾವನ್ನು ಬಳಸುತ್ತಿದ್ದ ರು, ಮದ್ದುಗಳನ್ನುನುಂಗಿಸಿ ಮೇಲೆ ಬಳಿದುದಲ್ಲದೆ, ಹೊಗೆ ಹಾಕುವುದು, ಮಾಯಮಂತ್ರ, ನರ, ರಕ್ತನಾಳಗಳಮೇಲೆ ಒತ್ತುವುದೇ ಇತ್ಯಾದಿ ಮಾಡಿನೋಡಿದ್ದಾಗಿದೆ. ನೋವು ಕಳೆಯಲು ಅಫೀಮನ್ನುಕೊಡಲು ಮೊದಲು ಮಾಡಿದವ ಫ್ರಾನ್ಸಿನ ಅಂಗಕೆಲಸ ಶಾಸ್ತ್ರಜ್ಞ ಮೆಜೆಂಡಿ. ಆದರೆಅಲೆಕ್ಸಾಂಡರ್ ವುಡ್ (1853) ಚರ್ಮದಡಿ ಚುಚ್ಚುವ ಜೀಕಳಿಯನ್ನು (ಸಿರಿಂಜ್) ಕಂಡುಹಿಡಿವತನಕ ಇದನ್ನು ನುಂಗಿಸುತ್ತಿದ್ದ ರು. ಅರಿವಳಿಕಗಳು ಇಲ್ಲದಿದ್ದ ಹಿಂದಿನ ಕಾಲದಲ್ಲಿ ಸಕತ್ತುಖಾಯಿಲೆಯಿಂದ ರೋಗಿಯನ್ನು ಉಳಿಸಲು ಮಾತ್ರ ಶಸ್ತ್ರಕ್ರಿಯೆ ನಿಮಿಷದೊಳಗಾಗಿಆಗುತ್ತಿತ್ತು. ಅರಿವಳಿಕಗಳು ಬಂದ ಹೊಸದರಲ್ಲಿ, ಸರಳ ಚಿಕ್ಕ ಶಸ್ತ್ರಕ್ರಿಯೆಗಳು ಆಗುತ್ತಿದ್ದುವು. ಸುಮಾರು ಶತಮಾನದಿಂದಲೂ ಬಳಕೆಯಲ್ಲಿರುವ ನೈಟ್ರಸ್ ಆಕೈಡು, ಕ್ಲೋರೊಫಾರ್ಮ್,ಈಥರುಗಳು ಹೆಚ್ಚುಕಡಿಮೆ ಒಂದೇ ಬಾರಿಗೆ ಗೊತ್ತಾದುವು ಎನ್ನಬಹುದು. ಶಸ್ತ್ರಕ್ರಿಯೆಆಗುವಾಗ ನೋವಾಗದಂತೆ ಇರಿಸಲು ಈಥರಿನ ಬಳಕೆಯನ್ನು 1846ರ ಅಕ್ಟೋಬರ್16ರಲ್ಲಿ ಚಾಲ್ರ್ಸ್ ಜಾಕನ್, ವಿಲಿಯಂ ಟಿ.ಜಿ. ಮಾರ್ಟನ್ ಜನರೆದುರು ಮಾಡಿತೋರಿದಮೇಲೆ, ಆ ಕೆಲಸಕ್ಕಾಗಿ ಬರುವ ಅರಿವಳಿಕೆ, ಅರಿವಳಿಕ ಪದಗಳನ್ನು ಆಲಿವರ್ ವೆಂಡೆಲ್ಹೋಮ್ಸ್ ಸೂಚಿಸಿದ. ಈಥರನ್ನು ಕಂಡುಹಿಡಿವುದರಲ್ಲಿಕ್ರಾಫರ್ಡ್ ಲಾಂಗ್‍ನ ಪಾತ್ತವೂಇದೆ. ಈ ಮೂವರಲ್ಲಿ ಯಾರು ಹೆಸರಿಗೆ ಪಾತ್ರರು ಎನ್ನುವುದು ತಕರಾರಿನ ವಿಚಾರ.ಇದಕ್ಕೂ ಹಿಂದಿನ ಕಾಲದಿಂದ ನೋವು ಕಳೆವ ಯತ್ನಗಳು ಬೇಕಾದಷ್ಟು ಆಗಿದ್ದುವು.ಜೋಸೆಫ್ ಪ್ರೀಸ್ಟ್‍ಲಿ ನೈಟ್ರಸ್ ಆಕ್ಸೈಡನ್ನೂ (1772), ಆಮ್ಲಜನಕವನ್ನೂ (1774)ಕಂಡುಹಿಡಿದಾಗಿನಿಂದ, ಇವುಗಳ ಮತ್ತಿತರ ಕಾರಕಗಳ ಶೋಧನೆಗಳಿಂದ ಶಸ್ತ್ರಕ್ರಿಯೆಯಲ್ಲಿನಬಳಕೆಗಾಗಿ ಅರಿವಳಿಕೆ ಕೊನೆಗೆ ಹುಟ್ಟಿಕೊಂಡಿತು. ನೈಟ್ರಸ್ ಆಕ್ಸೈಡನ್ನು ಉಸಿರಲ್ಲಿಎಳೆದುಕೊಳಲು ಕೊಟ್ಟು ಹಲ್ಲಿನ ನೋವು ಕಳೆದು, ಹಂಫ್ರಿ ಡೇವಿ (1799) ಶಸ್ತ್ರಕ್ರಿಯೆಗಳಲ್ಲಿಇದನ್ನು ಬಳಸಲು ಸೂಚಿಸಿದ್ದ. ಇದನ್ನು ಯಾರೂ ಗಮನಿಸಲಿಲ್ಲ. ಹೀಗೆ ಸ್ವಲ್ಪ ಮಟ್ಟಿಗೆಉಸಿರುಕಟ್ಟಿಸಿ, ಇಂಗಾಲದ ಡೈಆಕೈಡನ್ನು ಉಸಿರಲ್ಲೆಳೆಸಿದರೆ ಅರಿವು ತಪ್ಪಿ ನೋವಿಲ್ಲದಾಗುವುದೆಂದು ತೋರಿಸಿದ. ಇನ್ನೂ ವೈದ್ಯ ಕಲಿಯುತ್ತಿದ್ದ ಹೆನ್ರಿ ಹಿಲ್ ಹಿಕ್ಮನ್, ಇದನ್ನು ಅವನುಪ್ರಕಟಿಸಿದರೂ (1824), ಯಾರೂ ಆಸಕ್ತಿ ತೋರಲಿಲ್ಲ. ಪ್ರಾಣಿಗಳಲ್ಲಿ ಅವನ ಪ್ರಯೋಗಗಳಿಗೆವೈದ್ಯ ಸಂಘಗಳು ಅಡ್ಡಿ ಒಡ್ಡಿದುವು. ಮೈಕೆಲ್‍ಫ್ಯಾgಡೆ ಈಥರನ್ನು ಉಸಿರಲ್ಲೆಲೆದುಕೊಂಡುನೋಡಿ ಏನಾಯಿತೆಂದು ವgದಿ ಮಾಡಿದ. 1842ನೆಯ ಮಾರ್ಚ್ 30ರಲ್ಲಿ ಕ್ರಾ¥ರ್ಡ್ವಿಲಿಯಂ ಲಾಂಗ್ ಶಸ್ತ್ರಕ್ರಿಯೆಯಲ್ಲಿ ಅರಿವಳಿಸಲು ಈಥರನ್ನು ಬಳಸಿದ್ದರೂ ಅದನ್ನುಯಾರಿಗೂ ತಿಳಿಸದೆ ತೆಪ್ಪಗಿದ್ದ. ಡಿಸೆಂಬರ್ 1844ರಲ್ಲಿ ಹಲ್ಲು ವೈದ್ಯ ವೆಲ್ಸ್ ಹಲ್ಲು ಕೀಳಿಸಿಕೊಳಲುತಾನೇ ನೈಟ್ರಸ್ ಆಕ್ಸೈಡನ್ನು ತೆಗೆದುಕೊಂಡ. ಶಸ್ತ್ರಕ್ರಿಯೆಯಲ್ಲಿ ಇದರ ಬಳಕೆಯನ್ನುಜನರಿಗೆಲ್ಲ ತೋರುವ ಇವನ ಯತ್ನ ಗಲಾಟೆಯಿಂದ ಕೈಗೂಡಲಿಲ್ಲ. ಇದರಿಂದಾಗಿ ಇವನನ್ನುಮೋಸಗಾರನೆಂದರು. ಆಮೇಲಿನ ಯತ್ನಗಳು ಕೈಗೂಡಿದುವು. 16ನೆಯ ಶತಮಾನದಲ್ಲಿಸ್ಪೇನಿನವರು ಆಕ್ರಮಿಸುವುದಕ್ಕೆ ಮುಂಚೆಯೂ ಪೆರು ನಿವಾಸಿಗಳು ದಣಿವು, ಹಸಿವು ತಡೆಯಲುಕೋಕ ಎಲೆಗಳನ್ನು ಅಗಿಯುತ್ತಿದ್ದರು. ಅದರ ಕ್ಷಾರರೂಪಿಯಾದ ಕೊಕೇನನ್ನು ಕಣ್ಣಿನಶಸ್ತ್ರಕ್ರಿಯೆಯಲ್ಲಿ ಮೊಟ್ಟ ಮೊದಲಾಗಿ 1884ರಲ್ಲಿ ವಿಯನ್ನಾದ ವೈದ್ಯ ಕಾರ್ಲ್ ಕೊಲ್ಲರ್ಬಳಸಿದಾಗ ತಾವಿನ ಅರಿವಳಿಕೆ ಕಾಲಿಟ್ಟಿತು. ಕೊಕೇನ್ ಅಪಾಯಕರ, ವಿಷಕರವಾದ್ದರಿಂದಅಷ್ಟಾಗಿ ಈಗ ಬಳಕೆಯಲ್ಲಿಲ್ಲ.

ಮೈಯೆಲ್ಲದರ ಅರಿವಳಿಕೆ

ಉಸಿರೆಳೆತ

ರೋಗಿ ಉಸಿರಲ್ಲಿ ಎಳೆದುಕೊಳ್ಳುವ ಅನಿಲದಇಲ್ಲವೆ. ಆರಿಹೋಗುವ ಕಾರಕಗಳಿಂದ ಉಸಿರೆಳೆತದ ಅರಿವಳಿಕೆ ಆಗುವುದು. ಬಾಯಿ,ಮೂಗು ಮೊಗಗಳ ಮೇಲಿನ ಮುಖ್ಯವಾಗಿ ಈಚೆಗೆ ಬಳಕೆ ಇರುವ ಪ್ಲಾಸ್ಟಿಕ್ ಶಸ್ತ್ರಕ್ರಿಯೆಆಗುತ್ತಿರುವಾಗ, ಬಾಯಿ ಮೂಗುಗಳ ಮೂಲಕ ಅರಿವಳಿಕ ಅನಿಲಗಳನ್ನು ಒಳಹೊಗಿಸುವಾಗಆತಂಕವಾಗುತ್ತಿತ್ತು. ಕೊನೆಗೆ ಉಸಿರ್ನಾಳಾಂತರ ಒಂದು ರಬರ್ ಕೊಳವೆಯನ್ನು ಇರಿಸುವಂತಾದಾಗ ಅನುವಾಯಿತು. ಬಹಳ ಹೊತ್ತು ನಡೆಸಬೇಕಾದ ಶಸ್ತ್ರಕ್ರಿಯೆಗಳಲ್ಲಿ ತಲೆಯನ್ನುಹೇಗೆಂದರೆ ಹಾಗೆ ತಿರುಗಿಸಬೇಕಿರುವ ಮಿದುಳಿನ ಶಸ್ತ್ರಕ್ರಿಯೆಗೆ ಇದು ಅನುಕೂಲ.ರೋಗಿಯನ್ನು ದೂರದಿಂದಲೇ ಅರಿವಳಿಕೆಗಾರ ಹತೋಟಿಯಲ್ಲಿ ಇಟ್ಟುಕೊಳ್ಳಬಹುದು.ಭಾಗವಾಗಿಯೋ ಪೂರ್ತಿಯಾಗಿಯೋ ಪುಪ್ಪುಸ ತೆಗೆಯುವಲ್ಲಿ, ವ¥ಯ ಬೂರನ್ಬು(ಹರ್ನಿಯ) ನೇರ್ಪಡಿಸುವಲ್ಲಿ ಶಸ್ತ್ರಕ್ರಿಯೆ ಆಗಬೇಕಾದ ಅಂಗವೇ ಉಸಿರಾಟದಿಂದಆಡುತ್ತಿದ್ದುದರಿಂದ ಕಷ್ಟವಾಗುತ್ತಿತ್ತು. ಇದಕ್ಕಾಗಿ ಹಿಡಿತದಲ್ಲಿನ ಉಸಿರಾಟ ಹುಟ್ಟಿಕೊಂಡಿತು.ಅಂದರೆ ಅರಿವಳಿಕೆಗಾರನೇ ತನ್ನ ಕೈಯಲ್ಲಿನ ರಬ್ಬರ್ ಚೀಲದಿಂದ ಬಲವಂತವಾಗಿ ಒತ್ತಿಉಸಿರನ್ನು ಒಳತಳ್ಳಿ ಸಡಿಲಿಸುತ್ತಿರುವನು, ಅಲ್ಲಿಗೆ ರೋಗಿಯ ಉಸಿರಾಟ ಪೂರ್ತಿ ಇವನಕೈಯಲ್ಲಿರುವುದು. ನಿತ್ಯದ ಉಸಿರಾಟವನ್ನು ಹಲವಾರು ವಿಧಾನಗಳಿಂದ ತುಸು ಹೊತ್ತುತಡೇದಿಡಲೂಬಹುದು.ಸತತ ಸುಧಾರಣೆ ಮತ್ತು ಬದಲಾವಣೆ ವಿಶೇಷ ಅರಿವಳಿಕ ತಂತ್ರಗಳ ಬಳಕೆಗೆಅನುಕೂಲಿಸಿತು. ಅರಿವಳಿಕಗಳ ಮಿಶಣಗಳಿಂದ ಇಂಗಾಲದ ಡೈಯಾಕೈಡನ್ನು ಸೋಡಾಲೈಮಿನಿಂದ ಹೀರುತ್ತಿದ್ದರೆ, ಅರಿವಳಿಸುತ್ತಿರಲು ಅರಿವಳಿಕ ಸ್ವಲ್ಪವೇ ಸಾಕು.ನೈಟ್ರಸ್ ಆಕೈಡ್ ಈಗ ಎಲೆಲ್ಲೂ ಬಳಕೆಯಲ್ಲಿದೆ. ಆದರೂ ಸಾಕಷ್ಟು ಆಮಜನಕದೊರಕದೆ ಆಮೇಲೆ ಮಿದುಳಿಗೆ ಕೆಡುಕಾಗಿಸುವ ಅಪಾಯವಂತೂ ಅರಿವಳಿಕೆಗಾರನಗಮನದಲ್ಲಿ ಇದ್ದೇ ಇರುತ್ತದೆ. ದುರ್ಬಲ ಅರಿವಳಿಕವಾದ್ದರಿಂದ, ಇತರ ಅರಿವಳಿಕಗಳೂಂದಿಗೇಇದರ ಬಳಕೆ ಹೆಚ್ಚು.:ಉಸಿರೆಳೆತದ ಅರಿವಳಿಕಗಳಲ್ಲಿ ಡೈಯೆತಿಲ್ ಈಥರಿನ ಪಾತ್ರ ಹೆಚ್ಚಿನದು. ಇದವನ್ನುಕೊಟ್ಟಾಗ, ಜೊಲ್ಲುಸುರಿಕೆ, ವಾಂತಿ, ಎದೆಗೆಮ್ಮು ಆಗುವುದರಿಂದ ಸೈಕ್ಲೋಪ್ರೋಪೈಲ್,ಸೆಪ್ರೆತಿಲೀನ್ ಇತ್ಯಾದಿ ಬೇರೆ ಈಥರುಗಳನ್ನು ಕೊಟ್ಟು ನೋಡಿದ್ದಾಗಿದೆ. ಡೈವಿನೈಲ್ಈಥರು ಮಕ್ಕಳಲ್ಲಿನ ತುಸು ಕಾಲದ ಅರಿವಳಿಕೆಗೆ ಚೆನ್ನು. ಇದು ಎಷ್ಟೇ ಬಲವಾಗಿದ್ದರೂಹೆಚ್ಚು ಹೊತ್ತು ಕೊಡುತ್ತಿದ್ದರೆ, ಆಗಾಗ್ಗೆ ಇದರಿಂದ ಕೆಡಕಾಗುವುದರಿಂದ ಅಷ್ಟಾಗಿ ಹೆಚಿನಬಳಕೆಯಲ್ಲಿಲ್ಲ.ಎಡಿನ್‍ಬರೋದ ಜೇಮ್ಸ್ ಯಂಗ್ ಸಿಂಪ್ಸನ್ ತನ್ನ ಮೇಲೂ ತನ್ನ ಒಂದಿಗರಮೇಲೂ ಮೊದಲು ನವೆಂಬರ್ 1847ರಲ್ಲಿ ಬಳಸಿನೋಡಿ ಬಳಕೆಗೆ ತಂದ ಕ್ಲೋರೊಫಾರ್ಮ್,ಈಥರಿಗಿಂತ ಬಲವಾದರೂ ಇನ್ನೂ ವಿಷಕರ. ಮೊದಮೊದಲು ಈಥರಿನ ಬದಲಾಗಿಇದೇ ಎಲ್ಲೆಲ್ಲೂ ಬಳಕೆಯಲ್ಲಿತ್ತು. ಇದರ ಅಪಾಯಗಳನ್ನು ಗಮನಿಸಿದಂತೆಲ್ಲ ಅರಿವಳಿಕವಾಗಿಇದರ ಬಳಕೆ ತೀರ ಇಳಿದಿದೆ.ಶಸ್ತ್ರಕ್ರಿಯೆಯ ಹರವು ಹರಡಿದಂತೆಲ್ಲ, ನಿತ್ರಾಣಿ ರೋಗಿಗಳಲ್ಲೂ ಅರಿವಳಿಕೆಬಳಸುವಂತಾಯಿತು. ಇದಕ್ಕೆ ಈಥರು, ಕೋರೊಫಾರ್ಮ್ ಸಾಕಾಗಲಿಲ್ಲ. ಇವುಗಳಿಂದಅರಿವು ತಪ್ಪುವುದು ನಿಧಾನ. ಆಮೇಲೆ ಕೆಮ್ಮು ಹುಟ್ಟಿಸುತ್ತಿದ್ದುವು. ಮೊದಲ ಹಂತದಲ್ಲೇ ಕೋರೋಫಾರ್ಮ್ ಗುಂಡಿಗೆಗೆ ಮಾರಕವಾಗಿ, ಕೆಲವು ತಾಸುಗಳು ಕೊಟ್ಟ ಮೇಲೆ ಈಲಿಗೂವಿಷಕರವಾಗುವುದು. ಇದಕ್ಕಾಗಿ ಇವನ್ನು ಕಡಿಮೆ ಮಾಡಿ, ಬಹುವಾಗಿ ನೈಟ್ರಸ್ ಆಕೈಡ್,ಆಮ್ಲಜನಕ ಕೊಡುವುದನ್ನು ಹೆಚ್ಚಿಸಲಾಯಿತು.ಕ್ಲೋರೊಫಾರ್ಮ್‍ಗಿಂತ ಟ್ರೈಕ್ಲೋರೊಯೆತಿಲೀನ್ (ಟ್ರೈಲೀನ್) ಗುಂಡಿಗೆಗೆ ಅಷ್ಟಾಗಿಕೆಡುಕಾಗದಂತಿದ್ದರೂ ಯಾವಾಗಲೂ ಸ್ನಾಯುಗಳನ್ನು ಪೂರ್ತಿ ಸಡಿಲಗೊಳಿಸದು.ಹೆರಿಗೆಯಲ್ಲೂ ಹಲ್ಲು ಕೀಳುವಾಗಲೂ ಇದೀಗ ನೋವರಿವಳಿಸಲು ಚೆನ್ನಾಗಿದೆ. ಇದುಇಂಗ್ಲೆಂಡಿನಲ್ಲಿ ತುಂಬ ಜನಪ್ರಿಯವಾಗಿತ್ತು. ಮೈಯೆಲ್ಲದರ ಅರಿವಳಿಕವಾಗಿ ಇದನ್ನುನೈಟ್ರಸ್ ಆಕೈಡ್, ಆಮ್ಲಜನಕಗಳೊಂದಿಗೆ ಕೊಡುವುದುಂಟು. ಮುಚ್ಚಿದ ಹರಿಸುತ್ತಿನಲ್ಲಿ(ಕೋಸ್ಡ್ ಸರ್ಕ್ಯೂಟ್) ಟ್ರೈಕ್ಲೋರೊಯೆತಿಲೀನನ್ನು ಸೇವಿಸಲು ಕೊಟ್ಟರೆ. ಹರಿಸುತ್ತಿನಲ್ಲಿರುವಸೋಡಾ ಲೈಮ್‍ನೊಂದಿಗೆ ಇದು ಕೂಡಿ ವಿಷಕರ ವಸ್ತುವಾಗುವುದು. ಅಲ್ಲದೆ ವಿದ್ಯುತಿನಸುಡಿಕವೇ (ಕಾಟರಿ) ಮುಂತಾದವುಗಳಿಂದ ಬರುವ ಕಾವಿನಲ್ಲಿ ಇದು ಒಡೆದುವಿಷಕರವಾಗುತ್ತದೆ.ಸಿಡಿವ ಅನಿಲವಾದ ಎತಿಲೀನ್ 1923ರಲ್ಲಿ ಬಳಕೆಗೆ ಬಂದಿತು. ನೈಟ್ರಸ್ ಆಕೈಡಿಗಿಂತಇದು ಬಲು ಬಲವಾಗಿದ್ದುದರಿಂದ ಇದರೊಂದಿಗೆ ಒಂದಿಷ್ಟು ಆಮ್ಲಜನಕವನ್ನುಸೇರಿಸಿಕೊಡಬಹುದು.ತುಸು ಹೊತ್ತಿನ ಉಸಿರೆಳೆತದ ಅರಿವಳಿಕವಾಗಿ, ಹೆಫೆಲ್ಡರ್ (1848) ಮೊದಲುಬಳಸಿದ ಈತಿಲ್‍ಕೋರೈಡಿನ ಬಳಕೆ ಹೆಚ್ಚಾಗಿಲ್ಲದಿದ್ದರೂ ಇದು ಕೋರೊಫಾರ್ಮಿನಷ್ಟೇಗುಂಡಿಗೆಗೆ ವಿಷಕರ. ಸಿಂಚನ ಯಂತ್ರದಿಂದ ಚರ್ರನೆ ಹೊರಬಿಟ್ಟು, ಮೈಮೇಲಿನ ಚರ್ಮ,ಅದರಡಿಯ ಊತಕಗಳನ್ನು (ಟಿಷ್ಯೂಸ್) ನೀರ್ಗಲ್ಲಂತಾಗಿಸಲು ಈತಿಲ್ ಕೋರೈಡವನ್ನುಬಳಸಬಹುದು.ಬಹುಪಾಲು ಹೈಡೋಕಾರ್ಬನ್ ಅನಿಲಗಳು ಅರಿವಳಿಕಗಳು ಕೆಲಕಾಲ ಜನಪ್ರಿಯವಾಗಿದ್ದ, ಅಮೆರಿಕದ ಈತಿಲೀನೂ ಜರ್ಮನಿಯ ಅಸಿಟಿಲೀನೂ ಇಂಥವೇ. ಸೈಕೊಪ್ರೊಪೇನು1934 ರಲ್ಲಿ ಮೊದಲು ರೋಗಿಗಳಲ್ಲಿ ಬಳಕೆಗೆ ಬಂದು ಈಗಲೂ ಚೆನ್ನಾದ ಅರಿವಳಿಕಎನಿಸಿದೆ. ಬಲವಾದ ಮಂಪರಕಾರಿಯಾದ್ದರಿಂದ, ಇದರೂಂದಿಗೆ ಹೆಚ್ಚಾಗಿ ಆಮಜನಕವನ್ನುಸೇರಿಸುವುದು ಒಂದು ಅನುಕೂಲ. ಉಸಿರಾಟವನ್ನು ಕುಂದಿಸುವುದರಿಂದ ಎದೆಗೂಡಿನಶಸ್ತ್ರಕ್ರಿಯೆಗಳಲ್ಲಿ ಕೊಡುವಂಥದು. ಇದು ಹತ್ತಿಕೊಂಡು ಉರಿವುದರಿಂದಲೂ ಬಲೆದುಬಾರಿ ಆದ್ದರಿಂದಲೂ ಮುಚ್ಚಿದ ಹರಿಸುತ್ತಿಸಲೇ ಇದನ್ನು ಕೊಡಬೇಕು. ಗುಂಡಿಗೆ ಮೇಲಿನಇದರ ಪರಿಣಾಮ ಇನ್ನೂ ನಿರ್ಧಾರವಾಗಿಲ್ಲ. ಕ್ಯುರೇರ್ ರೇ ಬಂದ ಮೇಲೆ ಇದರ ಬಳಕೆಹೆಚ್ಚಿತು.1956ರಲ್ಲಿ ಎಲೆಲ್ಲೂ ಬಳಕೆಗೆ ಬಂದ, ಹ್ಯಾಲೋತೇನ್ (ಪ್ಲೂವೇತೇನ್) ಬಣ್ಣವಿರದ,ಆರಿಹೋಗುವ, ಸುವಾಸನೆಯ, ಎಷ್ಟು ಆಮ್ಲಜನಕ ಸೇರಿಸಿದರೂ ಹೊತ್ತಿ ಉರಿಯದ,ಸಿಡಿಯದ ದ್ರವ. ಇಷ್ಟಾದರೂ ಇದರಿಂದ ರಕ್ತನಾಳ ಹಿಗ್ಗಲಿಕೆ, ರಕ್ತದೊತ್ತಡದ ಇಳಿತ,ನಿಧಾನ ಗುಂಡಿಗೆಬಡಿತ ಇವೆಲ್ಲ ಆಗುವುವಲ್ಲದೆ, ಇದರ ಬಳಕೆಯಿಂದ ಎಷ್ಟೋ ಮಂದಿಸತ್ತಿದ್ದಾರೆ. ಈಡಾಗುವವರಲ್ಲಿ ಯಕೃತ್ತಿಗೆ ಅಪಾಯಕಾರಿ (ಲಿವರ್ ).

ಗುದನಾಳಗಳಲ್ಲಿ

ಗುದನಾಳದೊಳಕ್ಕೆ (ರೆಕ್ಟಂ) ಸೇರಿಸಿಟ್ಟು ಅರಿವು ತಪ್ಪಿಸುವ ವಿಧಾನವೇಗುದನಾಳ (ರೆಕ್ಟಲ್) ಅರಿವಳಿಕೆ. ಇದರಲ್ಲಿಬಹುವಾಗಿ ಬಳಸುವ ಮದ್ದುಗಳು ಈಥರ್,ಬಾರ್ಬಿಟುರೇಟುಗಳು, ಅಮೈಲೀನ್ ಹೈಡ್ರೇಟಿನಲ್ಲಿ ಕರಗಿಸಿದ ಟ್ರೈಬ್ರೋಮೊಯೆತಿಲ್ಮದ್ಯಸಾರ. ಈ ಕೊನೆಯದು ನೇರವಾಗಿ ಮೂತ್ರನಾಳಕದೊಳಕ್ಕೆ (ಯೂರಿಟರ್) ಚುಚ್ಚಿಹೊಗಿಸಿ ಮೂತ್ರಪಿಂಡಗಳಲ್ಲಿನ ಸುತ್ತಲೂ ಹಿಡಿದಿರುವ ತೂತಡಕನ್ನು (ಸ್ಟ್ರಿಕ್ಚರ್) ಬಿಡಿಸಲುಅನುಕೂಲ. ಎರಡನೆಯ ಮಹಾಯುದ್ಧದಲ್ಲಿ ಅರಿವಳಿಕೆಗಾಗಿ ಇದನ್ನೇ ರಕ್ತನಾಳಾಂತರಕೊಡಲಾಗುತ್ತಿತ್ತು. ಶಸ್ತ್ರಕ್ರಿಯೆಯ ಮುನ್ನ ಕೊಡುವ ಮೂಲ ಅರಿವಳಿಕಗಳಾಗಿ ಮಾತ್ರಗುದನಾಳ ಅರಿವಳಿಕಗಳು ಈಗ ಬಳಕೆಯಲ್ಲಿವೆ. ತಾಸುಗಳ ಹೊತ್ತು ಅರಿವಳಿಸಲು ಇವುತಕ್ಕವಲ್ಲ.

ವಶ್ಯ ಸುಫಿ (ಹಿಪ್ನೋಟಿಸಂ)

ಯುದ್ಧ ಸೆರೆವಾಸಿಗಳ ಶಿಬಿರದಲ್ಲಿದ್ದಂತೆ ಬೇಕಾದಷ್ಟ್ಟುಅರಿವಳಿಕೆ ವಸ್ತುಗಳು ಇಲ್ಲದಾಗಲೂ ಹಲ್ಲಿನ ಚಿಕಿತ್ಸೆಗಳಲ್ಲೂ ಸಲಮಟ್ಟಿಗೆ ಹೆರಿಗೆ ಕಾಲದಲ್ಲೂಇದನ್ನು ಬಳಸಬಹುದು.

ರಕ್ತನಾಳಾಂತರ

ಮೊಟ್ಟಮೊದಲು ರಕ್ತನಾಳಾಂತರ ಕೋರಾಲ್ ಹೈಡ್ರೇಟನ್ನು ಚುಚ್ಚಿನೋಡಿದವ ಲಯನ್ಸಿನ ಓರೆ(1872). ಸಿರ ರಕ್ತನಾಳದಲ್ಲಿನ ಹರಿವಿನೊಳಕ್ಕೆ ನೇರವಾಗಿಅರಿವಳಿಕವನ್ನು ಚುಚ್ಚಿಬಿಡುವ ರಕ್ತನಾಳಾಂತರ ಅರಿವಳಿಕೆ 1932ರಿಂದ ಬಳಕೆಯಲ್ಲಿದೆ.ಯುದ್ಧಕಾಲದಲ್ಲಂತೂ ವಿಶೇಷ ಪರಿಕರಗಳಿಲ್ಲದೆ ಕೊಡುವುದರಿಂದ ಹೆಚ್ಚಿನ ಬಳಕೆಯಲ್ಲಿತ್ತು. ಕೊಟ್ಟಕೂಡಲೇ ವರ್ತಿಸುವ ಬಾರ್ಬಿಟುರೇಟುಗಳೇ ಈ ಕೆಲಸಕ್ಕೆ ಚೆನ್ನು. ಈ ತೆರನಅರಿವಳಿಕೆಯಲ್ಲಿ, ರೋಗಿಗೆ ಮೊಗದ ಮುಸುಕಿನ ಮೇಲೆ ಅಹಿತವಾದ ಮದ್ದು ಸುರಿಸಿಕೊಳುವತೊಡಕಿರದು; ಆದರೆ ಇದರಿಂದ ರಕ್ತ ಒತ್ತಡವಿಳಿದು, ಉಸಿರಾಟ ಕುಂದುವುದಲ್ಲದೆ,ಕೊಟ್ಟು ಬಿಟ್ಟ ಮೇಲೆ ಇದರ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡಲು ಬರದು. ಅಲ್ಲದೆ,ದನಿತಂತು (ರಾರಿಂಕ್ಸ್) ಸೆಡೆತುಕೊಂಡರೆ ಉಸಿರುಕಟ್ಟುವ ಅಪಾಯವಿದೆ. ಅನುಭವಿಮಾತ್ರ ಕೈಗೊಳ್ಳಬೇಕಾದ ವಿಧಾನವಿದು. ಕರಗುವ ಹೆಕ್ಸೊಬಾರ್ಬಟೋನ್ (ಇವಿಪಾನ್ಸೋಡಿಯಂ) ಹಿಂದೆ ಬಳಕೆಯಲ್ಲಿತ್ತು. ಈಗ ಕರಗುವ ತಯೋಷೆಂಟೋನ್ ಸೋಡಿಯಂ(ಪೆಂಟೋತಾಲ್ ಸೋಡಿಯಂ) ಎಲ್ಲರ ಮೆಚ್ಚುಗೆ ಗಳಿಸಿದೆಯಲ್ಲದೆ, ಇನ್ನಾವ ಬಾರ್ಬಿಟುರೇಟೂ ಇದರಷ್ಟು ಬಳಕೆಯಲ್ಲಿಲ್ಲ. ತಯೊಪೆಂಟಾಲ್ ಸೋಡಿಯಂನಷ್ಟೇ ಪ್ರಭಾವಸುರಿಟಾಲ್‍ಗೂ ಇದೆ. ಈ ಮದ್ದುಗಳನ್ನು ಒಂದೇ ಬಾರಿಯೋ ಭಾಗವಾಗಿಯೋಕೊಡಬಹುದು. ಬೇರೆ ತೆರನ ಅರಿವಳಕೆಯೊಂದಿಗೂ ಕೊಡಬಹುದು. ಶಸ್ತ್ರಕ್ರಿಯೆಆದಮೇಲಿನ ನೋವಿಗಾಗಿ ಮದ್ಯಸಾರವನ್ನು ರಕ್ತನಾಳಾಂತರ ಚುಚ್ಚಿಹೋಗಿಸುವವಾಡಿಕೆಯಿತ್ತು. ಅನೇಕ ತೆರನ ನೋವುಗಳಿಗೂ ಕೆಲವೇಳೆ ಶಸ್ತ್ರಕ್ರಿಯೆಗೋಸ್ಕರವಾದಅರಿವಳಿಕೆಗಾಗಿಯೂ ರಕ್ತನಾಳಾಂತರ ಪ್ರೊಕೆಯ್ನ್ ಹೈಡ್ರೊಕ್ಲೋರೈಡನ್ನು ಚುಚ್ಚಿಹೊಗಿಸಲಾಗಿದೆ. ಇದನ್ನು ಹೀಗೆ ಕೊಟ್ಟಾಗ, ರಕ್ತನಾಳದ ಸೆಡೆತವನ್ನೂ ಕೆರೆತವನ್ನೂ ಕಳೆಯುತ್ತದೆ.ಕೆಲವೇಳೆ ಉಸಿರುಕಟ್ಟುವ ಸಂಭವ ಇರುವುದರಿಂದ, ರಕ್ತನಾಳಾಂತರದ ಅರಿವಳಿಕೆಯನ್ನು ಸುಲಭ, ಹಗುರ ಎನ್ನುವಂತಿಲ್ಲ. ರಕ್ತನಾಳಾಂತರ ಕೊಡಲು ತಯೊಪೆಂಟೋನ್ಸೋಡಿಯಂಗಿಂತಲೂ ಒಳೆಯ ಅರಿವಳಿಕ ವಸ್ತುವನ್ನು ತರುವ ಯತ್ನಗಳು ಕೈಗೂಡಿಲ್ಲ.ಹೆಚ್ಚು ಬಳಕೆಯಲ್ಲಿರುವ ವಿಧಾನ ಒಂದಿದೆ. ಶಸ್ತ್ರಕ್ರಿಯೆಯ ಹಿಂದಿನ ರಾತ್ರಿ, ಮಾರನೆಯಬೆಳಿಗ್ಗೆ ಶಾಮಕ ಮದ್ದುಗಳನ್ನು ಕೊಟ್ಟು, ಶಸ್ತ್ರಕ್ರಿಯೆಯ ಸದ್ಯ ಮುಂಚೆ ರಕ್ತನಾಳಾಂತರವಾಗಿಸ್ನಾಯು ಸಡಿಲಕವಾದ (ಮಸಲ್ ರಿಲ್ಯಾಕ್ಸೆಂಟ್) ಸಕ್ಸಿನೈಲ್ ಕೋಲೀನೊಂದಿಗೆತಯೊಪೆಂಟೋನ್ ಸೋಡಿಯಮ್ಮನ್ನೂ ಉಸಿರಲ್ಲಿ ನೈಟ್ರಸ್ ಆಕೈಡೊಂದಿಗೆ ಆಮ್ಲಜನಕವನ್ನೂಕೊಡುವುದು 1945ರಿಂದ ಬಳಕೆಯಲ್ಲಿದೆ. ಈ ವಿಧಾನದಲ್ಲಿ ಅರಿವಳಿಕ ಅನಿಲವನ್ನುರೋಗಿಗೆ ಕೊಡಲು ಒಂದು ಪ್ಲಾಸ್ಟಿಕ್ ಕೊಳವೆಯನ್ನು ಉಸಿರ್ನಾಳದಲ್ಲಿ ತೂರಿಸಬೇಕು.ಕೊಳವೆ ಸರಿಯಾದ ಜಾಗದಲ್ಲಿದ್ದು ಉಸಿರು ಆಡುತ್ತಿರುವುದನ್ನು ಗಮನಿಸಿ, ಟ್ಯೂಬೊಕ್ಯುರಾರೀನ್ ಕೊಡಬೇಕು. ಈ ಜೋಡಿ ಬಳಕೆಯಿಂದ ಅನಿಲದಂಥ ವಸ್ತುಗಳನ್ನು ಕೊಡಲುತೆರೆದಿರುವ (ಓಪನ್) ವಿಧಾನಗಳಿಂದ ಆಗಬಹುದಾದ ಬೆಂಕಿ, ಸಿಡಿತಗಳ ಅಪಾಯಗಳೇಇಲ್ಲದೆ, ಅರಿವಳಿಕೆ ಸರಾಗವಾಗಿ, ಸ್ನಾಯು ಸಡಿಲತೆ ಚೆನ್ನಾಗುವುದು. ಅರಿವಳಿಕಗಳುಮತ್ತಿತರ ಮದ್ದುಗಳನ್ನು ಹೀಗೆ ಜೊತೆಗೂಡಿಸಿ ಕೊಡುವುದರಿಂದ ಯಾವುದನ್ನೂ ಹೆಚ್ಚಿಗೆಕೊಡಬೇಕಿಲ್ಲ. ಇದರಿಂದ ಅಪಾಯ ತಗ್ಗುತ್ತದೆ ಈ ವಿಧಾನಕ್ಕೆ ಸಮತೋಲದ ಅರಿವಳಿಕೆಎಂದು ಹೆಸರು.

ಎಲುಬಾಂತರ

ಚುಚ್ಚಲು ರಕ್ತನಾಳ ಸಿಗದಾಗ ಎಲುಬಿನ ಒಳಗಿರುವ ಮಜ್ಜೆಯೊಳಕ್ಕೆದ್ರಾವಣವನ್ನು ಚುಚ್ಚಿ ಹೊಗಿಸುವುದರಿಂದಲೂ ತಯೋಪೆಂಟಾಲ್ ಸೋಡಿಯಂನಂಥಅರಿವಳಿಕಗಳನ್ನು ರೋಗಿಗೆ ಕೊಡಲು ಅವಕಾಶವಿದೆ. ಈ ವಿಧಾನಕ್ಕೆ ಎಲುಬಾಂತರಅರಿವಳಿಕೆ ಎಂದು ಹೆಸರು.

ತಾವಿನ ಅರಿವಳಿಕೆ

ಮೈಯಲ್ಲಿ ಒಂದೆಡೆಯಲ್ಲಿ ಅರಿವಿಲ್ಲದಂತೆ ಮಾಡುವ ವಿಧಾನವೇ ತಾವಿನ ಅರಿವಳಿಕೆ. ನೆಪೋಲಿಯನ್ನನ ಸೇನೆಯ ಶಸ್ತ್ರವೈದ್ಯನಾಗಿದ್ದ ಬ್ಯಾರನ್ ಲ್ಯಾರಿ(1812) ಮೊದಲು ಈ ವಿಧಾನ ಬಳಸಿದ. ಮಾಸ್ಕೋದಿಂದ ಹಿಂದಿರುಗುತ್ತಿದ್ದ ಊನಗೊಂಡಸೈನಿಕರನ್ನು ಮೊದಲು ಹಿಮಗಟ್ಟಿಸಿ ನೋವಿಲ್ಲದಂತೆ ಮಾಡಿ ಕೈಕಾಲುಗಳನ್ನು ಕತ್ತರಿಸುತ್ತಿದ್ದ .ಅನೇಕ ರಾಸಾಯನಿಕಗಳನ್ನು ತಾವಿನ ಅರಿವಳಿಕಗಳಾಗಿ ಬಳಸಿದ್ದರೂ ಪ್ರೊಕೆಯ್ನ್ಹೈಡ್ರೋಕ್ಲೋರೈಡಿನಿಂದ ಅಪಾಯ ತೀರ ಕಡಿಮೆ, ಸಿಂಕೊಕೆಯ್ನ್, ಪೈಪರೊಕೆಯ್ನ್,ಡೈಬುಕೆಯ್ನ್, ಟೆಟ್ರಕೆಯ್ನ್‍ಗಳ ಹೈಡೋಕ್ಲೋರೈಡುಗಳೂ ಬಳಕೆಯಲ್ಲಿವೆ.

ನರತಡೆ

ಒಂದೆಡೆಯ ನರ ಪೂರೈಕೆಯನ್ನು ತಡೆಗಟ್ಟುವಂತೆ ಒಂದು ತಾವಿನಅರಿವಳಿಕವನ್ನು ಒಂದೆಡೆ ಚುಚ್ಚಿಹೊಗಿಸುವ ವಿಧಾನ. ನರತಡೆಯ (ನರ್ವ್ ಬ್ಲಾಕ್ ) ಇಲ್ಲವೆವಹನ (ಕಂಡಕ್ಷನ್) ಅರಿವಳಿಕೆ. ಬೆನ್ನುಹುರಿಯಲ್ಲಿ ಚುಚ್ಚಿ ಹೊಗಿಸಿದ ಭಾಗಕ್ಕೆ ತಕ್ಕಂತೆಹೆಸರು ಪಡೇವ ಬಾಲದ (ಕಾಡಲ್), ಪಾವನಿಯ(ಸೇಕ್ರಲ್), ತೋಳಿನ ಹೆಣಿಲಿನ (ಬ್ರೇಕಿಯಲ್ಪ್ಲೆಕ್ಸಸ್), ಬೆನ್ನು ಹುರಿಯಂಥ (ಸ್ಪೈನಲ್) ವಿಶೇಷ ಮಾದರಿಯ ನರತಡೆಗಳಿವೆ. ಬಾಲದಅರಿವಳಿಕೆಯ ಮಾರ್ಪಾಟಾದದ್ದು ಎಡೆಬಿಡದ ವಿಧಾನ. ಅರಿವಳಿಕೆಯನ್ನು ಒಂದೇ ಸಮನಾಗಿಇರಿಸಿರಲು, ಬಾಲದ ಸಾಗುನಾಳದಲ್ಲಿ ಒಂದು ದಪ್ಪ ನಾಳಸೂಜಿಯನ್ನೋತೂರ್ನಳಿಕೆಯನ್ನೋ (ಕೆತೀಟರ್) ಚುಚ್ಚಿ ಇರಿಸಿ, ತಾವಿನ ಅರಿವಳಿಕವನ್ನು ಮತ್ತೆ ಮತ್ತೆಚುಚ್ಚಿಹೊಗಿಸುತ್ತಿರುವುದುಂಟು. ಮುಖ್ಯವಾಗಿ ಈ ವಿಧಾನ ಹೆರಿಗೆಯಲ್ಲಿ ಅನುಕೂಲಎನ್ನಬಹುದು.ಬೆನ್ನುಹುರಿಯ ದ್ರವದೊಳಗೆ (ಸ್ಪೈ ನಲ್ ಫೂಯಿಡ್) ತಾವಿನ ಅರಿವಳಿಕದ ದ್ರಾವಣವನ್ನುಚುಚ್ಚುವುದರಿಂದ ನರತಡೆಯ ಅರಿವಳಿಕೆಯ ಇನ್ನೊಂದು ಬಗೆಯಾದ ಬೆನ್ನುಹುರಿಯಅರಿವಳಿಕೆ ಆಗುತ್ತದೆ. ಚುಚ್ಚಿಬಿಡುವ ಮದ್ದಿನ ದ್ರಾವಣದ ಪ್ರಮಾಣ, ಸಾಂದ್ರತೆಗಳು,ರೋಗಿ ಇರುವ ಭಂಗಿಗಳಂತೆ ಯಾವ ಭಾಗದಲ್ಲಿ ನೋವರಿಳಿವುದೆಂದು ಖಚಿತವಾಗಿಹೇಳಬಹುದು. ಒಂದೇ ಬಾರಿ ಚುಚ್ಚಿ ಹೊಗಿಸುವ ವಿಧಾನದ ಮಾರ್ಪಾಟಾಗಿ ಎಡೆಬಿಡದಿರುವುದು ಬಂದಿದೆ. ಇದರಲ್ಲಿ ಅರಿವು ತಪ್ಪಿ ಹಾಗೇ ಇರುವಂತೆ ಆಗಾಗ್ಗೆ ಚುಚ್ಚುತ್ತಿರಲು,ನಾಳಸೂಜಿಯನ್ನೋ ತೂರ್ನಳಿಕೆಯನ್ನೋ ಬೆನ್ನ ಲ್ಲಿ ಚುಚ್ಚಿ ಅಲ್ಲೇ ಬಿಟ್ಟಿರುವುದುಂಟು. ಈವಿಧಾನದಲ್ಲಿ ಒಂದೊಂದು ಸಾರಿಗೂ ಸ್ವಲ್ಪವೇ ಮದ್ದನ್ನು ಕೊಡುವುದರಿಂದ ಕೆಡುಕಿಲ್ಲ.ಮದ್ದನ್ನು ಒಂದೇ ಬಾರಿಗೆ ಕೊಟ್ಟುಬಿಟ್ಟು ಬೇಗ ಅರಿವಳಿಕೆ ಕಳೆವ ಅನಾನುಕೂಲ ಇದರಲ್ಲಿಲ್ಲ.ಅದರಲ್ಲಿಯೂ ಸೋಂಕು ಹತ್ತಿರುವ ಜಾಗಗಳಲ್ಲಿ ಸೊಂಕು ಹರಡದಂತೆ ಇರಿಸಲು,ತಾವಿನ ಅರಿವಳಿಕ ದ್ರಾವಣಗಳೂಂದಿಗೆ ಪೆನಿಸಿಲಿನ್ನನ್ನು ಸೇರಿಸುವುದುಂಟು. ಪೆನಿಸಿಲಿನ್ನಿನಪ್ರಭಾವಕ್ಕೆ ಪ್ರೋಕೆಯ್ನ್ ಹೈಡೋಕ್ಲೋರೈಡ್ ಅಡ್ಡಿಯಾಗದು.ಹಲ್ಲಿನ ಚಿಕಿತೆಯಲ್ಲಿ ತಾವಿನ ಅರಿವಳಿಕೆಯ ಬಳಕೆ ಅಪಾರ. ಹಲ್ಲುಗಳನ್ನು ಕೀಳಲೂಹಲ್ಲು ನೋಯಿಸುವ ಚಿಕಿತ್ಸೆಯ ಅನೇಕ ವಿಧಾನಗಳಲ್ಲೂ ತಾವಿನ ಅರಿವಳಿಕದಿಂದಹಲ್ಲಿನ ನರಗಳ ಅರಿವಳಿಸುವುದುಂಟು. ಹಲ್ಲಿನ ಚಿಕಿತ್ಸೆಗಳಲ್ಲಿ ಮೈಯೆಲ್ಲದರ ಅರಿವಳಿಕೆಸುಮಾರು ಅರೆಶತಮಾನಗಳ ಕಾಲದಿಂದಲೂ ಬಳಕೆಯಲ್ಲಿದೆ. ತಾವಿನ ಅರಿವಳಿಕವನ್ನುಕೊಟ್ಟೋ ಕೊಡದೆಯೋ ಆಮ್ಲಜನಕದೊಂದಿಗಿನ ನೈಟ್ರಸ್ ಆಕ್ಸೈಡನ್ನು ಬಳಸುವುದೇಸಾಮಾನ್ಯ. ಇಷ್ಟಾದರೂ ಹಲ್ಲಿನ ಚಿಕಿತ್ಸಾಲಯದಲ್ಲೂ ರಕ್ತನಾಳಾಂತರದ ಅರಿವಳಿಕೆ ಕೂಡಬಳಕೆಗೆ ಬರುತ್ತಿದೆ. ಅರಿವಳಿಸುವುದಕ್ಕಿಂತಲೂ ನೋವರಿವಳಿಸಲು ಆಮ್ಲಜನಕದೊಂದಿಗಿನನೈಟ್ರಸ್ ಆಕೈಡ್ ಜೊತೆಯಲ್ಲಿ ಕೆಲವೇಳೆ ಟ್ರೈಕ್ಲೋರೊಯೆತಿಲೀನನ್ನೋ ವೈನಿತೀನನ್ನೋ ತುಸು ಸೇರಿಸುವುದುಂಟು. ತಾವಿನ ಅರಿವಳಿಸಿ ಹಲ್ಲುಗಳನ್ನು ಕಿತ್ತರೆ, ಇದಕ್ಕಾಗಿ ಮೈಯೆಲ್ಲದರಅರಿವಳಿಸಿದುದಕ್ಕಿಂತಲೂ ಹೆಚ್ಚು ನೋವಿಡುವುದೆಂದು ಇಂದಿನ ತಿಳಿವಳಿಕೆ.

ನೀರ್ಗಲ್ಲಾಗಿಸಿಕೆ

ಮೈಯಲ್ಲಿ ಒಂದು ಭಾಗದಲ್ಲಿ ತಣ್ಣಗೆ ನೀರ್ಗಲ್ಲಾಗಿಸುವುದೂಒಂದು ತೆರನ ಅರಿವಳಿಕೆ. ಇದನ್ನು ನೀರ್ಗಲ್ಲಾಗಿಸುವ (ರೆಫ್ರಿಜರೇಷನ್) ಅರಿವಳಿಕೆಎನ್ನುವುದುಂಟು. ನೀರ್ಗಲ್ಲಿನ ತಂಪಿನಲ್ಲಿ ನೋವಿನ ಅರಿವು ನರಗಳಲ್ಲಿ ಸಾಗದು. ಕೈಚರ್ಮ ಇಲ್ಲವೆ. ಕಾಲಿನ ಮೇಲೆ ಮಂಜುಗಡ್ಡೆ ಇರಿಸಿ ಸುಮಾರು 50 ಸೆಂ.ಗೇ.ಗೆ ತಂಪುಗೊಳಿಸಿಆ ಭಾಗವನ್ನು ಕತ್ತರಿಸಿ ಹಾಕಿದರೂ ನೋವು ತಿಳಿಯದಂತೆ ಮಾಡಬಹುದು. ಹೀಗೆಚರ್ಮದ ನಾಡಿಗಳನ್ನು (ಗ್ರಾಪ್ಟ್) ನೋವಿಲ್ಲದೆ ತೆಗೆದಿದ್ದಾರೆ; ಅದರಲ್ಲೂ ಸಿಹಿಮೂತ್ರರೋಗಿಗಳಲ್ಲಿ ಒಂದು ಅವಯವವನ್ನೇ ಶಸ್ತ್ರಕ್ರಿಯೆಯಿಂದ ಅಷ್ಟಾಗಿ ಅಪಾಯವಿಲ್ಲದಂತೆಕತ್ತರಿಸಿಹಾಕಲು ಸಾಧ್ಯ .

ಅರಿವಳಿಕೆಯ ಅಪಾಯಗಳು

ಉಸಿರೆಳೆತದ ಮೈಯೆಲ್ಲದರ ಅರಿವಳಿಕೆಗಾಗಿ ಅನೇಕವೇಳೆ ಹೊತ್ತಿ ಉರಿಯುವ, ಸಿಡಿವ ಅರಿವಳಿಕಗಳನ್ನು ಬಳಸಬೇಕಾಗುವುದು. ಇದುಬಲು ಅಪಾಯಕರ. ಏಕೆಂದರೆ, ರೋಗಿಯ ಪುಪ್ಪುಸಗಳೊಳಗೆ ಸಿಡಿಯಬಹುದು.ಈಥರ್, ಎತಿಲೀನ್, ಸೈಕೊಪ್ರೊಪೇನುಗಳಿಂದ ಹೀಗಾಗಬಹುದು. ಅರಿವಳಿಕ ಅನಿಲಗಳನ್ನುಬಳಸಲು ಅನಿಲದ ಉರುಳೆಯಿಂದ (ಸಿಲಿಂಡರ್) ಉಸಿರಾಟಿಕ ಚೀಲಕ್ಕೆ ಅನಿಲ ಹರಿಯುವುದನ್ನು ನಿಯಂತ್ರಿಸಲು ಯಂತ್ರವೊಂದನ್ನು ಬಳಸಲೇಬೇಕು. ಕೂಡಲೇ ಗಮನಕ್ಕೆ ಬರದೆಆಮ್ಲಜನಕ ತುಂಬಿದ್ದ ಉರುಳೆ ಬರಿದಾಗಿ ಬಿಡುವ ಅಪಾಯ ಯಾವಾಗಲೂ ಇರುವುದು.ಹೀಗೇನಾದರೂ ಆದರೆ, ರೋಗಿಗೆ ಉಸಿರು ಕಟ್ಟಿದಂತಾಗಿ ಸದ್ದಿಲ್ಲದೆ ಸಾಯಲೂಬಹುದು. ಅನಿಲದ ಉರುಳೆಯನ್ನು ಅದರ ಜಾಗದಲ್ಲಿ ಸರಿಯಾಗಿ ಇರಿಸದೆ, ರೋಗಿಗೆಬೇಕಾಗುವಷ್ಟು ಆಮ್ಲಜನಕ ಸಿಗದಂತೆ ಆಗಿರುವುದೂ ಉಂಟು. ಒಂದು ಅನಿಲದಉರುಳೆ ಬರಿದಾದಾಗ ಬೇರೊಂದು ಅನಿಲದ ಉರುಳೆಯನ್ನು ಅಲ್ಲಿ ಜೋಡಿಸಿದ್ದರಿಂದರೋಗಿಗಳು ಸತ್ತಿದ್ದಾರೆ. ಉರುಳೆಗಳಲ್ಲಿ ಅರಿವಳಿಕ ಅನಿಲಗಳು, ಆಮ್ಲಜನಕ ಇತ್ಯಾದಿಬಹಳಷ್ಟು ಒತ್ತಡದಲ್ಲಿ ಇರುತ್ತವೆ. ಇದರಿಂದ ಎಷ್ಟೋ ವೇಳೆ ಇವುಗಳಲ್ಲಿ ಕೈ ಹಾಕಿಬಳಸಲೂ ಕಷ್ಟವಾಗಬಹುದು. ಉರುಳೆಯ ಕವಾಟಗಳು ಮುರಿದುಬಿದ್ದರೆ ಉರುಳೆಬಿರುಸಿನ ಆಕಾಶಬಾಣದಂತೆ ಕೋಣೆಯಲೆಲ್ಲ ಉರುಳಾಡುತ್ತದೆ.ಟ್ರೈಕ್ಲೋರೊಯೆತಿಲೀನಿನಂಥ ಹಲವಾರು ಅರಿವಳಿಕಗಳನ್ನು ಪೂರ್ತಿ ಅರಿವಳಿಸುವಪ್ರಮಾಣಗಳಲ್ಲಿ ಕೊಟ್ಟರೆ ಗುಂಡಿಗೆಯ ಬಡಿತವೇ ನಿಲ್ಲಬಹುದು. ಹೀಗೆ ತಾವಿನ ಅರಿವಳಿಕೆಗಳವಿಚಾರದಲ್ಲಾದರೋ ರಕ್ತದ ಹರಿವನ್ನು ಸೇರುವ ತಾವಿನ ಅರಿವಳಿಕಗಳ ಪ್ರಮಾಣ ಸೆಳವು ಬರಿಸಲೂ ಕೊನೆಗೆ ಗುಂಡಿಗೆ ಬಡಿವುದದನ್ನೇ ನಿಲ್ಲಿಸಲೂ ಸಾಕಾಗಬಹುದು. ತಯೊಪೆಂಟೋನ್ಸೋಡಿಯಂನಂಥ ಒಂದು ಬಾರ್ಬಿಟುರೇಟನ್ನು ರಕ್ತನಾಳಾಂತರ ಕೂಡಲೇ ಕೊಡುವುದರಿಂದ ಸೆಳವುಗಳನ್ನು ತಡೆಯಬಹುದು. ಸೆಳವಿನಲ್ಲಿ ಉಸಿರಾಡದಂತಾಗುವುದೇ ರೋಗಿಸಾಯಲು ಮುಖ್ಯ ಕಾರಣವೆಂಬ ನಂಬಿಕೆಯಿಂದ ಆಮ್ಲಜನಕವನ್ನೂ ಕೊಡಬಹುದು.ರಕ್ತದ ಒತ್ತಡವೂ ತೀರ ಅಪಾಯಕರವಾಗಿ ಕುಸಿಯಬಹುದು. ತರಬೇತು, ಕೈಚಳಕಇಲ್ಲದವರು ಅರಿವಳಿಸಿದರೆ ಈ ಅನಾಹುತಗಳು ಆಗುತ್ತವೆ. ಅನುಭವೀ ಅರಿವಳಿಕಗಾರನಿಂದಹೀಗೆಂದೂ ಆಗದು.ತಾವಿನ ಅರಿವಳಿಕ ದ್ರಾವಣವನ್ನು ರೋಗಿ ಎಂಜಲೊಂದಿಗೆ ನುಂಗಿದರೂ ಗಂಟಲಲ್ಲಿಮೇಲ್ಮೈ (ಸರ್ಫೇಸ್) ಅರಿವಳಿಕವನ್ನು ಸಿಂಪಡಿಸುವುದರಿಂದ ಕೂಡ ಅಪಾಯ ಆಗಬಹುದು.ಏಕೆಂದರೆ ಹಾಗೆ ಸಿಂಪಡಿಸಲು ಬಳಸುವ ದ್ರಾವಣದ ಸಾಂದ್ರತೆ ತುಸು ಹೆಚ್ಚಾಗಿಯೇಇರುತ್ತದೆ. ಅಂದರೆ ಸ್ವಲ್ಪವೇ ದ್ರಾವಣದಲ್ಲಿ ಅರಿವಳಿಕ ವಸ್ತು ಹೊಲಿಕೆಯಲ್ಲಿ ಹೆಚ್ಚಾಗಿರುವುದು.ಗೊತ್ತಾದ ಕೆಲವು ತಾವಿನ ಅರಿವಳಿಕಗಳಿಗೆ ಎಲ್ಲೋ ಕೆಲವರು ಬಲು ಸುಲಭವಾಗಿಈಡಾಗುವರು. ಅಂಥವರನ್ನು ಅಪಾಯದಿಂದ ದೂರವಿರಿಸಲು ಹೆಚ್ಚು ಎಚ್ಚರದಿಂದಿರಬೇಕು.ಅರಿವಳಿಕದೊಂದಿಗೆ ಎಪಿನೆಪೀನನ್ನು (ಅಡ್ರಿನಲೀನ್) ಸೇರಿಸಿದರೆ ಅನೇಕ ವೇಳೆ, ಅದನ್ನುಸೇರಿಸದಿದ್ದರೆ ಆಗುವುದಕ್ಕಿಂತಲೂ ಹೆಚ್ಚು ಹೊತ್ತು ಒಂದೇ ತಾವಿನಲ್ಲಿ ಅರಿವಳಿಕ ಉಳಿವುದು.ಅಂದರೆ ಬೇಕಿರುವ ಒಂದೇ ಕಡೆ ಅರಿವಳಿಕದ ಪ್ರಭಾವ ಚನ್ನಾಗಿರುತ್ತ್ತದೆ. ಎಪಿನೆಪೀನ್ರಕ್ತನಾಳವನ್ನು ಕುಗ್ಗಿಸುವುದರಿಂದ ಆ ಜಾಗಕ್ಕೆ ರಕ್ತದ ಹರಿವು ತಗ್ಗಿ, ತಾವಿನ ಅರಿವಳಿಕವನ್ನುರಕ್ತ ಅಲ್ಲಿಂದ ಹೊರಸಾಗಿಸುವುದು ನಿಧಾನವಾಗುತ್ತದೆ. ಅದೇ ಹೊತ್ತಿನಲ್ಲಿ ಆ ಜಾಗದಿಂದರಕ್ತಸುರಿವುದೂ ತಗ್ಗುತ್ತದೆ. ಇದರಿಂದ ಶಸ್ತ್ರವೈದ್ಯನಿಗೆ ಎಷ್ಟೋ ಅನುಕೂಲ. ಆದರೂಶಸ್ತ್ರಕ್ರಿಯೆ ಆಗುವುದೆಂಬ ಅಂಜಿಕೆಯಿಂದ ಪುಕ್ಕಲು ರೋಗಿಗಳಲ್ಲೆ ಎಪಿನೆಫ್ರೀನ್ ಒಂದಿಷ್ಟುಮೈಯಲ್ಲೇ ತಯಾರಾಗುವುದು. ಅಂಥವರಿಗೆ ತಾವಿನ ಅರಿವಳಿಕದೊಂದಿಗೆ ಮತ್ತಷ್ಟುಎಪಿನೆಫ್ರೀನನ್ನು ಸೇರಿಸಿದರೆ ತಡೆಯದೆ ಕುಸಿದು ಬೀಳುವರು.

ಅರಿವಳಿಕದ ಆಯ್ಕೆ

ಅರಿವಳಿಕವನ್ನು ಆಯುವುದರಲ್ಲಿ ಅನೇಕ ಅಂಶಗಳಿವೆ.ಒಂದು ಗೊತ್ತಾದ ವಸ್ತುವನ್ನೋ ವಿಧಾನವನ್ನೋ ಬಳಸುವುದನ್ನು ತಿಳಿದವರು ಆಸ್ಪತ್ರೆಯಲ್ಲಿಯಾರೂ ಇಲ್ಲದಿದ್ದಲ್ಲಿ ಅಂಥ ವಸ್ತುವನ್ನೂ ವಿಧಾನವನ್ನೂ ಬಳಸುವುದು ಸುಲಭವಲ್ಲ.ಶಸ್ತ್ರಕ್ರಿಯೆ ಆಗುವಾಗ ರೋಗಿಯ ಸ್ನಾಯುಗಳು ತೀರ ಸಡಿಲವಾಗಿರಬೇಕು. ಅದಕ್ಕಾಗಿಬಲವಾದ ಅರಿವಳಿಕವನ್ನೋ ಜೊತೆಗೆ ಸ್ನಾಯು ಸಡಿಲಕವನ್ನೋ ಕೊಡಬೇಕಾಗಬಹುದು.ಇಂದಿನ ಅರಿವಳಿಕೆಯಲ್ಲಿ ಸ್ನಾಯು ಸಡಿಲಕಗಳ ಪಾತ್ರ ಹಿರಿದು. ತಯೋಪೆಂಟೋನ್ಸೋಡಿಯಂನಿಂದ ಸ್ನಾಯುಗಳು ಸಡಿಲಗೊಳವು. ನೈಟ್ರಸ್ ಆಕೈಡು, ಆಮ್ಲಜನಕಗಳಿಂದಇನ್ನೂ ಸರಿಯೆ. ಸಡಿಲತೆಗಾಗಿ ಸಕ್ಸಿನೈ ಲ್‍ಕೋಲಿನ್, ಟ್ಯೂಬೊಕ್ಯುರೇರಂಥ ಮದ್ದುUಳಬಳಕೆಯಿಂದ ತೊಡಕಿಲ್ಲ. ಇವೆರಡು ಮದ್ದುಗಳಿಂದ ಅರಿವಳಿಕಗಳ ಬಳಕೆಯೇಬದಲಾಯಿಸಿದೆ.ರಕ್ತನಾಳಾಂತರವಾಗಿ ಅರಿವಳಿಸುವುದು ಬಲು ಸುಲಭ. ಸಿರದೊಳಕ್ಕೆ ಸೂಜಿಹೊಕ್ಕಿತೆಂದರೆ ತೀರಿತು. ದ್ರಾವಣವನ್ನು ಒಳಹೊಗಿಸಲು ಎಂಥ ಚಾಲಾಕುತನವೂ ಬೇಕಿಲ್ಲ;ಆದರೆ ಎಷ್ಟು ಮದ್ದನ್ನು ಎಷ್ಟುಬೇಗನೆ ಕೊಡಬೇಕೆಂದು ಸ್ವಲ್ಪವಾದರೂ ಅಂದಾಜುಮಾಡುವಂತಿರಬೇಕು. ಶಸ್ತ್ರಕ್ರಿಯೆ ಮಾಡಿಸಿಕೊಳ್ಳುವ ಹಸುಗೂಸುಗಳಿಗೆ ಗುದನಾಳಅರಿವಳಿಕೆಯೇ ಸರಿ. ಮೆಂಡಿಕೆಗಳು (ಟಾನ್ಸಿಲ್ಸ್), ಮೂಗಳೆಗಳನ್ನು (ಅಡೆನಾಯ್ಡ್ಸ್)ತೆಗೆಸಬೇಕಿದ್ದರಂತೂ ಇನ್ನೂ ಅನುಕೂಲ. ಏಕೆಂದರೆ ಆಗ ಮಗು ಹಾಸಿಗೆಯಲ್ಲೋತೊಟ್ಟಿಲಲ್ಲೋ ಮದ್ದಿನಿಂದ ಮಲಗಿದ್ದಂತೆಯೇ ಶಸ್ತ್ರಕ್ರಿಯೆ ಕೋಣೆಗೆ ಸಾಗಿಸಿ, ಅಲ್ಲಿಉಸಿರೆಳೆತದ ಅರಿವಳಿಕವನ್ನು ಕೊಡಬಹುದು. ಉಸಿರಾಟ ಸಲೀಸಾಗಲೆಂದು ಉಸಿರ್ನಾಳದೊಳಗೆ ಒಂದು ರಬ್ಬರ್ ಕೊಳವೆಯನ್ನು ತೂರಿಸಿಡುವುದು ಸಾಮಾನ್ಯ. ಮಗು ತನ್ನಕೋಣೆಗೆ ಹಿಂದಿರುಗಿದಾಗ, ಅಲ್ಲಿಂದ ಹೊರಟದ್ದೇ ಅದಕ್ಕೆ ತಿಳಿಯದು. ಇದರಿಂದಶಸ್ತ್ರಕ್ರಿಯೆ ಆಗುವುದರ ಅಂಜಿಕೆಯೇ ಹುಟ್ಟದು.ಇಷ್ಟಾದರೂ, ಮೈಯೆಲ್ಲದರ ಅರಿವಳಿಕವನ್ನು ಕೊಡಲು ಅರಿವಳಿಕೆಗಾರ ಹಿಂದೆಗೆವಸಂದರ್ಭಗಳೂ ಇವೆ. ಉದಾಹರಣೆಗೆ, ಒಬ್ಬ ರೋಗಿಯ ಗುಂಡಿಗೆ ತೀರ ಕ್ರಮಗೆಟ್ಟಿರುವಾಗ,ಆಮ್ಲಜನಕದ ಕೊರತೆಯಾದರೆ ಇಲ್ಲವೇ ಅವನ ರಕ್ತದಲ್ಲಿ ಸಾಕಷ್ಟು ಆಮಜನಕ ಇರದಿದ್ದರೆಗುಂಡಿಗೆಯೇ ನಿಂತುಬಿಡಬಹುದು. ಅದೇ ಬೆನ್ನು ಹುರಿಯ ಅರಿವಳಿಕೆಯಾಗಿದ್ದರೆ,ರಕ್ತದ ಒತ್ತಡ ತೀರ ಇಳಿಯದ ತನಕ ಯಾವ ತೊಂದರೆಯೂ ಕಾಣದು. ಆದರೆ ಇಂಥಅರಿವಳಿಕೆಯಲ್ಲಿ ಎದೆ ಗೂಡಿನ ಶಸ್ತ್ರಕ್ರಿಯೆ ಸಾಧ್ಯ ವಿಲ್ಲ. ಏಕೆಂದರೆ ಎದೆ ಮಟ್ಟಕ್ಕೇರಿಸಿದರೆ,ವಪೆಯೂ ಎದೆಗೂಡಿನ ಸ್ನಾಯುಗಳೂ ಕುಸಿದುಬಿಟ್ಟು ಉಸಿರು ನಿಂತು ಹೋಗುತ್ತದೆ.

ಬಳಕೆಯ ವಿಧಾನಗಳು

ಅರಿವಳಿಕೆಯೊಂದಿಗೆ ಬಹುವಾಗಿ ಬಳಸುವ ಕ್ರಮವೆಂದರೆ,ರೋಗಿಗೆ ಚೆನ್ನಾಗಿ ವಿಶ್ರಾಂತಿ ಸಿಗುವಂತೆ ಶಸ್ತ್ರಕ್ರಿಯೆಯ ಹಿಂದಿನ ರಾತ್ರಿ ಹೊತ್ತಿನ ಮದ್ದುಕೊಡುಗೆ, ಕೆಮ್ಮನ್ನು ತಪ್ಪಿಸಲು, ಹಿಂದಿನ ಸಂಜೆಯಿಂದ ಮಾರನೆಯ ದಿನ ಶಸ್ತ್ರಕ್ರಿಯೆಆಗುವ ತನಕ ಹೊಗೆ ಬತ್ತಿ ಸೇದಕೂಡದೆಂದು ರೋಗಿಗೆ ಹೇಳಲಾಗುತ್ತದೆ. ಆಮೇಲೆಶಸ್ತ್ರಕ್ರಿಯೆಯ ಮುನ್ನ ಸಾಕಾದಷ್ಟು ಮದ್ದು ಕೊಡುವುದರಿಂದ ರೋಗಿ ಸಲವೂ ಉದ್ರೇಕಗೊಳ್ಳದೆತುಸು ಮಂಪರ ಬಂದ ಹಾಗಿರಬಹದು. ಹೀಗೆ ಮೊದಲೇ ಕೊಟ್ಟ ಮದ್ದುಗಳಿಂದನೋವಿನ ಭಾರ ಆಗಲೇ ಎಷ್ಟೋ ಇಳಿದಿರುವುದು. ಶಸ್ತ್ರಕ್ರಿಯೆ ಕೋಣೆಯಲ್ಲಿ ರಕ್ತನಾಳಾಂತರತಯೋಪೆಂಟೋನ್ ಸೋಡಿಯಂ ಕೊಟ್ಟು, ಸಕ್ಸಿನೈ ಲ್ ಕೋಲೀನನ್ನೂ (ಸ್ಕೋಲೀನ್)ಕೊಡುತ್ತಾರೆ. ಹಲವೇಳೆ ಉಸಿರ್ನಾಳದೂಳಗೆ ರಬ್ಬರ್ ಕೊಳವೆಯನ್ನು ಇರಿಸುವರು. ಈಕೊಳವೆಯ ಮೂಲಕ ನೈಟ್ರಸ್ ಆಕೈಡ್, ಆಮ್ಲಜನಕಗಳು ಸಾಗುತ್ತಿರುತ್ತವೆ. ತಯೊಪೆಂಟೋನ್ಸೋಡಿಯಮ್ಮನ್ನೂ ಟ್ಯೂಬೊಕ್ಯುರಾರೆನ್ನೂ ಆಗಾಗ್ಗೆ ತುಸು ಕೊಡುತ್ತಿರಬಹುದು. ಉಸಿರಾಟತೀರ ಇಳಿವುದನ್ನು ಬೇರೆ ಮದ್ದುಗಳಿಂದ ತಡೆಯಬಹುದು.ಇಂಗ್ಲೆಂಡಿನಲ್ಲಿ, ಜೆ.ಟಿ. ಕೋವರ್ (1825-82) ಬೇಗನೆ ಅರಿವಳಿಸುವ, ಬಿಟ್ಟ ಉಸಿರನ್ನೆಮತ್ತೆ ಸೇದಿಸುವ ಸಲಕರಣೆಯನ್ನು ತಯಾರಿಸಿದ, ನೈಟ್ರಸ್ ಆಕೈಡು ಆಮ್ಲಜನಕಗಳನ್ನುಬೇರೆ ಬೇರೆ ಪ್ರಮಾಣಗಳಲ್ಲಿ ಬೆರೆಸಿಡುವ ಸಲಕರಣೆಯನ್ನು ಕೊಟ್ಟವನು ಸರ್ ಫ್ರೆಡರಿಕ್ಹೆವಿಟ್ (1892). ಅರಿವಳಿಕೆ ಮೊದಲು ಬಳಕೆಗೆ ಬಂದಾಗ, ರೋಗಿಯ ಮೊಗದಮೇಲಿರಿಸಿದ ತಂತಿಕಟ್ಟಿಗೆ ಹೊದಿಸಿದ ಜಾಳರಿವೆಯ (ಗಾಸ್) ಮುಸುಕಿನ ಮೇಲೆಕ್ಲೋರೋಫಾರ್ಮ್, ಈಥರನ್ನು ಸುರಿವುದು ವಾಡಿಕೆಯಲ್ಲಿತ್ತು. ಈಚೆಗೆ ಹೊಸ ಕಾರಕಗಳುಬಂದ ಮೇಲೆ ಮೈಯೆಲ್ಲದರ ಅರಿವಳಿಕೆಯನ್ನು ತೋರಬಲ್ಲ ಸುಧಾರಿಸಿದ ಯಂತ್ರಗಳುಬಳಕೆಗೆ ಬಂದಿವೆ.

ಸಂಬಂಧಿತ ಕಾರಕಗಳು

ಬಾರ್ಬಿಟುರೇಟಿಂದ ವಿಷವೇರಿದ್ದಾಗ, ಅದರ ಒಂದುವಿಷಮುರಿಯಾಗಿ ಗ್ಲುಟೇರಿಮೈಡಿನ (ಮೆಗಿಮೈಡ್) ಬಳಕೆಯನ್ನು ಷಾ (1854) ಜಾರಿಗೆತಂದ. ಶಸ್ತ್ರಕಿಯೆಯ ಅರಿವಳಿಕೆಯನ್ನು ಕೊನೆಗೊಳಿಸುವಾಗ, ಇದು ಉಸಿರಾಟವನ್ನುಚೋದಿಸುವುದರಿಂದ ಅರಿವಳಿಕೆಯಲ್ಲೂ ಈಚೆಗೆ ಬಳಕೆಗೆ ಬಂದಿದೆ. ಬಾರ್ಬಿಟುರೇಟುಗಳಿಂದ ಅರಿವಳಿಸುವುದು ಗೊತ್ತಿರುವುದರೊಂದಿಗೆ ರಕ್ತನಾಳಾಂತರ ಅರಿವಳಿಕೆಯನ್ನುಇಂಥ ಇನ್ನೊಂದು ಬಾರ್ಬಿಟುರೇಟಿಂದಲೇ ಕೊಡುವುದು ಸಾಧ್ಯ ಎನ್ನುವುದು ಒಂದುಹೊಸ ಕಲ್ಪನೆಗೆ ಎಡೆಗೊಟ್ಟಿತು. ಇಂಥ ಕಟ್ಟು ಮದ್ದುಗಳು (ಆಂಟಿಡೋಟ್ಸ್) ಇನ್ನೂ ಇವೆ.ಇವುಗಳ ಬಳಕೆಯಿಂದ ಹಿಂದೆ ಕೊಡುತ್ತಿದ್ದ ಪ್ರಮಾಣಗಳಿಗಿಂತಲೂ ಇನ್ನೂ ಹೆಚ್ಚಿನಪ್ರಮಾಣಗಳಲ್ಲಿ ಅಪಾಯ ತೊಡಕುಗಳಿರದೆ ಅನೇಕ ಗೊತ್ತಾದ ಅರಿವಳಿಕ ಮದ್ದುಗಳಕೊಡುಗೆ ಸಾಧ್ಯ ವಾಯಿತು. ಉಸಿರಾಟದ ತುಸು ಚೋದಕವಾದ ಅಮಿಫಿನಜೋಲಿಂದತೀವವಾದ (ಅಕ್ಯೂಟ್) ನೋವನ್ನು ತಡೆಯಲು, ನೋವರಿವಳಿಕ ಮದ್ದುಗಳನ್ನು ಇನ್ನೂಬೇಕಾದಷ್ಟು ಕೊಡಲೂ ಸಾಧ್ಯ .ಕೆಲವು ತಾಂತ್ರಿಕ ಉಪಾಯಗಳಿಂದ ಹೆಚಿನ ಅನುಕೂಲವಿದೆ. ಉಸಿರ್ನಾಳದೂಳಕ್ಕೆತೂರಿಸುವ ಕೊಳವೆ ಇಳಿದಿರುವ ಮಟ್ಟವನ್ನು ಸೂಚಿಸುವ ಗೆರೆಗಳನ್ನು ಹೊರಗೆಗುರುತಿಸಿರುವುದುಂಟು. ದನಿತಂತುಗಳ ನಡುವೆ ಇದು ಇದ್ದರೆ ಕೊಳವೆ ಮೇಲಿನಗುರುತು ಹೊರಗಾಣುತ್ತಿರುವುದು. ಹಿಂದಿನ ಕಾಲದಲ್ಲಿ ಈ ಗುರುತಿಲ್ಲದೆ ಕೊಳವೆಯನ್ನುತೀರ ಆಳಕ್ಕೆ ತಳ್ಳುತ್ತಿದ್ದರು.ಅನ್ನನಾಳದ ಮೂಲಕ ಸ್ಟೆತಸ್ಕೋಪನ್ನೂ (ಎದೆದರ್ಶಕ) ತೂರಿಸಿಡುವುದರಿಂದಗುಂಡಿಗೆ, ಪುಪ್ಪುಸಗಳು ಇಲ್ಲವೇ ಇವೆಲ್ಲವಲ್ಲೂ ಆಗುವ ತೊಡುಕುಗಳನ್ನು ಕೂಡಲೇಕಂಡುಕೊಳ್ಳುವುದು ಬಲು ಅನುಕೂಲ.ಅರಿವಳಿಕಗಳಿಗೆ ಸಂಬಂಧಿಸಿದ ಇತರ ಮದ್ದುಗಳೂ ಇವೆ. ಪ್ರೊಕೇನ್ ಹೈಡ್ರೋಕ್ಲೋರೈಡಿಗೆಸಲ್ಫೋನಮೈಡ್ ರೋಧಕ ಪ್ರಭಾವವಿದೆ. ಅಲ್ಲದೆ ಸಲ್ಫೋರಮೈಡ್ ರೋಗಚಿಕಿತ್ಸೆ ಪಡೆವವರಲ್ಲಿಉಸಿರೆಳೆತದ ಅರಿವಳಿಕಗಳನ್ನು ಚೆನ್ನಾಗಿ ಕೊಡಬಹುದು.ಅರಿವಳಿಕಗಳೂಂದಿಗೆ 1942ರಲ್ಲಿ ಮೊದಲು ಬಳಸಿದ ಕ್ಯುರಾರಿ (ಡಿ-ಟ್ಯೂಬೊಕ್ಯುರರೀನ್, ಇಂಟೊಕಾಸ್ಟ್ರಿನ್) ಅರಿವಳಿಕವಲ್ಲ, ಇದು ಸ್ನಾಯುಗಳನ್ನು ಮಾತ್ರ ಇನ್ನೂ ಚೆನ್ನಾಗಿಸಡಿಲಗೊಳಿಸುವುದು. ಇದನ್ನು ರಕ್ತನಾಳಾಂತರವಾಗಿಯೂ ಸ್ನಾಯುವಿನಲ್ಲೂ ಕೊಡಬಹುದು.ಬಾಯಲ್ಲಿ ನುಂಗಿದರೆ ಫಲವಿಲ್ಲ. ಪ್ರಮಾಣ ಮೀರಿದರೆ, ಇಲ್ಲವೆ. ಬೇಗನೆ ಚುಚ್ಚಿಬಿಟ್ಟರೆಉಸಿರಾಟ ಕುಂದುತ್ತದೆ. ಇಲ್ಲವೇ ನಿಂತೇ ಹೋಗುವುದು, ಕೃತಕ ಉಸಿರಾಟವೂನಿಯೋಸ್ಟಿಗ್ಮಿನೂ, ಕೂಡಲೇ ವರ್ತಿಸುವ ಟೆನಿಲಾನೂ ಟ್ಯೂಬೊಕ್ಯುರಾರೀನಿಗೆ ಕಟ್ಟುಮದ್ದುಗಳು(ಆಂಟಿಡೊಟ್ಸ್), (ನೋಡಿ- ಕ್ಯುರೇರ್)ಅರಿವಳಿಕೆಗೂ ಜೀವಾತುಗಳಿಗೂ ಇರುವ ಸಂಬಂಧದ ವಿಷಯ ಶೋಧನೆಯಾಗಿದೆ.ಅರಿವಳಿಸಲು ಬೇಕಾಗುವ ಹೊತ್ತು ತೇರಿಕೊಳ್ಳುವ ಹೊತ್ತೂ ಸಿ ಜೀವಾತುಕೊರೆಯಲ್ಲಿಹೆಚ್ಚುತ್ತವೆ. ಜೀವಕಣದ ಉಸಿರಾಟದ ತಂತ್ರ ಚೆನ್ನಾಗಿ ಕೆಲಸಮಾಡುತ್ತಿರಲು ರಿಬೋಫ್ಲೇವಿನ್ಜೀವಾತು ಬೇಕು.ಶಸ್ತ್ರಕ್ರಿಯೆ ಆಗುವಾಗ ಆಗಬಹುದಾದ, ಅದರ ಮುಂಚೆಯೂ ಇರುವ ಸುಸ್ತುಬೀಳಿಸುವ ಆಘಾತವನ್ನೂ (ಷಾಕ್) ಆಳವಾಗಿ ಪರಿಶೀಲಿಸಲಾಗಿದೆ. ಅದನ್ನು ತಪ್ಪಿಸಲುಚಿಕಿತ್ಸೆ ಮಾಡಲೂ ರೋಗಿಯನ್ನು ಚೆನ್ನಾಗಿ ಚೇತರಿಸುವ ಸಾಧನಗಳಿವೆ. ರಕ್ತತುಂಬಿಕೆರಕ್ತ ರಸದ (ಪ್ಲಾಸ್ಮ ) ತುಂಬಿಕೆ, ರಕ್ತರಸದ ಬದಲಿ ಇಲ್ಲವೆ. ರಕ್ತರಸವನ್ನು ಹಿಗ್ಗಿಸುವುವು.ಇವೆಲ್ಲ ಶಸ್ತ್ರಕ್ರಿಯೆಯಿಂದೇಳುವ ಆಘಾತವನ್ನು ತೀರ ತಗ್ಗಿಸಿವೆ.ಹಲವೇಳೆ ಅನಿಲರೋಗಚಿಕಿತ್ಸೆ ಅರಿವಳಿಕೆಗಾರನ ಉಸ್ತುವಾರಿಯಲ್ಲಿ ಆಗುತ್ತದೆ.ಅರಿವಳಿಕೆ ಮುಗಿದಮೀಲೆ ಆಮ್ಲಜನಕ, ಇಂಗಾಲದ ಡೈಯಾಕೈಡೊಂದಿಗೆ ಆಮ್ಲಜನಕಇಲ್ಲವೇ ಹೀಲಿಯಂ ಕೊಡುವುದರಿಂದ ತಾಕುತೊಡಕುಗಳನ್ನು ತಪ್ಪಿಸುವುದರಲ್ಲಿಅನುಕೂಲ,ಹೀಲಿಯಂ, ಆಮ್ಲಜನಕ, ಇಂಗಾಲದ ಡೈಯಾಕ್ಸೈಡುಗಳು ಅನಿಲರೋಗ ಚಿಕಿತ್ಸೆಯಲ್ಲೇ ಅಲ್ಲದೆ ಅರಿವಳಿಕಗಳೊಂದಿಗೂ ಬಳಕೆಗೆ ಬರುತ್ತ್ತವೆ.ನಿದಾನದಲ್ಲಿ, ಶಸ್ತ್ರಕ್ರಿಯೆ ಮುಂಚೆಯೂ ಆಮೇಲೂ ಉಸಿರ್ನಾಳ ಪಂಗುಸಿರ್ನಾಳಗಳಿಂದ (ಬ್ರಾಂಕಸ್) ಲೋಳೆ ದವವನ್ನು ಹೀರಿ ತೆಗೆವುದರಿಂದ ಪುಪ್ಪುಸದ ಕಟ್ಟುನಿಟ್ಟಿನತಾಕುತೊಡಕುಗಳನ್ನು ತಗ್ಗಿಸಬಹುದು. ಶಸ್ತ್ರಕ್ರಿಯೆ ಆದ ಕೂಡಲೇ ರೋಗಿಯನ್ನುಗಮನಿಸುತ್ತಿರಲು, ಕಣ್ಣರಿಕೆಗಾಗಿರುವ ಬೇರೆ ಕೋಣೆಗಳು ಕೆಲವು ಆಸ್ಪತ್ರೆಗಳಲ್ಲಿವೆ. ರೋಗಿಯರಕ್ತ ಸುತ್ತಾಟ ಉಸಿರಾಟಗಳನ್ನು ಚೆನ್ನಾಗಿ ಬಲ್ಲವನಾದ್ದರಿಂದ ಅರಿವಳಿಕೆಗಾರನೇ ಹಲವೇಳೆಮರುಚೇತರಿಸುವನು. ಅರಿವಳಿಕೆಶಾಸ್ರ್ತಕ್ಕೆ ಸಂಬಂಧಿಸಿದ ಅಂಗಕೆಲಸಶಾಸ್ರ್ತ್ದಲ್ಲಿನ ಶೋಧನೆಗಳಿಂದ ಎಷ್ಟೋ ವಿಷಯಗಳು ಗೊತ್ತಾಗುತ್ತಿವೆ. ಇಂದಿನ ಅರಿವಳಿಕೆ ಶಾಸ್ರದ ಮುನ್ನಡೆಗಳಿಂದಾಗಿಈಗ ಯಾವ ಚಿಂತೆ, ಕಳವಳ, ಅಂಜಿಕೆ, ನೋವು ಆಮೇಲಿನ ತೊಡಕುಗಳು ಇವೇನನ್ನೂಅನುಭವಿಸದೆ ರೋಗಿ ಶಸ್ತ್ರಕ್ರಿಯೆ ಮಾಡಿಸಿಕೊಳ್ಳಬಹುದು.(ಡಿ.ಎಸ್.ಎಸ್.)

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ