ಅಜ್ಜಂಪುರ ಸೀತಾರಾಮ್

ಆನಂದ ಕಾವ್ಯನಾಮದಲ್ಲಿ ಸಾಹಿತ್ಯರಚನೆ ಮಾಡಿದ ಅಜ್ಜಂಪುರ ಸೀತಾರಾಮ್ ರವರು ೧೯೦೨, ಅಗಸ್ಟ್ ೧೮ ರಂದು ತಮ್ಮ ತಾಯಿಯ ತವರೂರಾದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ವೆಂಕಟಲಕ್ಷಮ್ಮ. ತಂದೆ ಅನಂತಯ್ಯನವರು ಶಿವಮೊಗ್ಗಾದಲ್ಲಿ ಪ್ರಸಿದ್ಧ ವಕೀಲರಾಗಿದ್ದರು. ಅಲ್ಲದೆ ಮೈಸೂರು ಸಂಸ್ಥಾನದ ಅಸೆಂಬ್ಲಿ ಸದಸ್ಯರು ಅಗಿದ್ದರು. ಅನಂತಯ್ಯನವರ ಸಾರ್ವಜನಿಕ ಸೇವೆಗಾಗಿ ಮೈಸೂರು ಮಹಾರಾಜರು ಚಿನ್ನದ ಪದಕವನ್ನಿತ್ತು ಸನ್ಮಾನಿಸಿದ್ದರು.

ಶಿಕ್ಷಣ

ಪ್ರಾರಂಭಿಕ ಶಿಕ್ಷಣವನ್ನು ಶಿವಮೊಗ್ಗಾದಲ್ಲಿಯೆ ಮುಗಿಸಿದ ಸೀತಾರಾಮ್ ೧೯೨೪ ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ವಿಜ್ಞಾನ ಪದವಿಗೆ ಸೇರಿದರು. ೧೯೩೧ ರಲ್ಲಿ ತಂದೆಯ ಬಲವಂತದಿಂದಾಗಿ ಕಾನೂನು ಪದವಿ ಪಡೆಯಲು ಪುಣೆಗೆ ತೆರಳಿದರು. ಆದರೆ ಪರೀಕ್ಷೆ ಮುಗಿಸದೆ ಹಿಂತಿರುಗಿಬಂದು ಸರಕಾರದ ರೇಷ್ಮೆ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡರು.

ವಿವಾಹ ಹಾಗು ಕುಟುಂಬ ಜೀವನ

೧೯೨೫ ರಲ್ಲಿಯೆ ಸೀತಾರಾಮ್ ಇವರ ವಿವಾಹ ಮದರಾಸಿನಲ್ಲಿ (ಈಗಿನಚೆನ್ನೈ )ಹೈಕೋರ್ಟ ವಕೀಲರಾಗಿದ್ದ ಸೀತಾರಾಮಯ್ಯನವರ ಮಗಳು ಪಾರ್ವತಿಯೊಡನೆ ಜರುಗಿತು. ಆದರೆ ಮದುವೆಯಾದ ವರ್ಷದಲ್ಲೆ ವಿಷಮಶೀತಜ್ವರದಿಂದ ಬಳಲಿದ ಪಾರ್ವತಿ ಇನ್ನಿಲ್ಲವಾದಳು.೧೯೨೭ ರಲ್ಲಿ ಸೀತಾರಾಮ್ ಶಾರದಮ್ಮನವರ ಜೊತೆ ಮದುವೆಯಾಗಿ, ಮುಂದೆ ನಾಲ್ಕು ಮಕ್ಕಳನ್ನು (ಪಾರ್ವತಿ, ಲೀಲಾವತಿ, ಆನಂದ, ವಿಜಯಕುಮಾರ) ಪಡೆದರು. ಇವರಲ್ಲಿ ಎರಡನೆಯ ಮಗಳು ಲೀಲಾವತಿ ಮೂರು ವರ್ಷದ ಮಗುವಾಗಿದ್ದಾಗಲೆ ಮೆದಳುಜ್ವರಕ್ಕೆ ತುತ್ತಾಗಿ ಮರಣವನ್ನಪ್ಪಿದಳು.೧೯೫೨ ರಲ್ಲಿ ಇವರ ಅಳಿಯ ಚಂದ್ರಶೇಖರ ಅಪಘಾತದಲ್ಲಿ ನಿಧನರಾದರು. ೧೯೭೮ ರಲ್ಲಿ ಪತ್ನಿ ಶಾರದಮ್ಮ ತಿರಿಕೊಂಡರು. ೧೯೮೬ರಲ್ಲಿ ಹಿರಿಯ ಮಗ ಆನಂದ ತೀರಿ ಹೋದ. ಇವೆಲ್ಲ ಆಘಾತಗಳ ನಡುವೆಯೂ ಸೀತಾರಾಮ್ ತಮ್ಮ ಸುತ್ತಲಿದ್ದವರಿಗೆ ಸರಸ ಹಾಸ್ಯವನ್ನೆ ಹಂಚಿದರು.

ನಿಧನ

ಅಜ್ಜಂಪುರ ಸೀತಾರಾಮ್ ೧೯೬೩ ರಲ್ಲಿ ನಿಧನರಾದರು.

ಸಾಹಿತ್ಯ ಕೃತಿಗಳು

ಕಥಾಸಂಕಲನ

  • ಕೆಲವು ಕಥೆಗಳು (೧೯೩೦)
  • ಭವತಿ ಭಿಕ್ಷಾಂದೇಹಿ (೧೯೩೦)
  • ಮಾಟಗಾತಿ (೧೯೩೪)
  • ಚಂದ್ರಗ್ರಹಣ ಮತ್ತು ಇತರ ಕತೆಗಳು (೧೯೩೯)
  • ಸ್ವಪ್ನಜೀವಿ ಮತ್ತು ಇತರ ಕತೆಗಳು (೧೯೪೫)
  • ಜೋಯಿಸರ ಚೌಡಿ (೧೯೪೫)
  • ಬೇವು ಬೆಲ್ಲ (೧೯೫೧)
  • ಗ್ಯಾಸ್ಕೋಯಿನ್ (೧೯೫೧)
  • ಈಸೋಪನ ನೀತಿಕತೆಗಳು (೧೯೫೧)
  • ಸಂಸಾರಶಿಲ್ಪ ಮತ್ತು ಇತರ ಕತೆಗಳು (೧೯೫೨)
  • ಅಶ್ರು-ಬಾಷ್ಪ (೧೯೫೪)
  • ಶಿಲ್ಪಿ ಸಂಕುಲ (೧೯೫೫)
  • ಆನಂದರ ಆಯ್ದ ಕತೆಗಳು (೧೯೮೫)

ನಾಟಕಗಳು

  • ದಹನಚಿತ್ರ (೧೯೪೫)
  • ವೀರಯೋಧ (೧೯೫೬)
  • ಸುಶೀ ವಿಜಯ (೧೯೬೩)

ಪ್ರಬಂಧ ಸಂಕಲನ

  • ಆನಂದ ಲಹರಿ (೧೯೫೪)

ವಚನಚಿತ್ರ

  • ಪಕ್ಷಿಗಾನ (೧೯೪೭)

ಕಾದಂಬರಿಗಳು

  • ರಾಬಿನ್ಸನ್ ಕ್ರೂಸೋ ಕತೆ (೧೯೫೦)

(ಮೂಲ: ಡೇನಿಯಲ್ ಡಿಫೋ ಬರೆದ ಕಾದಂಬರಿ)

  • ಸಿರಿದ್ವೀಪ (೧೯೫೫)

(ಮೂಲ: ರಾಬರ್ಟ ಲೂಯಿ ಸ್ಟೀವನ್ಸನ್ ಬರೆದ ' ಟ್ರೆಜರ್ ಐಲ್ಯಾಂಡ ' )

  • ಪುರುಷಾಮೃಗ (೧೯೫೬

(ಮೂಲ: ರಾಬರ್ಟ ಲೂಯಿ ಸ್ಟಿವನ್ಸನ್ ಬರೆದ ' ದಿ ಸ್ತ್ರೇಂಜ್ ಕೇಸ್ ಅಫ್ ಡಾ:ಜೆಕಿಲ್ ಎಂಡ್ ಮಿಸ್ಟರ್ ಹೈಡ್)

  • ಉಗ್ರಪರೀಕ್ಷೆ (೧೯೫೮)

(ಮೂಲ: ಟಾಲ್‍ಸ್ಟಾಯ್ ಬರೆದ ಕಾದಂಬರಿ ' ಆರ್ಡಿಯಲ್ ' ಇದರ ೩ ಭಾಗಗಳು)

  • ಲಿಯೊ ಟಾಲ್‍ಸ್ಟಾಯ್ (೧೯೫೮)

(ಮೂಲ: ಲಿಯೊ ಟಾಲ್‍ಸ್ಟಾಯ್ ರವರ ಆತ್ಮಚರಿತ್ರೆ)

  • ಶಾಲಾ ಉಪಾಧ್ಯಾಯಿನಿಯೊಬ್ಬಳ ದಿನಚರಿ (೧೯೬೨)

(ಮೂಲ: ಎಫ್.ವಿಗ್ದೊರೊವಾ ಅವರ ರಶಿಯನ್ ಭಾಷೆಯ ಇಂಗ್ಲಿಷ ಅನುವಾದ: ಡೈರಿ ಆಫ್ ಎ ಸ್ಕೂಲ ಟೀಚರ್)

  • ರಕ್ಷಾಕವಚ (೧೯೬೩)

(ಮೂಲ: ಸರ್ ವಾಲ್ಟರ್ ಸ್ಕಾಟ್ ಬರೆದ ಕಾದಂಬರಿ: ದ ಟಾಲಿಸ್ಮಾನ್)

  • ಐವಾನ್ ಹೊ (೧೯೬೩)

(ಮೂಲ: ಸರ್ ವಾಲ್ಟರ್ ಸ್ಕಾಟ್ ಬರೆದ ಕಾದಂಬರಿ: ಐವಾನ್ ಹೊ)

ಸನ್ಮಾನ

  • ಸೆಂಟ್ರಲ್ ಕಾಲೇಜು, ಬೆಂಗಳೂರು ಏರ್ಪಡಿಸಿದ

ಮುದ್ದಣ ಕವಿ ಸ್ಮಾರಕ ಕಥಾ ಸ್ಪರ್ಧೆಯಲ್ಲಿ ಆನಂದ ಬರೆದ ಕತೆಗೆ( ನಾವೂ ಹಾಗೆಯೆ) ಸ್ವರ್ಣಪದಕ ಬಹುಮಾನ.

  • ಸಣ್ಣ ಕತೆ ಬರಹಗಾರರ ಸಂಘದ ಆಶ್ರಯದಲ್ಲಿ, ಕನ್ನಡ ಸಾಹಿತ್ಯ ಪರಿಷತ್ನಲ್ಲಿ ನಡೆದ ಸಣ್ಣ ಕತೆಗಾರರ ಮೂರನೆಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವ.

ಉಲ್ಲೇಖ

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ